<p><strong>ಎಲ್ಲ ಜಾತಿಯವರಿಗೂ ಕೆಲ ವಿಶೇಷ ಸವಲತ್ತು: ಹಾವನೂರು ಶಿಫಾರಸು</strong></p>.<p>ಬೆಂಗಳೂರು, ಏ. 16– ವಾರ್ಷಿಕ ವರಮಾನ 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರುವ ಯಾವುದೇ ಜಾತಿಯವನಾಗಲೀ ಅವನಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ‘ಕೆಲವು ವಿಶೇಷ ಸವಲತ್ತು’ಗಳನ್ನು ಒದಗಿಸುವ ಶಿಫಾರಸುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಮಾಡಲಿದೆ.</p>.<p>‘ರಾಜ್ಯದ ಯಾವುದೇ ಅರ್ಹ ಜಾತಿ ಅಥವಾ ವರ್ಗವು ಕಡೆಗಣಿಸಲ್ಪಟ್ಟಿದೆ’– ಎಂಬ ಭಾವನೆಯು ಯಾರಿಗೂ ಬಾರದ ರೀತಿಯಲ್ಲಿ ಸೇವೆ ಮತ್ತು ಸೌಕರ್ಯಗಳಲ್ಲಿ ಅವಕಾಶ ಕಲ್ಪಿಸುವಂಥ ಕ್ರಮಗಳನ್ನು ರೂಪಿಸಿ ಅವುಗಳನ್ನು ಆಯೋಗವು ತನ್ನ ವರದಿಯಲ್ಲಿ ತಿಳಿಸಲಿದೆ.</p>.<p>ತಾತ್ವಿಕ ಕಾನೂನು ಹಾಗೂ ಸಂವಿಧಾನಾತ್ಮಕ ದೃಷ್ಟಿಗಳಿಂದ ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಕಾರ್ಯವನ್ನು ಎಲ್.ಜಿ. ಹಾವನೂರು ಆಯೋಗವು ಬಹುತೇಕ ಮಟ್ಟಿಗೆ ಪೂರ್ತಿಗೊಳಿಸಿದೆ. <br>ಇನ್ನೂ ಉಳಿದಿರುವ ಕೆಲವು ಅಂಶಗಳನ್ನು ಸರ್ಕಾರಿ ಇಲಾಖೆಗಳು ತತ್ಕ್ಷಣ ಒದಗಿಸಿದರೆ, ಇನ್ನೊಂದು ತಿಂಗಳೊಳಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧವಾಗಿದೆ ಎಂದು ಇಲ್ಲಿ ಅಧಿಕೃತವಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಲ್ಲ ಜಾತಿಯವರಿಗೂ ಕೆಲ ವಿಶೇಷ ಸವಲತ್ತು: ಹಾವನೂರು ಶಿಫಾರಸು</strong></p>.<p>ಬೆಂಗಳೂರು, ಏ. 16– ವಾರ್ಷಿಕ ವರಮಾನ 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರುವ ಯಾವುದೇ ಜಾತಿಯವನಾಗಲೀ ಅವನಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ‘ಕೆಲವು ವಿಶೇಷ ಸವಲತ್ತು’ಗಳನ್ನು ಒದಗಿಸುವ ಶಿಫಾರಸುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಮಾಡಲಿದೆ.</p>.<p>‘ರಾಜ್ಯದ ಯಾವುದೇ ಅರ್ಹ ಜಾತಿ ಅಥವಾ ವರ್ಗವು ಕಡೆಗಣಿಸಲ್ಪಟ್ಟಿದೆ’– ಎಂಬ ಭಾವನೆಯು ಯಾರಿಗೂ ಬಾರದ ರೀತಿಯಲ್ಲಿ ಸೇವೆ ಮತ್ತು ಸೌಕರ್ಯಗಳಲ್ಲಿ ಅವಕಾಶ ಕಲ್ಪಿಸುವಂಥ ಕ್ರಮಗಳನ್ನು ರೂಪಿಸಿ ಅವುಗಳನ್ನು ಆಯೋಗವು ತನ್ನ ವರದಿಯಲ್ಲಿ ತಿಳಿಸಲಿದೆ.</p>.<p>ತಾತ್ವಿಕ ಕಾನೂನು ಹಾಗೂ ಸಂವಿಧಾನಾತ್ಮಕ ದೃಷ್ಟಿಗಳಿಂದ ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಕಾರ್ಯವನ್ನು ಎಲ್.ಜಿ. ಹಾವನೂರು ಆಯೋಗವು ಬಹುತೇಕ ಮಟ್ಟಿಗೆ ಪೂರ್ತಿಗೊಳಿಸಿದೆ. <br>ಇನ್ನೂ ಉಳಿದಿರುವ ಕೆಲವು ಅಂಶಗಳನ್ನು ಸರ್ಕಾರಿ ಇಲಾಖೆಗಳು ತತ್ಕ್ಷಣ ಒದಗಿಸಿದರೆ, ಇನ್ನೊಂದು ತಿಂಗಳೊಳಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧವಾಗಿದೆ ಎಂದು ಇಲ್ಲಿ ಅಧಿಕೃತವಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>