<p><strong>ವಿದೇಶಿ ಒತ್ತಡದ ವಿರುದ್ಧ ಅಲಿಪ್ತ ರಾಷ್ಟ್ರಗಳ ಮಧ್ಯೆ ಸಹಕಾರ ಅಗತ್ಯ</strong></p><p><strong>ಢಾಕಾ, ಜೂನ್ 18–</strong> ಅಲಿಪ್ತ ರಾಷ್ಟ್ರಗಳ ಪರಸ್ಪರ ನಿಕಟ ಸಹಕಾರವು ವಿದೇಶಿ ಒತ್ತಡ<br>ಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಸಹಾಯವಾಗುವುದಲ್ಲದೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಂಪೂರ್ಣ ಹತೋಟಿ ಇರಿಸಿಕೊಳ್ಳುವುದಕ್ಕೂ ನೆರವಾಗುವುದೆಂದು ಭಾರತದ ರಾಷ್ಟ್ರಪತಿ ವಿ.ವಿ. ಗಿರಿ ಘೋಷಿಸಿದರು.</p><p>ಬಾಂಗ್ಲಾದೇಶದ ವಿಶೇಷ ಪಾರ್ಲಿಮೆಂಟ್ ಅಧಿವೇಶನವನ್ನು ಉದ್ದೇಶಿಸಿ, ಆಲ್ಜಿಯರ್ಸ್ ಮತ್ತು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ವಿಶೇಷ ಅಧಿವೇಶನ ನೀಡಿದ ಮಾರ್ಗದರ್ಶನದ ಅನುಸಾರ ಅಲಿಪ್ತ ರಾಷ್ಟ್ರಗಳಲ್ಲಿ ಪ್ರಗತಿ ಸಾಧನೆಯ ಔಚಿತ್ಯವನ್ನು ಎತ್ತಿ ಹೇಳಿದರು.</p><p><strong>ಭಾವೀ ಗುರುಗಳ ‘ದಿವ್ಯ’ ಜ್ಞಾನ</strong></p><p><strong>ಶಿವಮೊಗ್ಗ, ಜೂನ್ 18–</strong> ಉಪಾಧ್ಯಾಯರ ಸ್ಥಾನಕ್ಕೆ ನೇಮಿಸಲು ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳನ್ನು ಇತ್ತೀಚೆಗೆ ಇಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು.</p><p>ಸಂದರ್ಶನದ ಸಮಯದಲ್ಲಿ ಭಾರತದ ಚರಿತ್ರಗೆ ಸಂಬಂಧಿಸಿದಂತೆ ಹಾಕಲಾದ ಪ್ರಶ್ನೆಗಳಿಗೆ ಕೆಲವು ಮಂದಿ ಅಭ್ಯರ್ಥಿಗಳು ನೀಡಿದ ಉತ್ತರ ದಿಗ್ಭ್ರಮೆಯುಂಟುಮಾಡಿತು.</p><p>ಡಾ.ಎಸ್. ರಾಧಾಕೃಷ್ಣನ್ ಅವರು ಮೈಸೂರಿನ ದಿವಾನರಾಗಿದ್ದರು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ‘‘ಡಾ. ರಾಧಾಕೃಷ್ಣನ್ ಅವರು ರಾಜ್ಯದ ಆಹಾರ ಮಂತ್ರಿಗಳೂ ಸಹ ಆಗಿದ್ದರು’’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿದೇಶಿ ಒತ್ತಡದ ವಿರುದ್ಧ ಅಲಿಪ್ತ ರಾಷ್ಟ್ರಗಳ ಮಧ್ಯೆ ಸಹಕಾರ ಅಗತ್ಯ</strong></p><p><strong>ಢಾಕಾ, ಜೂನ್ 18–</strong> ಅಲಿಪ್ತ ರಾಷ್ಟ್ರಗಳ ಪರಸ್ಪರ ನಿಕಟ ಸಹಕಾರವು ವಿದೇಶಿ ಒತ್ತಡ<br>ಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಸಹಾಯವಾಗುವುದಲ್ಲದೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಂಪೂರ್ಣ ಹತೋಟಿ ಇರಿಸಿಕೊಳ್ಳುವುದಕ್ಕೂ ನೆರವಾಗುವುದೆಂದು ಭಾರತದ ರಾಷ್ಟ್ರಪತಿ ವಿ.ವಿ. ಗಿರಿ ಘೋಷಿಸಿದರು.</p><p>ಬಾಂಗ್ಲಾದೇಶದ ವಿಶೇಷ ಪಾರ್ಲಿಮೆಂಟ್ ಅಧಿವೇಶನವನ್ನು ಉದ್ದೇಶಿಸಿ, ಆಲ್ಜಿಯರ್ಸ್ ಮತ್ತು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ವಿಶೇಷ ಅಧಿವೇಶನ ನೀಡಿದ ಮಾರ್ಗದರ್ಶನದ ಅನುಸಾರ ಅಲಿಪ್ತ ರಾಷ್ಟ್ರಗಳಲ್ಲಿ ಪ್ರಗತಿ ಸಾಧನೆಯ ಔಚಿತ್ಯವನ್ನು ಎತ್ತಿ ಹೇಳಿದರು.</p><p><strong>ಭಾವೀ ಗುರುಗಳ ‘ದಿವ್ಯ’ ಜ್ಞಾನ</strong></p><p><strong>ಶಿವಮೊಗ್ಗ, ಜೂನ್ 18–</strong> ಉಪಾಧ್ಯಾಯರ ಸ್ಥಾನಕ್ಕೆ ನೇಮಿಸಲು ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳನ್ನು ಇತ್ತೀಚೆಗೆ ಇಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು.</p><p>ಸಂದರ್ಶನದ ಸಮಯದಲ್ಲಿ ಭಾರತದ ಚರಿತ್ರಗೆ ಸಂಬಂಧಿಸಿದಂತೆ ಹಾಕಲಾದ ಪ್ರಶ್ನೆಗಳಿಗೆ ಕೆಲವು ಮಂದಿ ಅಭ್ಯರ್ಥಿಗಳು ನೀಡಿದ ಉತ್ತರ ದಿಗ್ಭ್ರಮೆಯುಂಟುಮಾಡಿತು.</p><p>ಡಾ.ಎಸ್. ರಾಧಾಕೃಷ್ಣನ್ ಅವರು ಮೈಸೂರಿನ ದಿವಾನರಾಗಿದ್ದರು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ‘‘ಡಾ. ರಾಧಾಕೃಷ್ಣನ್ ಅವರು ರಾಜ್ಯದ ಆಹಾರ ಮಂತ್ರಿಗಳೂ ಸಹ ಆಗಿದ್ದರು’’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>