<p><strong>‘ಗರೀಬಿ ಬಢಾವೋ’</strong></p>.<p><strong>ನವದೆಹಲಿ, ಜೂನ್ 8–</strong>ಜನಸಂಘವು ಭಾನುವಾರದಿಂದ ರಾಷ್ಟ್ರದಾದ್ಯಂತ ಹೂಡಿರುವ ‘ಶ್ರೀಸಾಮಾನ್ಯನಿಗೆ ತೆರಿಗೆಗಳು ಬೇಡ’ ಚಳವಳಿ ಅಂಗವಾಗಿ ಬಿಡುಗಡೆ ಮಾಡಿರುವ ಒಂದು ಪ್ರಕಟಣೆಯಲ್ಲಿ ಕೇಂದ್ರ ಬಜೆಟನ್ನು ‘ಗರೀಬಿ ಬಢಾವೋ’ (ದಾರಿದ್ರ್ಯ ವೃದ್ಧಿ) ಎಂದು ವರ್ಣಿಸಿದೆ.</p>.<p>ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಸಂಸತ್ ಸದಸ್ಯ ಡಾ.ಭಾಯಿ ಮಹಾವೀರ್ ಅವರು ಬಜೆಟನ್ನು ವಿಮರ್ಶಿಸಿರುವ ಲೇಖನಗಳನ್ನುಳ್ಳ ಅಪ್ರಕಟಣೆಯ ಶೀರ್ಷಿಕೆ ‘ಗರೀಬಿ ಬಢಾವೋ’.</p>.<p><strong>ಕಾಮನ್ವೆಲ್ತ್ ತ್ಯಜಿಸುವುದಾಗಿ ಬ್ರಿಟನ್ಗೆ ಭಾರತದ ಎಚ್ಚರಿಕೆ</strong></p>.<p><strong>ನವದೆಹಲಿ, ಜೂನ್ 8–</strong> ತಾನು ಆಮದು ಮಾಡಿಕೊಳ್ಳುವ ಹತ್ತಿ ಬಟ್ಟೆ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಬ್ರಿಟನ್ ಹಟ ಹಿಡಿದರೆ ತಾನು ಕಾಮನ್ವೆಲ್ತ್ ತ್ಯಜಿಸಬೇಕಾಗುವುದು ಎಂದು ಭಾರತವು ಅದಕ್ಕೆ ಖಚಿತವಾಗಿ ತಿಳಿಸಿದೆ.</p>.<p>ಬ್ರಿಟನ್ ಈ ನಿರ್ಧಾರವನ್ನು ಬದಲಾಯಿಸಬೇಕೆಂದು ವಾಣಿಜ್ಯ ಸಚಿವ ಎಲ್.ಎನ್.ಮಿಶ್ರಾ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಗರೀಬಿ ಬಢಾವೋ’</strong></p>.<p><strong>ನವದೆಹಲಿ, ಜೂನ್ 8–</strong>ಜನಸಂಘವು ಭಾನುವಾರದಿಂದ ರಾಷ್ಟ್ರದಾದ್ಯಂತ ಹೂಡಿರುವ ‘ಶ್ರೀಸಾಮಾನ್ಯನಿಗೆ ತೆರಿಗೆಗಳು ಬೇಡ’ ಚಳವಳಿ ಅಂಗವಾಗಿ ಬಿಡುಗಡೆ ಮಾಡಿರುವ ಒಂದು ಪ್ರಕಟಣೆಯಲ್ಲಿ ಕೇಂದ್ರ ಬಜೆಟನ್ನು ‘ಗರೀಬಿ ಬಢಾವೋ’ (ದಾರಿದ್ರ್ಯ ವೃದ್ಧಿ) ಎಂದು ವರ್ಣಿಸಿದೆ.</p>.<p>ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಸಂಸತ್ ಸದಸ್ಯ ಡಾ.ಭಾಯಿ ಮಹಾವೀರ್ ಅವರು ಬಜೆಟನ್ನು ವಿಮರ್ಶಿಸಿರುವ ಲೇಖನಗಳನ್ನುಳ್ಳ ಅಪ್ರಕಟಣೆಯ ಶೀರ್ಷಿಕೆ ‘ಗರೀಬಿ ಬಢಾವೋ’.</p>.<p><strong>ಕಾಮನ್ವೆಲ್ತ್ ತ್ಯಜಿಸುವುದಾಗಿ ಬ್ರಿಟನ್ಗೆ ಭಾರತದ ಎಚ್ಚರಿಕೆ</strong></p>.<p><strong>ನವದೆಹಲಿ, ಜೂನ್ 8–</strong> ತಾನು ಆಮದು ಮಾಡಿಕೊಳ್ಳುವ ಹತ್ತಿ ಬಟ್ಟೆ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಬ್ರಿಟನ್ ಹಟ ಹಿಡಿದರೆ ತಾನು ಕಾಮನ್ವೆಲ್ತ್ ತ್ಯಜಿಸಬೇಕಾಗುವುದು ಎಂದು ಭಾರತವು ಅದಕ್ಕೆ ಖಚಿತವಾಗಿ ತಿಳಿಸಿದೆ.</p>.<p>ಬ್ರಿಟನ್ ಈ ನಿರ್ಧಾರವನ್ನು ಬದಲಾಯಿಸಬೇಕೆಂದು ವಾಣಿಜ್ಯ ಸಚಿವ ಎಲ್.ಎನ್.ಮಿಶ್ರಾ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>