<p>ದೆಹಲಿಯಲ್ಲಿ ದಶ ಸಹಸ್ರ ಟಾಂಗಾವಾಲಾಗಳ ಮುಷ್ಕರ</p><p>ದೆಹಲಿ, ಆಗಸ್ಟ್ 5– ಹುರುಳಿ ಪಡಿತರವನ್ನು ನಿಲ್ಲಿಸಿರುವುದನ್ನೂ ಮತ್ತು ತಮ್ಮ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಬಂಧಿಸಿರುವುದನ್ನೂ ವಿರೋಧಿಸಿ ದೆಹಲಿಯ ಹತ್ತು ಸಹಸ್ರ ಟಾಂಟಾವಾಲಾಗಳೂ, ಕುದುರೆಗಾಡಿ ಓಡಿಸುವವರೂ ಇಂದು ಮೂರು ದಿನಗಳ ಸತ್ಯಾಗ್ರಹ ಆರಂಭಿಸಿದ್ದಾರೆ.</p><p>ಪಾರ್ಲಿಮೆಂಟ್ ಭವನದ ಮುಂದೆ ನಿನ್ನೆ ಪ್ರದರ್ಶನ ನಡೆಸಿದುದಕ್ಕಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ 43 ಮಂದಿ ಟಾಂಗಾವಾಲಾಗಳನ್ನು ದಸ್ತಗಿರಿ ಮಾಡಲಾಯಿತು.</p><p>ಅನ್ನ ಕೇಳಿದವರಿಗೆ ಅಶ್ರುವಾಯು</p><p>ಬರ್ಹ್ಯಾಂಪುರ, ಆಗಸ್ಟ್ 5– ಅನ್ನ ಬೇಡಿ ಘೋಷಣೆಗಳನ್ನು ಕೂಗುತ್ತ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಮುಂದೆ ಪ್ರದರ್ಶನ ಮಾಡಿದ 5,000 ಮಂದಿ ಸ್ತ್ರೀ, ಬಾಲರಾದಿಯಾದ ಗುಂಪನ್ನು ಚೆದುರಿಸುವ ಸಲುವಾಗಿ ಪೊಲೀಸರು ಅಶ್ರು ಬಾಂಬ್ಗಳನ್ನು ಎಸೆದಾಗ ಹಲವು ಜನ ಮೂರ್ಛೆಗೊಂಡರು. ಆ ನಂತರ ಪೊಲೀಸರು ಲಾಠಿ ಬೀಸಿ 30 ಮಂದಿ ಬಾಲ–ಬಾಲಿಕಿಯರನ್ನು ದಸ್ತಗಿರಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೆಹಲಿಯಲ್ಲಿ ದಶ ಸಹಸ್ರ ಟಾಂಗಾವಾಲಾಗಳ ಮುಷ್ಕರ</p><p>ದೆಹಲಿ, ಆಗಸ್ಟ್ 5– ಹುರುಳಿ ಪಡಿತರವನ್ನು ನಿಲ್ಲಿಸಿರುವುದನ್ನೂ ಮತ್ತು ತಮ್ಮ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಬಂಧಿಸಿರುವುದನ್ನೂ ವಿರೋಧಿಸಿ ದೆಹಲಿಯ ಹತ್ತು ಸಹಸ್ರ ಟಾಂಟಾವಾಲಾಗಳೂ, ಕುದುರೆಗಾಡಿ ಓಡಿಸುವವರೂ ಇಂದು ಮೂರು ದಿನಗಳ ಸತ್ಯಾಗ್ರಹ ಆರಂಭಿಸಿದ್ದಾರೆ.</p><p>ಪಾರ್ಲಿಮೆಂಟ್ ಭವನದ ಮುಂದೆ ನಿನ್ನೆ ಪ್ರದರ್ಶನ ನಡೆಸಿದುದಕ್ಕಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ 43 ಮಂದಿ ಟಾಂಗಾವಾಲಾಗಳನ್ನು ದಸ್ತಗಿರಿ ಮಾಡಲಾಯಿತು.</p><p>ಅನ್ನ ಕೇಳಿದವರಿಗೆ ಅಶ್ರುವಾಯು</p><p>ಬರ್ಹ್ಯಾಂಪುರ, ಆಗಸ್ಟ್ 5– ಅನ್ನ ಬೇಡಿ ಘೋಷಣೆಗಳನ್ನು ಕೂಗುತ್ತ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಮುಂದೆ ಪ್ರದರ್ಶನ ಮಾಡಿದ 5,000 ಮಂದಿ ಸ್ತ್ರೀ, ಬಾಲರಾದಿಯಾದ ಗುಂಪನ್ನು ಚೆದುರಿಸುವ ಸಲುವಾಗಿ ಪೊಲೀಸರು ಅಶ್ರು ಬಾಂಬ್ಗಳನ್ನು ಎಸೆದಾಗ ಹಲವು ಜನ ಮೂರ್ಛೆಗೊಂಡರು. ಆ ನಂತರ ಪೊಲೀಸರು ಲಾಠಿ ಬೀಸಿ 30 ಮಂದಿ ಬಾಲ–ಬಾಲಿಕಿಯರನ್ನು ದಸ್ತಗಿರಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>