<h2>ಭಾರತ– ಪಾಕಿಸ್ತಾನ ನಡುವೆ ಐತಿಹಾಸಿಕ ಒಪ್ಪಂದ: ಶಾಶ್ವತ ಶಾಂತಿ ಸ್ಥಾಪನೆ ದಿಸೆಯಲ್ಲಿ ಮತ್ತೊಂದು ಹೆಜ್ಜೆ</h2><p>ನವದೆಹಲಿ, ಆಗಸ್ಟ್ 28– ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತ ಮತ್ತು ಪಾಕಿಸ್ತಾನ ಇಂದು ಸಹಿ ಹಾಕಿದವು.</p><p>ಭಾರತದಲ್ಲಿರುವ ಪಾಕಿಸ್ತಾನಿ ಯುದ್ಧ ಬಂದಿಗಳು, ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಬಂಗಾಳಿಗಳು ಮತ್ತು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನಿ ರಾಷ್ಟ್ರೀಯರನ್ನು (ಪಾಕಿಸ್ತಾನವೇ ತಮ್ಮ ತಾಯಿನಾಡು ಎಂದು ನಿರ್ಧರಿಸಿರುವವರು) ಏಕಕಾಲದಲ್ಲಿ ಅವರವರ ದೇಶಕ್ಕೆ ಮರಳಿಸುವುದಕ್ಕೆ ಈ ಒಪ್ಪಂದ ಅವಕಾಶ ಮಾಡಿದೆ.</p><p>‘ಉಪಖಂಡದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯ ದಿಸೆಯಲ್ಲಿ ಇನ್ನೊಂದು ದೊಡ್ಡ ಹೆಜ್ಜೆ’ ಎಂದು ಈ ಒಪ್ಪಂದವನ್ನು ಭಾರತೀಯ ನಿಯೋಗದ ನಾಯಕ ಪಿ.ಎಸ್. ಹಕ್ಸರ್ ಮತ್ತು ಪಾಕಿಸ್ತಾನದ ನಿಯೋಗದ ನಾಯಕ ಅಜೀಜ್ ಅಹ್ಮದ್ ಅವರು ಪ್ರಶಂಸಿಸಿದರು. </p><h2>ಕ್ಷೇತ್ರ ಮರುವಿಂಗಡಣೆ: ಸಂವಿಧಾನ ತಿದ್ದುಪಡಿ ಕ್ರಮಕ್ಕೆ ಅಸ್ತು</h2><p>ಬೆಂಗಳೂರು, ಆಗಸ್ಟ್ 28– ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿಕೊಡಲು ಸಂವಿಧಾನಕ್ಕೆ 31ನೇ ತಿದ್ದುಪಡಿ ಸೂಚಿಸುವ ಕೇಂದ್ರ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.</p><p>ಈಗಾಗಲೇ ಸಂಸತ್ತಿನ ಅಂಗೀಕಾರ ಪಡೆದಿರುವ ಈ ವಿಧೇಯಕಕ್ಕೆ ಅಂಗೀಕಾರ ನೀಡಬೇಕೆಂದು ಕೋರಿ ಕಾನೂನು ಸಚಿವ ಡಿ.ಕೆ. ನಾಯ್ಕರ್ ಅವರು ಮಂಡಿಸಿದ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು. ಕ್ಷೇತ್ರಗಳ ಮರುವಿಂಗಡಣೆಯಿಂದ ಲೋಕಸಭೆಯ ಸದಸ್ಯರ ಸಂಖ್ಯೆ 20ರಷ್ಟು ಹೆಚ್ಚಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಭಾರತ– ಪಾಕಿಸ್ತಾನ ನಡುವೆ ಐತಿಹಾಸಿಕ ಒಪ್ಪಂದ: ಶಾಶ್ವತ ಶಾಂತಿ ಸ್ಥಾಪನೆ ದಿಸೆಯಲ್ಲಿ ಮತ್ತೊಂದು ಹೆಜ್ಜೆ</h2><p>ನವದೆಹಲಿ, ಆಗಸ್ಟ್ 28– ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತ ಮತ್ತು ಪಾಕಿಸ್ತಾನ ಇಂದು ಸಹಿ ಹಾಕಿದವು.</p><p>ಭಾರತದಲ್ಲಿರುವ ಪಾಕಿಸ್ತಾನಿ ಯುದ್ಧ ಬಂದಿಗಳು, ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಬಂಗಾಳಿಗಳು ಮತ್ತು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನಿ ರಾಷ್ಟ್ರೀಯರನ್ನು (ಪಾಕಿಸ್ತಾನವೇ ತಮ್ಮ ತಾಯಿನಾಡು ಎಂದು ನಿರ್ಧರಿಸಿರುವವರು) ಏಕಕಾಲದಲ್ಲಿ ಅವರವರ ದೇಶಕ್ಕೆ ಮರಳಿಸುವುದಕ್ಕೆ ಈ ಒಪ್ಪಂದ ಅವಕಾಶ ಮಾಡಿದೆ.</p><p>‘ಉಪಖಂಡದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯ ದಿಸೆಯಲ್ಲಿ ಇನ್ನೊಂದು ದೊಡ್ಡ ಹೆಜ್ಜೆ’ ಎಂದು ಈ ಒಪ್ಪಂದವನ್ನು ಭಾರತೀಯ ನಿಯೋಗದ ನಾಯಕ ಪಿ.ಎಸ್. ಹಕ್ಸರ್ ಮತ್ತು ಪಾಕಿಸ್ತಾನದ ನಿಯೋಗದ ನಾಯಕ ಅಜೀಜ್ ಅಹ್ಮದ್ ಅವರು ಪ್ರಶಂಸಿಸಿದರು. </p><h2>ಕ್ಷೇತ್ರ ಮರುವಿಂಗಡಣೆ: ಸಂವಿಧಾನ ತಿದ್ದುಪಡಿ ಕ್ರಮಕ್ಕೆ ಅಸ್ತು</h2><p>ಬೆಂಗಳೂರು, ಆಗಸ್ಟ್ 28– ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿಕೊಡಲು ಸಂವಿಧಾನಕ್ಕೆ 31ನೇ ತಿದ್ದುಪಡಿ ಸೂಚಿಸುವ ಕೇಂದ್ರ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.</p><p>ಈಗಾಗಲೇ ಸಂಸತ್ತಿನ ಅಂಗೀಕಾರ ಪಡೆದಿರುವ ಈ ವಿಧೇಯಕಕ್ಕೆ ಅಂಗೀಕಾರ ನೀಡಬೇಕೆಂದು ಕೋರಿ ಕಾನೂನು ಸಚಿವ ಡಿ.ಕೆ. ನಾಯ್ಕರ್ ಅವರು ಮಂಡಿಸಿದ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು. ಕ್ಷೇತ್ರಗಳ ಮರುವಿಂಗಡಣೆಯಿಂದ ಲೋಕಸಭೆಯ ಸದಸ್ಯರ ಸಂಖ್ಯೆ 20ರಷ್ಟು ಹೆಚ್ಚಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>