<p><strong>ಮುರಾರಜಿಗೆ ಪ್ರಧಾನಿ ರಕ್ಷಾಕವಚ: ಲಿಮಯೆ ಸೂಚನೆಗೆ ಲೋಕಸಭೆ ತಿರಸ್ಕಾರ</strong></p>.<p><strong>ನವದೆಹಲಿ, ಆ. 19– </strong>ತಮ್ಮ ಪುತ್ರನ ವ್ಯಾಪಾರ ವಹಿವಾಟಿನ ಬಗೆಗೆ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಸಭೆಗೆ ತಪ್ಪು ಹೇಳಿಕೆ ಕೊಟ್ಟುದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಸೂಚನೆಗೆ ಇಂದು ಲೋಕಸಭೆಯಲ್ಲಿ ಸುಲಭವಾಗಿ ಭಾರಿ ಬಹುಮತದಿಂದ ಪರಾಜಿತವಾಯಿತು.</p>.<p><strong>ಮುರಾರಜಿ ರಾಜೀನಾಮೆಗೆ ಲಿಮಯೆ ಒತ್ತಾಯ</strong></p>.<p><strong>ನವದೆಹಲಿ, ಆ. 19–</strong> ತಮ್ಮ ಪುತ್ರ ಶ್ರೀ ಕಾಂತಿ ದೇಸಾಯಿ ಅವರ ವ್ಯವಹಾರದ ಸಂಬಂಧದಲ್ಲಿ ‘ಸುಳ್ಳು’ ಹೇಳಿಕೆ ಕೊಟ್ಟಿರುವುದರ ಕಾರಣ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ರಾಜೀನಾಮೆ ಕೊಡಬೇಕೆಂದು ಸಂಯುಕ್ತ ಸೋಷಲಿಸ್ಟ್ ಪಕ್ಷದ ನಾಯಕ ಶ್ರೀ ಮಧು ಲಿಮಯೆ ಅವರು ಇಂದು ಲೋಕಸಭೆಯಲ್ಲಿ ಒತ್ತಾಯಿಸಿದರು.</p>.<p><strong>ಸದ್ಯ ಮಕ್ಕಳಿಲ್ಲವಲ್ಲ!</strong></p>.<p><strong>ನವದೆಹಲಿ, ಆ. 19</strong>–‘ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ಕಾಲದಲ್ಲಿ ಸದ್ಯ ನನಗೆ ಮಕ್ಕಳಿಲ್ಲವಲ್ಲ, ಅದೇ ಬಹು ಸಂತೋಷ’ ಎಂದು ಆಚಾರ್ಯ ಕೃಪಲಾನಿ ಇಂದು ಲೋಕಸಭೆಯಲ್ಲಿ ನುಡಿದಾಗ ಸದಸ್ಯರು ಮನಸಾರ ನಕ್ಕರು.</p>.<p><strong>ರಾಜ್ಯದ ಕರಡು ಯೋಜನೆ ಬಗ್ಗೆ ಉನ್ನತಮಟ್ಟದ ಚರ್ಚೆ</strong></p>.<p><strong>ಬೆಂಗಳೂರು, ಆ. 19–</strong> ರಾಜ್ಯದ ಯೋಜನಾ ಮಂಡಳಿ ರೂಪಿಸಿರುವ ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕರಡನ್ನು ಕುರಿತು ಸೆಪ್ಟೆಂಬರ್ 4 ಮತ್ತು 5ರಂದು ಯೋಜನಾ ಆಯೋಗ ಹಾಗೂ ರಾಜ್ಯದ ಪ್ರತಿನಿಧಿಗಳ ನಡುವೆ ಉನ್ನತಮಟ್ಟದ ಚರ್ಚೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುರಾರಜಿಗೆ ಪ್ರಧಾನಿ ರಕ್ಷಾಕವಚ: ಲಿಮಯೆ ಸೂಚನೆಗೆ ಲೋಕಸಭೆ ತಿರಸ್ಕಾರ</strong></p>.<p><strong>ನವದೆಹಲಿ, ಆ. 19– </strong>ತಮ್ಮ ಪುತ್ರನ ವ್ಯಾಪಾರ ವಹಿವಾಟಿನ ಬಗೆಗೆ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಸಭೆಗೆ ತಪ್ಪು ಹೇಳಿಕೆ ಕೊಟ್ಟುದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಸೂಚನೆಗೆ ಇಂದು ಲೋಕಸಭೆಯಲ್ಲಿ ಸುಲಭವಾಗಿ ಭಾರಿ ಬಹುಮತದಿಂದ ಪರಾಜಿತವಾಯಿತು.</p>.<p><strong>ಮುರಾರಜಿ ರಾಜೀನಾಮೆಗೆ ಲಿಮಯೆ ಒತ್ತಾಯ</strong></p>.<p><strong>ನವದೆಹಲಿ, ಆ. 19–</strong> ತಮ್ಮ ಪುತ್ರ ಶ್ರೀ ಕಾಂತಿ ದೇಸಾಯಿ ಅವರ ವ್ಯವಹಾರದ ಸಂಬಂಧದಲ್ಲಿ ‘ಸುಳ್ಳು’ ಹೇಳಿಕೆ ಕೊಟ್ಟಿರುವುದರ ಕಾರಣ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ರಾಜೀನಾಮೆ ಕೊಡಬೇಕೆಂದು ಸಂಯುಕ್ತ ಸೋಷಲಿಸ್ಟ್ ಪಕ್ಷದ ನಾಯಕ ಶ್ರೀ ಮಧು ಲಿಮಯೆ ಅವರು ಇಂದು ಲೋಕಸಭೆಯಲ್ಲಿ ಒತ್ತಾಯಿಸಿದರು.</p>.<p><strong>ಸದ್ಯ ಮಕ್ಕಳಿಲ್ಲವಲ್ಲ!</strong></p>.<p><strong>ನವದೆಹಲಿ, ಆ. 19</strong>–‘ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ಕಾಲದಲ್ಲಿ ಸದ್ಯ ನನಗೆ ಮಕ್ಕಳಿಲ್ಲವಲ್ಲ, ಅದೇ ಬಹು ಸಂತೋಷ’ ಎಂದು ಆಚಾರ್ಯ ಕೃಪಲಾನಿ ಇಂದು ಲೋಕಸಭೆಯಲ್ಲಿ ನುಡಿದಾಗ ಸದಸ್ಯರು ಮನಸಾರ ನಕ್ಕರು.</p>.<p><strong>ರಾಜ್ಯದ ಕರಡು ಯೋಜನೆ ಬಗ್ಗೆ ಉನ್ನತಮಟ್ಟದ ಚರ್ಚೆ</strong></p>.<p><strong>ಬೆಂಗಳೂರು, ಆ. 19–</strong> ರಾಜ್ಯದ ಯೋಜನಾ ಮಂಡಳಿ ರೂಪಿಸಿರುವ ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕರಡನ್ನು ಕುರಿತು ಸೆಪ್ಟೆಂಬರ್ 4 ಮತ್ತು 5ರಂದು ಯೋಜನಾ ಆಯೋಗ ಹಾಗೂ ರಾಜ್ಯದ ಪ್ರತಿನಿಧಿಗಳ ನಡುವೆ ಉನ್ನತಮಟ್ಟದ ಚರ್ಚೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>