<p><strong>‘ಯಾವುದೇ ಅನ್ಯಾಯಕನ್ನಡಿಗರು ಸಹಿಸರು’</strong></p>.<p><strong>ಬೆಂಗಳೂರು, ನ. 1–</strong> ಏನು ಅನ್ಯಾಯ ಮಾಡಿದರೂ ಕನ್ನಡಿಗರು ಸಹಿಸಿಕೊಳ್ಳುತ್ತಾರೆಂದು ಭಾವಿಸಬಾರದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವದಂದು ಕೇಂದ್ರ ಸರ್ಕಾರ ಹಾಗೂ ನೆರೆಯ ರಾಜ್ಯಗಳಿಗೆ ನಮ್ರ ಎಚ್ಚರಿಕೆಯನ್ನು ನೀಡಿದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗಳನ್ನು ವಿತರಿಸಿದ ಅವರು, ‘ಕನ್ನಡಿಗರದು ಜಗಳವಾಡುವ ಸಂಪ್ರದಾಯವಲ್ಲ. ಆದರೆ, ಬೇರೆಯವರು ಜಗಳ ಆಡಬಯಸಿದರೆ ಏನು ಮಾಡಬೇಕೆಂಬುದು ನಮಗೆ ಗೊತ್ತು’ ಎಂದು ಸ್ಪಷ್ಟಪಡಿಸಿದರು.</p>.<p><strong>ಕಾಂಗ್ರೆಸ್ ಚುನಾವಣೆ ಚಿಹ್ನೆ: ವಾದ ಮುಕ್ತಾಯ</strong></p>.<p><strong>ನವದೆಹಲಿ, ನ. 1 (ಯುಎನ್ಐ)–</strong> ಕಾಂಗ್ರೆಸ್ ಚುನಾವಣೆ ಚಿಹ್ನೆಗೆ ಸಂಬಂಧಿಸಿದ ವಿವಾದದಲ್ಲಿ ವಿಚಾರಣೆ ನಡೆಸಿದ ಭಾರತದ ಪ್ರಧಾನ ಚುನಾವಣಾ ಕಮಿಷನರ್<br />ಎಸ್.ಪಿ.ಸೇನ್ ವರ್ಮಾ ಅವರು ಡಿಸೆಂಬರ್ ಕೊನೆಯ ಹೊತ್ತಿಗೆ ತಮ್ಮ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ.</p>.<p>ಸಂಸ್ಥಾ ಕಾಂಗ್ರೆಸ್ ಪರ ವಕೀಲರು ಮಂಡಿಸಿದ ವಾದಗಳಿಗೆ ಆಡಳಿತ ಕಾಂಗ್ರೆಸ್ನ ವಕೀಲರಾದ ಕೆ.ಎಸ್.ಮಿಶ್ರಾ ಅವರು ಇಂದು ಉತ್ತರ ನೀಡಿದ ನಂತರ ವಿಚಾರಣೆ ಮುಗಿಸಿರುವುದಾಗಿ ಸೇನ್ ವರ್ಮಾ ಘೋಷಿಸಿ, ತೀರ್ಪನ್ನು<br />ಕಾದಿರಿಸಿರುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಯಾವುದೇ ಅನ್ಯಾಯಕನ್ನಡಿಗರು ಸಹಿಸರು’</strong></p>.<p><strong>ಬೆಂಗಳೂರು, ನ. 1–</strong> ಏನು ಅನ್ಯಾಯ ಮಾಡಿದರೂ ಕನ್ನಡಿಗರು ಸಹಿಸಿಕೊಳ್ಳುತ್ತಾರೆಂದು ಭಾವಿಸಬಾರದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವದಂದು ಕೇಂದ್ರ ಸರ್ಕಾರ ಹಾಗೂ ನೆರೆಯ ರಾಜ್ಯಗಳಿಗೆ ನಮ್ರ ಎಚ್ಚರಿಕೆಯನ್ನು ನೀಡಿದರು.</p>.<p>ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗಳನ್ನು ವಿತರಿಸಿದ ಅವರು, ‘ಕನ್ನಡಿಗರದು ಜಗಳವಾಡುವ ಸಂಪ್ರದಾಯವಲ್ಲ. ಆದರೆ, ಬೇರೆಯವರು ಜಗಳ ಆಡಬಯಸಿದರೆ ಏನು ಮಾಡಬೇಕೆಂಬುದು ನಮಗೆ ಗೊತ್ತು’ ಎಂದು ಸ್ಪಷ್ಟಪಡಿಸಿದರು.</p>.<p><strong>ಕಾಂಗ್ರೆಸ್ ಚುನಾವಣೆ ಚಿಹ್ನೆ: ವಾದ ಮುಕ್ತಾಯ</strong></p>.<p><strong>ನವದೆಹಲಿ, ನ. 1 (ಯುಎನ್ಐ)–</strong> ಕಾಂಗ್ರೆಸ್ ಚುನಾವಣೆ ಚಿಹ್ನೆಗೆ ಸಂಬಂಧಿಸಿದ ವಿವಾದದಲ್ಲಿ ವಿಚಾರಣೆ ನಡೆಸಿದ ಭಾರತದ ಪ್ರಧಾನ ಚುನಾವಣಾ ಕಮಿಷನರ್<br />ಎಸ್.ಪಿ.ಸೇನ್ ವರ್ಮಾ ಅವರು ಡಿಸೆಂಬರ್ ಕೊನೆಯ ಹೊತ್ತಿಗೆ ತಮ್ಮ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ.</p>.<p>ಸಂಸ್ಥಾ ಕಾಂಗ್ರೆಸ್ ಪರ ವಕೀಲರು ಮಂಡಿಸಿದ ವಾದಗಳಿಗೆ ಆಡಳಿತ ಕಾಂಗ್ರೆಸ್ನ ವಕೀಲರಾದ ಕೆ.ಎಸ್.ಮಿಶ್ರಾ ಅವರು ಇಂದು ಉತ್ತರ ನೀಡಿದ ನಂತರ ವಿಚಾರಣೆ ಮುಗಿಸಿರುವುದಾಗಿ ಸೇನ್ ವರ್ಮಾ ಘೋಷಿಸಿ, ತೀರ್ಪನ್ನು<br />ಕಾದಿರಿಸಿರುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>