<p><strong>ಬೆಂಗಳೂರು, ಏ. 8–</strong> ಭಾರತದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಪಡೆದಿರುವ ಕರ್ನಾಟಕ, ರಾಷ್ಟ್ರದಲ್ಲೇ ಪ್ರಥಮ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಇಂದು ಪ್ರಥಮ ಹೆಜ್ಜೆಯನ್ನಿಟ್ಟಿತು.</p><p>ಆರೋಗ್ಯ ಸಚಿವ ಎಚ್. ಸಿದ್ಧವೀರಪ್ಪ ಅವರು ಮಂಡಿಸಿದ್ದ ವೈದ್ಯಕೀಯ ವಿಶ್ವವಿದ್ಯಾಲಯ ಮಸೂದೆಯ ಬಗ್ಗೆ ಜಂಟಿ ಪರಿಶೀಲಕ ಸಮಿತಿಯು ಸಲ್ಲಿಸಿದ್ದ ವರದಿಯ ಮೇಲೆ ಹಲವಾರು ತಿದ್ದುಪಡಿ ಮಂಡಿಸಿದ್ದನ್ನು ಸರ್ವಾನುಮತದಿಂದ ಇಂದು ಒಪ್ಪಿದ ವಿಧಾನಸಭೆ, ವಿರೋಧವಿಲ್ಲದೆ ಅನುಮೋದನೆ ನೀಡಿತು.</p><p><strong>ದೂಳು ತಿನ್ನುತ್ತಿರುವ ಪುಸ್ತಕಗಳು</strong></p><p><strong>ಬೆಂಗಳೂರು, ಏ. 8–</strong> ಅರವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಲಲಿತಕಲಾ ಅಕಾಡೆಮಿ ಪ್ರಕಟಿಸಿರುವ ಚಿತ್ರಗಳ ಸಂಕಲನವೊಂದು ಕೊಳ್ಳುವವರೇ ಇಲ್ಲದೆ, ಅದರ ಪ್ರತಿಗಳೆಲ್ಲಾ ದೂಳು ತಿನ್ನುತ್ತಿವೆ.</p><p>‘ದೇವಾಲಯ ಶಿಲ್ಪಗಳು’ ಎನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಈ ಪುಸ್ತಕದಲ್ಲಿರುವ ಚಿತ್ರಗಳು, ವಿಗ್ರಹಗಳ ಛಾಯಾಚಿತ್ರದ ಆಧಾರದ ಮೇಲೆ ಬರೆದಿರುವ ರೇಖಾಚಿತ್ರಗಳು.</p><p>ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಅಕಾಡೆಮಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಸಲಹೆ ನೀಡಲು ನೇಮಕವಾಗಿದ್ದ ಖೋಸ್ಲಾ ಸಮಿತಿಯು ತನ್ನ ವರದಿಯಲ್ಲಿ (1972) ಈ ಪುಸ್ತಕದ ಕುರಿತು ಹೀಗೆ ಹೇಳಿದೆ:</p><p>‘ಈ ಚಿತ್ರಗಳು ಈಗಾಗಲೇ ಪ್ರಕಟವಾಗಿರುವ ದೇವಾಲಯದ ವಿಗ್ರಹಗಳ ಛಾಯಾಚಿತ್ರದ ಪ್ರತಿಕೃತಿಗಳು. ಇವು ಅಸಮರ್ಪಕ ಮತ್ತು ಚಿತ್ರಗಳು ನೋಡಲು ಹಿತವಾಗಿಲ್ಲ... ಆದರೂ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಇದರ ಮುದ್ರಣಕ್ಕಾಗಿ ವೆಚ್ಚ ಮಾಡಲಾಗಿದೆ. ಈ ಹಣ ದುರದೃಷ್ಟವಶಾತ್ ಲಲಿತಕಲಾ ಅಕಾಡೆಮಿಯದ್ದು’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಏ. 8–</strong> ಭಾರತದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಪಡೆದಿರುವ ಕರ್ನಾಟಕ, ರಾಷ್ಟ್ರದಲ್ಲೇ ಪ್ರಥಮ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಇಂದು ಪ್ರಥಮ ಹೆಜ್ಜೆಯನ್ನಿಟ್ಟಿತು.</p><p>ಆರೋಗ್ಯ ಸಚಿವ ಎಚ್. ಸಿದ್ಧವೀರಪ್ಪ ಅವರು ಮಂಡಿಸಿದ್ದ ವೈದ್ಯಕೀಯ ವಿಶ್ವವಿದ್ಯಾಲಯ ಮಸೂದೆಯ ಬಗ್ಗೆ ಜಂಟಿ ಪರಿಶೀಲಕ ಸಮಿತಿಯು ಸಲ್ಲಿಸಿದ್ದ ವರದಿಯ ಮೇಲೆ ಹಲವಾರು ತಿದ್ದುಪಡಿ ಮಂಡಿಸಿದ್ದನ್ನು ಸರ್ವಾನುಮತದಿಂದ ಇಂದು ಒಪ್ಪಿದ ವಿಧಾನಸಭೆ, ವಿರೋಧವಿಲ್ಲದೆ ಅನುಮೋದನೆ ನೀಡಿತು.</p><p><strong>ದೂಳು ತಿನ್ನುತ್ತಿರುವ ಪುಸ್ತಕಗಳು</strong></p><p><strong>ಬೆಂಗಳೂರು, ಏ. 8–</strong> ಅರವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಲಲಿತಕಲಾ ಅಕಾಡೆಮಿ ಪ್ರಕಟಿಸಿರುವ ಚಿತ್ರಗಳ ಸಂಕಲನವೊಂದು ಕೊಳ್ಳುವವರೇ ಇಲ್ಲದೆ, ಅದರ ಪ್ರತಿಗಳೆಲ್ಲಾ ದೂಳು ತಿನ್ನುತ್ತಿವೆ.</p><p>‘ದೇವಾಲಯ ಶಿಲ್ಪಗಳು’ ಎನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಈ ಪುಸ್ತಕದಲ್ಲಿರುವ ಚಿತ್ರಗಳು, ವಿಗ್ರಹಗಳ ಛಾಯಾಚಿತ್ರದ ಆಧಾರದ ಮೇಲೆ ಬರೆದಿರುವ ರೇಖಾಚಿತ್ರಗಳು.</p><p>ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಅಕಾಡೆಮಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಸಲಹೆ ನೀಡಲು ನೇಮಕವಾಗಿದ್ದ ಖೋಸ್ಲಾ ಸಮಿತಿಯು ತನ್ನ ವರದಿಯಲ್ಲಿ (1972) ಈ ಪುಸ್ತಕದ ಕುರಿತು ಹೀಗೆ ಹೇಳಿದೆ:</p><p>‘ಈ ಚಿತ್ರಗಳು ಈಗಾಗಲೇ ಪ್ರಕಟವಾಗಿರುವ ದೇವಾಲಯದ ವಿಗ್ರಹಗಳ ಛಾಯಾಚಿತ್ರದ ಪ್ರತಿಕೃತಿಗಳು. ಇವು ಅಸಮರ್ಪಕ ಮತ್ತು ಚಿತ್ರಗಳು ನೋಡಲು ಹಿತವಾಗಿಲ್ಲ... ಆದರೂ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಇದರ ಮುದ್ರಣಕ್ಕಾಗಿ ವೆಚ್ಚ ಮಾಡಲಾಗಿದೆ. ಈ ಹಣ ದುರದೃಷ್ಟವಶಾತ್ ಲಲಿತಕಲಾ ಅಕಾಡೆಮಿಯದ್ದು’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>