<h2>ಇಬ್ಬರ ಹೊರತು ಕರ್ನಾಟಕದ ಎಲ್ಲ ಸಚಿವರ ರಾಜೀನಾಮೆ</h2>.<p><strong>ಬೆಂಗಳೂರು, ಡಿ. 5</strong>– ಮಂತ್ರಿಮಂಡಲದ ಪುನರ್ರಚನೆಗೆ ಅವಕಾಶ ಮಾಡಿಕೊಡಲು, ಕರ್ನಾಟಕ ಸಚಿವ ಸಂಪುಟದ ಇಬ್ಬರನ್ನು ಬಿಟ್ಟು ಉಳಿದ ಎಲ್ಲ ಮಂತ್ರಿಗಳು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಇಂದು ರಾತ್ರಿ ಸಾಮೂಹಿಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p>ಪೌರಾಡಳಿತ ಮಂತ್ರಿ ಬಸವಲಿಂಗಪ್ಪ ಅವರ ಮೈಸೂರು ಭಾಷಣದ ಹಿನ್ನೆಲೆಯಲ್ಲಿ ಮಂತ್ರಿ ಮಂಡಲದ ಸದಸ್ಯರಲ್ಲಿ ಕೆಲವು ದಿನಗಳಿಂದ ಮೂಡಿ, ಬೆಳೆಯತೊಡಗಿದ ಅತೃಪ್ತಿಯು ಈ ರೀತಿ ಅನಿರೀಕ್ಷಿತ ಪ್ರಮಾಣದಲ್ಲಿ ಪ್ರಕಟವಾಯಿತು.</p>.<p>ದೆಹಲಿಯಲ್ಲಿರುವ ಬಸವಲಿಂಗಪ್ಪ ಮತ್ತು ಸಚಿವ ಸಂಪುಟದ ಸಭೆಯಲ್ಲಿ ಹಾಜರಿಲ್ಲದ ಎ.ಆರ್.ಬದರಿನಾರಾಯಣ ಅವರು ರಾಜೀನಾಮೆ ಸಲ್ಲಿಸಿಲ್ಲ. </p>.<h2>ಚಳವಳಿ ನಿಲ್ಲಿಸಿ: ಅರಸು ಮನವಿ</h2>.<p><strong>ಬೆಂಗಳೂರು, ಡಿ. 5</strong> – ಸಚಿವ ಬಸವಲಿಂಗಪ್ಪ ವಿರುದ್ಧದ ಚಳವಳಿಯಿಂದ ಯಾವ ವರ್ಗಕ್ಕೂ ಪ್ರಯೋಜನವಾಗದು; ಆದುದರಿಂದ ವಿದ್ಯಾರ್ಥಿಗಳು ಚಳವಳಿ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ದೇವರಾಜ ಅರಸು ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಇಬ್ಬರ ಹೊರತು ಕರ್ನಾಟಕದ ಎಲ್ಲ ಸಚಿವರ ರಾಜೀನಾಮೆ</h2>.<p><strong>ಬೆಂಗಳೂರು, ಡಿ. 5</strong>– ಮಂತ್ರಿಮಂಡಲದ ಪುನರ್ರಚನೆಗೆ ಅವಕಾಶ ಮಾಡಿಕೊಡಲು, ಕರ್ನಾಟಕ ಸಚಿವ ಸಂಪುಟದ ಇಬ್ಬರನ್ನು ಬಿಟ್ಟು ಉಳಿದ ಎಲ್ಲ ಮಂತ್ರಿಗಳು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಇಂದು ರಾತ್ರಿ ಸಾಮೂಹಿಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p>ಪೌರಾಡಳಿತ ಮಂತ್ರಿ ಬಸವಲಿಂಗಪ್ಪ ಅವರ ಮೈಸೂರು ಭಾಷಣದ ಹಿನ್ನೆಲೆಯಲ್ಲಿ ಮಂತ್ರಿ ಮಂಡಲದ ಸದಸ್ಯರಲ್ಲಿ ಕೆಲವು ದಿನಗಳಿಂದ ಮೂಡಿ, ಬೆಳೆಯತೊಡಗಿದ ಅತೃಪ್ತಿಯು ಈ ರೀತಿ ಅನಿರೀಕ್ಷಿತ ಪ್ರಮಾಣದಲ್ಲಿ ಪ್ರಕಟವಾಯಿತು.</p>.<p>ದೆಹಲಿಯಲ್ಲಿರುವ ಬಸವಲಿಂಗಪ್ಪ ಮತ್ತು ಸಚಿವ ಸಂಪುಟದ ಸಭೆಯಲ್ಲಿ ಹಾಜರಿಲ್ಲದ ಎ.ಆರ್.ಬದರಿನಾರಾಯಣ ಅವರು ರಾಜೀನಾಮೆ ಸಲ್ಲಿಸಿಲ್ಲ. </p>.<h2>ಚಳವಳಿ ನಿಲ್ಲಿಸಿ: ಅರಸು ಮನವಿ</h2>.<p><strong>ಬೆಂಗಳೂರು, ಡಿ. 5</strong> – ಸಚಿವ ಬಸವಲಿಂಗಪ್ಪ ವಿರುದ್ಧದ ಚಳವಳಿಯಿಂದ ಯಾವ ವರ್ಗಕ್ಕೂ ಪ್ರಯೋಜನವಾಗದು; ಆದುದರಿಂದ ವಿದ್ಯಾರ್ಥಿಗಳು ಚಳವಳಿ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ದೇವರಾಜ ಅರಸು ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>