<p><strong>ಪಟನಾ, ಅ. 10–</strong> ಗೊತ್ತುಪಡಿಸುವ ‘ಗಡುವಿನೊಳಗೆ’ ಬಿಹಾರದ ಈಗಿನ ವಿಧಾನಸಭೆಯನ್ನು ವಿಸರ್ಜಿಸದಿದ್ದರೆ ಎಲ್ಲ 315 ಕ್ಷೇತ್ರಗಳಲ್ಲೂ ಚುನಾವಣೆ ನಡೆಸಿ ಪ್ರತಿಯಾದ ‘ಜನತಾ ವಿಧಾನಸಭೆ’ ರಚಿಸುವುದಾಗಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಪ್ರಕಟಿಸಿದರು.</p><p>ಅಕ್ಟೋಬರ್ 5ರಂದು ಗೋಲಿಬಾರ್ ಮತ್ತು ಹಿಂಸಾಚಾರ ನಡೆದ ಸ್ಥಳವಾದ ಪಟನಾ ನಗರದಲ್ಲಿ ನಾರಾಯಣ್ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಕ್ರಿಯಾ ಸಮಿತಿ ಹಾಗೂ ಚಳವಳಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳ ಸಮನ್ವಯ ಸಮಿತಿಯ ಜೊತೆ ಸಮಾಲೋಚನೆ ನಡೆಸಿ ‘ಗಡುವನ್ನು’ ಪ್ರಕಟಿಸುವುದಾಗಿ ತಿಳಿಸಿದರು.</p><p>‘ಜನತಾ ವಿಧಾನಸಭೆಗೆ’ ಚುನಾವಣೆಗಳು ನಡೆದ ನಂತರ ಒಂದು ‘ಸಂಪುಟ’ ರಚಿಸಲಾಗುವುದು. ಈಗಿನ ವಿಧಾನಸಭೆಯ ವಿಸರ್ಜನೆಯಾಗಿ ಸಂವಿಧಾನದ ಪ್ರಕಾರ ಹೊಸ ಚುನಾವಣೆ ನಡೆಯುವವರೆಗೆ ಈ ‘ವಿಧಾನಸಭೆ’ ಮತ್ತು ‘ಸಂಪುಟ’ ಕಾರ್ಯ ನಿರ್ವಹಿಸುತ್ತವೆ ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟನಾ, ಅ. 10–</strong> ಗೊತ್ತುಪಡಿಸುವ ‘ಗಡುವಿನೊಳಗೆ’ ಬಿಹಾರದ ಈಗಿನ ವಿಧಾನಸಭೆಯನ್ನು ವಿಸರ್ಜಿಸದಿದ್ದರೆ ಎಲ್ಲ 315 ಕ್ಷೇತ್ರಗಳಲ್ಲೂ ಚುನಾವಣೆ ನಡೆಸಿ ಪ್ರತಿಯಾದ ‘ಜನತಾ ವಿಧಾನಸಭೆ’ ರಚಿಸುವುದಾಗಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಪ್ರಕಟಿಸಿದರು.</p><p>ಅಕ್ಟೋಬರ್ 5ರಂದು ಗೋಲಿಬಾರ್ ಮತ್ತು ಹಿಂಸಾಚಾರ ನಡೆದ ಸ್ಥಳವಾದ ಪಟನಾ ನಗರದಲ್ಲಿ ನಾರಾಯಣ್ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಕ್ರಿಯಾ ಸಮಿತಿ ಹಾಗೂ ಚಳವಳಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳ ಸಮನ್ವಯ ಸಮಿತಿಯ ಜೊತೆ ಸಮಾಲೋಚನೆ ನಡೆಸಿ ‘ಗಡುವನ್ನು’ ಪ್ರಕಟಿಸುವುದಾಗಿ ತಿಳಿಸಿದರು.</p><p>‘ಜನತಾ ವಿಧಾನಸಭೆಗೆ’ ಚುನಾವಣೆಗಳು ನಡೆದ ನಂತರ ಒಂದು ‘ಸಂಪುಟ’ ರಚಿಸಲಾಗುವುದು. ಈಗಿನ ವಿಧಾನಸಭೆಯ ವಿಸರ್ಜನೆಯಾಗಿ ಸಂವಿಧಾನದ ಪ್ರಕಾರ ಹೊಸ ಚುನಾವಣೆ ನಡೆಯುವವರೆಗೆ ಈ ‘ವಿಧಾನಸಭೆ’ ಮತ್ತು ‘ಸಂಪುಟ’ ಕಾರ್ಯ ನಿರ್ವಹಿಸುತ್ತವೆ ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>