<p><strong>ನಿರುದ್ಯೋಗಿ ಎಂಜಿನಿಯರ್ ತರಬೇತಿ ಕೇಂದ್ರ: ಸಣ್ಣ ಕೈಗಾರಿಕೆ ಸೇವಾ ವ್ಯವಸ್ಥೆಯಿಂದ ಸ್ಥಾಪನೆ</strong></p>.<p><strong>ಬೆಂಗಳೂರು, ಮೇ 4– </strong>ಕೃಷಿ ಯಂತ್ರೋಪಕರಣಗಳ ದುರಸ್ತಿ ಮುಂತಾದ ಸೇವೆಗಾಗಿ ಕೇಂದ್ರಗಳನ್ನು ಸ್ಥಾಪಿಸಲು ನಿರುದ್ಯೋಗಿ ಎಂಜಿನಿಯರುಗಳು ಮತ್ತು ಡಿಪ್ಲೊಮಾದವರಿಗೆ ತರಬೇತಿಯನ್ನು ನಗರದಲ್ಲಿರುವ ಸಣ್ಣ ಕೈಗಾರಿಕೆ ಸೇವಾ ಸಂಸ್ಥೆಯು ನೀಡಲಿದೆ.</p>.<p>ಕಾಲಕ್ರಮೇಣ ಕೃಷಿ ಕ್ಷೇತ್ರದಲ್ಲಿ ಯಂತ್ರ ಬಳಕೆ ಹೆಚ್ಚುತ್ತಿರುವುದರಿಂದ ಸೇವಾ ಕೇಂದ್ರಗಳು ಅಗತ್ಯವಾಗಿದ್ದು, ಮುಂದಿನ ತಿಂಗಳಿಂದ ತರಬೇತಿ ನೀಡಲಾಗುವುದೆಂದು ಸಂಸ್ಥೆ ತಿಳಿಸಿದೆ.</p>.<p><strong>ಯೋಜನಾ ಆಯೋಗ ವಿಸರ್ಜನೆ ಇಲ್ಲ: ಶೀಘ್ರವೇ ಪುನರ್ರಚನೆ– ಪ್ರಧಾನಿ ಸ್ಪಷ್ಟನೆ</strong></p>.<p><strong>ನವದೆಹಲಿ, ಮೇ 4–</strong> ಯೋಜನಾ ಆಯೋಗವನ್ನು ವಿಸರ್ಜನೆ ಮಾಡುವುದಿಲ್ಲ, ಯೋಜನೆ ಸಚಿವ ಶ್ರೀ ಸಿ.ಸುಬ್ರಹ್ಮಣ್ಯಂ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಅದನ್ನು ಪುನರ್ರಚಿಸಲಾಗುವುದೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿರುದ್ಯೋಗಿ ಎಂಜಿನಿಯರ್ ತರಬೇತಿ ಕೇಂದ್ರ: ಸಣ್ಣ ಕೈಗಾರಿಕೆ ಸೇವಾ ವ್ಯವಸ್ಥೆಯಿಂದ ಸ್ಥಾಪನೆ</strong></p>.<p><strong>ಬೆಂಗಳೂರು, ಮೇ 4– </strong>ಕೃಷಿ ಯಂತ್ರೋಪಕರಣಗಳ ದುರಸ್ತಿ ಮುಂತಾದ ಸೇವೆಗಾಗಿ ಕೇಂದ್ರಗಳನ್ನು ಸ್ಥಾಪಿಸಲು ನಿರುದ್ಯೋಗಿ ಎಂಜಿನಿಯರುಗಳು ಮತ್ತು ಡಿಪ್ಲೊಮಾದವರಿಗೆ ತರಬೇತಿಯನ್ನು ನಗರದಲ್ಲಿರುವ ಸಣ್ಣ ಕೈಗಾರಿಕೆ ಸೇವಾ ಸಂಸ್ಥೆಯು ನೀಡಲಿದೆ.</p>.<p>ಕಾಲಕ್ರಮೇಣ ಕೃಷಿ ಕ್ಷೇತ್ರದಲ್ಲಿ ಯಂತ್ರ ಬಳಕೆ ಹೆಚ್ಚುತ್ತಿರುವುದರಿಂದ ಸೇವಾ ಕೇಂದ್ರಗಳು ಅಗತ್ಯವಾಗಿದ್ದು, ಮುಂದಿನ ತಿಂಗಳಿಂದ ತರಬೇತಿ ನೀಡಲಾಗುವುದೆಂದು ಸಂಸ್ಥೆ ತಿಳಿಸಿದೆ.</p>.<p><strong>ಯೋಜನಾ ಆಯೋಗ ವಿಸರ್ಜನೆ ಇಲ್ಲ: ಶೀಘ್ರವೇ ಪುನರ್ರಚನೆ– ಪ್ರಧಾನಿ ಸ್ಪಷ್ಟನೆ</strong></p>.<p><strong>ನವದೆಹಲಿ, ಮೇ 4–</strong> ಯೋಜನಾ ಆಯೋಗವನ್ನು ವಿಸರ್ಜನೆ ಮಾಡುವುದಿಲ್ಲ, ಯೋಜನೆ ಸಚಿವ ಶ್ರೀ ಸಿ.ಸುಬ್ರಹ್ಮಣ್ಯಂ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಅದನ್ನು ಪುನರ್ರಚಿಸಲಾಗುವುದೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>