<p><strong>ಅರಸುಗೆ ಗೃಹಖಾತೆ; ಕೃಷ್ಣ– ಕೈಗಾರಿಕೆ, ಸಿದ್ದವೀರಪ್ಪ– ಆರೋಗ್ಯ<br />ಬೆಂಗಳೂರು, ಮಾ. 23– </strong>ಶ್ರೀ ದೇವರಾಜ ಅರಸು ಅವರ ನಾಯಕತ್ವದಲ್ಲಿ ರಾಜ್ಯದ ಜನತೆಯ ಅಪಾರ ಆತ್ಮೀಯ ವಿಶ್ವಾಸ ಪಡೆದ ಆಡಳಿತ ಕಾಂಗ್ರೆಸ್ ಪಕ್ಷದ 22 ಮಂದಿ ಸದಸ್ಯರ ಮಂತ್ರಿಮಂಡಲ ಇಂದು ಅಧಿಕಾರ ವಹಿಸಿಕೊಂಡಿತು.</p>.<p>ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಸರ್ವಶ್ರೀ ಎಚ್.ಎಂ.ಚನ್ನಬಸಪ್ಪ ಹಾಗೂ ಕೆ.ಎಚ್.ಪಾಟೀಲ್ ಅವರುಗಳು ಕಳೆದ 20 ರಂದು ಪ್ರಮಾಣ ವಚನ ಸ್ವೀಕರಿಸಿದ್ದು ಉಳಿದ 10 ಮಂದಿ ಸಚಿವರು ಹಾಗೂ 9 ಮಂದಿ ರಾಜ್ಯ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.</p>.<p>ಸಚಿವರು: ಎಚ್.ಸಿದ್ದವೀರಪ್ಪ, ಬಿ.ಬಸವಲಿಂಗಪ್ಪ, ಎಂ.ಮಲ್ಲಿಕಾರ್ಜುನಸ್ವಾಮಿ, ಎ.ಆರ್.ಬದರೀ ನಾರಾಯಣ್, ಶಂಕರ ಆಳ್ವ, ಎನ್.ಹುಚ್ಚಮಾಸ್ತಿ ಗೌಡ, ಅಜೀಜ್ ಸೇಠ್, ಎಂ.ವೈ.ಘೋರ್ಪಡೆ, ಎಸ್.ಎಂ.ಕೃಷ್ಣ, ಡಿ.ಕೆ.ನಾಯಕರ್.</p>.<p>ರಾಜ್ಯ ಸಚಿವರು: ವಿ.ಎಸ್.ಕೌಜಲಗಿ, ಆರ್.ಡಿ.ಕಿತ್ತೂರ್, ದೇವೇಂದ್ರಪ್ಪ ಘಾಳಪ್ಪ, ಶಿವಣ್ಣ ಭೀಮಪ್ಪ ಕಲಮಲ, ಕೆ.ಟಿ.ರಾಥೋಡ್, ಎನ್.ಚಿಕ್ಕೇಗೌಡ, ಎಚ್.ಎನ್.ನಂಜೇಗೌಡ, ಶ್ರೀಮತಿ ಈವಾವಾಸ್, ಸಂಗಪ್ಪ ನಗರಾಳ.</p>.<p><strong>ಸಚಿವರಿಬ್ಬರಿಗೆ ಸತ್ಯದಲ್ಲೇ ನಿಷ್ಠೆ<br />ಬೆಂಗಳೂರು, ಮಾ. 23– </strong>ಹರಿಜನ ಮಂತ್ರಿಗಳಿಬ್ಬರು ‘ಭಗವಂತನ ಹೆಸರಿನ....’ ಬದಲು ‘ಸತ್ಯದ ಹೆಸರಿನಲ್ಲಿ....’ ಸಚಿವ ಕರ್ತವ್ಯ ನಿರ್ವಹಿಸುವ ಮತ್ತು ರಾಜ್ಯಾಂಗ ನಿಷ್ಠೆ ತೋರಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.</p>.<p>ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಬಸವಲಿಂಗಪ್ಪ ಮತ್ತು ಶ್ರೀ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ವ್ಯಕ್ತಪಡಿಸಿದ ಇಚ್ಛೆಯ ಪ್ರಕಾರ ಈ ಬದಲಾವಣೆ ಮಾಡಲಾಯಿತು. ಇತರ ಮಂತ್ರಿಗಳೆಲ್ಲರೂ ‘ಭಗವಂತನ ಹೆಸರಿನಲ್ಲಿ....’ ಪ್ರತಿಜ್ಞೆ ಸ್ವೀಕರಿಸಿದರು.</p>.<p>ಸಂಪುಟ ಸಚಿವ ಶ್ರೀ ಅಜೀಜ್ ಸೇಠ್ ಮತ್ತು ಸಹಾಯಕ ಮಂತ್ರಿ ಶ್ರೀ ಆರ್.ಡಿ.ಕಿತ್ತೂರ್ ಅವರು ಇಂಗ್ಲಿಷ್ನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಇತರರೆಲ್ಲರೂ ಕನ್ನಡದಲ್ಲಿ ಪ್ರತಿಜ್ಞೆ ಓದಿದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸುಗೆ ಗೃಹಖಾತೆ; ಕೃಷ್ಣ– ಕೈಗಾರಿಕೆ, ಸಿದ್ದವೀರಪ್ಪ– ಆರೋಗ್ಯ<br />ಬೆಂಗಳೂರು, ಮಾ. 23– </strong>ಶ್ರೀ ದೇವರಾಜ ಅರಸು ಅವರ ನಾಯಕತ್ವದಲ್ಲಿ ರಾಜ್ಯದ ಜನತೆಯ ಅಪಾರ ಆತ್ಮೀಯ ವಿಶ್ವಾಸ ಪಡೆದ ಆಡಳಿತ ಕಾಂಗ್ರೆಸ್ ಪಕ್ಷದ 22 ಮಂದಿ ಸದಸ್ಯರ ಮಂತ್ರಿಮಂಡಲ ಇಂದು ಅಧಿಕಾರ ವಹಿಸಿಕೊಂಡಿತು.</p>.<p>ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಸರ್ವಶ್ರೀ ಎಚ್.ಎಂ.ಚನ್ನಬಸಪ್ಪ ಹಾಗೂ ಕೆ.ಎಚ್.ಪಾಟೀಲ್ ಅವರುಗಳು ಕಳೆದ 20 ರಂದು ಪ್ರಮಾಣ ವಚನ ಸ್ವೀಕರಿಸಿದ್ದು ಉಳಿದ 10 ಮಂದಿ ಸಚಿವರು ಹಾಗೂ 9 ಮಂದಿ ರಾಜ್ಯ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.</p>.<p>ಸಚಿವರು: ಎಚ್.ಸಿದ್ದವೀರಪ್ಪ, ಬಿ.ಬಸವಲಿಂಗಪ್ಪ, ಎಂ.ಮಲ್ಲಿಕಾರ್ಜುನಸ್ವಾಮಿ, ಎ.ಆರ್.ಬದರೀ ನಾರಾಯಣ್, ಶಂಕರ ಆಳ್ವ, ಎನ್.ಹುಚ್ಚಮಾಸ್ತಿ ಗೌಡ, ಅಜೀಜ್ ಸೇಠ್, ಎಂ.ವೈ.ಘೋರ್ಪಡೆ, ಎಸ್.ಎಂ.ಕೃಷ್ಣ, ಡಿ.ಕೆ.ನಾಯಕರ್.</p>.<p>ರಾಜ್ಯ ಸಚಿವರು: ವಿ.ಎಸ್.ಕೌಜಲಗಿ, ಆರ್.ಡಿ.ಕಿತ್ತೂರ್, ದೇವೇಂದ್ರಪ್ಪ ಘಾಳಪ್ಪ, ಶಿವಣ್ಣ ಭೀಮಪ್ಪ ಕಲಮಲ, ಕೆ.ಟಿ.ರಾಥೋಡ್, ಎನ್.ಚಿಕ್ಕೇಗೌಡ, ಎಚ್.ಎನ್.ನಂಜೇಗೌಡ, ಶ್ರೀಮತಿ ಈವಾವಾಸ್, ಸಂಗಪ್ಪ ನಗರಾಳ.</p>.<p><strong>ಸಚಿವರಿಬ್ಬರಿಗೆ ಸತ್ಯದಲ್ಲೇ ನಿಷ್ಠೆ<br />ಬೆಂಗಳೂರು, ಮಾ. 23– </strong>ಹರಿಜನ ಮಂತ್ರಿಗಳಿಬ್ಬರು ‘ಭಗವಂತನ ಹೆಸರಿನ....’ ಬದಲು ‘ಸತ್ಯದ ಹೆಸರಿನಲ್ಲಿ....’ ಸಚಿವ ಕರ್ತವ್ಯ ನಿರ್ವಹಿಸುವ ಮತ್ತು ರಾಜ್ಯಾಂಗ ನಿಷ್ಠೆ ತೋರಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.</p>.<p>ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಬಸವಲಿಂಗಪ್ಪ ಮತ್ತು ಶ್ರೀ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ವ್ಯಕ್ತಪಡಿಸಿದ ಇಚ್ಛೆಯ ಪ್ರಕಾರ ಈ ಬದಲಾವಣೆ ಮಾಡಲಾಯಿತು. ಇತರ ಮಂತ್ರಿಗಳೆಲ್ಲರೂ ‘ಭಗವಂತನ ಹೆಸರಿನಲ್ಲಿ....’ ಪ್ರತಿಜ್ಞೆ ಸ್ವೀಕರಿಸಿದರು.</p>.<p>ಸಂಪುಟ ಸಚಿವ ಶ್ರೀ ಅಜೀಜ್ ಸೇಠ್ ಮತ್ತು ಸಹಾಯಕ ಮಂತ್ರಿ ಶ್ರೀ ಆರ್.ಡಿ.ಕಿತ್ತೂರ್ ಅವರು ಇಂಗ್ಲಿಷ್ನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಇತರರೆಲ್ಲರೂ ಕನ್ನಡದಲ್ಲಿ ಪ್ರತಿಜ್ಞೆ ಓದಿದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>