<p><strong>ರಾಜಾ ತ್ರಿಭುವನ್ ಮತ್ತೆ ನೇಪಾಳ ಸಿಂಹಾಸನಕ್ಕೆ</strong> <strong>ನವದೆಹಲಿ</strong>, ಜ. 8– ರಾಜಾ ತ್ರಿಭುವನರು ಮುಂದೆಯೂ ನೇಪಾಳದ ರಾಜರಾಗಿರುವರೆಂದು ನೇಪಾಳದ ಪ್ರಧಾನಿ ಮಹಾರಾಜಾ ಮೋಹನ್ ಷಂಷೀರ್ಜಂಗ್ ಬಹದ್ದೂರರು ಖಟ್ಮುಂಡುವಿನಲ್ಲಿ ಪ್ರಕಟಿಸಿದರು.</p>.<p>1952ಕ್ಕಿಂತ ವಿಳಂಬವಾಗದಂತೆ ರಾಜ್ಯಾಂಗದ ಸಭೆಯೊಂದನ್ನು ಕರೆದು ಹದಿನಾಲ್ಕು ಮಂದಿಯನ್ನೊಳಗೊಂಡ ತಾತ್ಕಾಲಿಕ ಸಚಿವ ಸಂಪುಟವನ್ನು ಆದಷ್ಟು ಶೀಘ್ರವಾಗಿ ರಚಿಸಬೇಕೆಂಬ ನಿರ್ಧಾರವನ್ನೂ ಪ್ರಧಾನಿ ಘೋಷಿಸಿದರು.</p>.<p>ಮಧ್ಯಂತರ ಕಾಲದಲ್ಲಿ ರಚಿತವಾಗಬೇಕಾದ ತಾತ್ಕಾಲಿಕ ಸಚಿವ ಸಂಪುಟದಲ್ಲಿ ಏಳು ಮಂದಿ ಜನತಾ ಪ್ರತಿನಿಧಿಗಳಿರಬೇಕು. ಸಚಿವ ಸಂಪುಟವು ಜಂಟಿ ಜವಾಬ್ದಾರಿ ತತ್ತ್ವದ ಮೇಲೆ ಕಾರ್ಯ ನಿರ್ವಹಿಸಬೇಕು ಎಂದು ಏಳು ಪುಟಗಳಷ್ಟು ವಿಸ್ತಾರವಾಗಿರುವ ಘೋಷಣೆಯಲ್ಲಿ ತಿಳಿಸಲಾಗಿದೆ.</p>.<p><strong>ಅತೃಪ್ತ ಪಾಕಿಸ್ತಾನಿಗಳ ಕಣ್ಣೊರೆಸುವ ಕುತಂತ್ರ</strong></p>.<p>ಮುಂಬೈ, ಜ. 8– ಕಾಮನ್ವೆಲ್ತ್ ಪ್ರಧಾನಿಗಳ ಸಮ್ಮೇಳನದಲ್ಲಿ ಕಾಶ್ಮೀರ ಪ್ರಶ್ನೆ ಚರ್ಚೆಗೆ ಬರಬೇಕೆಂದು ಪ್ರಧಾನಿ ಲಿಯಾಕತ್ ಅಲಿಖಾನರು ಮಾಡಿದ ಪ್ರಯತ್ನ ಪಾಕಿಸ್ತಾನದ ಜನತೆಯ ವಿಶ್ವಾಸಗಳಿಸಲಿಕ್ಕಲ್ಲದೆ ಬೇರೆಯಲ್ಲ ಎಂಬುವುದಾಗಿ ಕಾಶ್ಮೀರ ಪ್ರಧಾನಿ ಶೇಖ್ ಮಹಮದ್ ಅಬ್ದುಲ್ಲಾರವರು ಮುಂಬೈನಲ್ಲಿ ತಿಳಿಸಿದರು.</p>.<p>ಪಾಕಿಸ್ತಾನದ ಪ್ರಸ್ತುತ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಪಾಕಿಸ್ತಾನದ ಜನತೆಯಲ್ಲಿ ತೀವ್ರವಾದ ಅತೃಪ್ತಿ ಮತ್ತು ಅಸಮಾಧಾನ ಉಂಟು ಮಾಡಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಾ ತ್ರಿಭುವನ್ ಮತ್ತೆ ನೇಪಾಳ ಸಿಂಹಾಸನಕ್ಕೆ</strong> <strong>ನವದೆಹಲಿ</strong>, ಜ. 8– ರಾಜಾ ತ್ರಿಭುವನರು ಮುಂದೆಯೂ ನೇಪಾಳದ ರಾಜರಾಗಿರುವರೆಂದು ನೇಪಾಳದ ಪ್ರಧಾನಿ ಮಹಾರಾಜಾ ಮೋಹನ್ ಷಂಷೀರ್ಜಂಗ್ ಬಹದ್ದೂರರು ಖಟ್ಮುಂಡುವಿನಲ್ಲಿ ಪ್ರಕಟಿಸಿದರು.</p>.<p>1952ಕ್ಕಿಂತ ವಿಳಂಬವಾಗದಂತೆ ರಾಜ್ಯಾಂಗದ ಸಭೆಯೊಂದನ್ನು ಕರೆದು ಹದಿನಾಲ್ಕು ಮಂದಿಯನ್ನೊಳಗೊಂಡ ತಾತ್ಕಾಲಿಕ ಸಚಿವ ಸಂಪುಟವನ್ನು ಆದಷ್ಟು ಶೀಘ್ರವಾಗಿ ರಚಿಸಬೇಕೆಂಬ ನಿರ್ಧಾರವನ್ನೂ ಪ್ರಧಾನಿ ಘೋಷಿಸಿದರು.</p>.<p>ಮಧ್ಯಂತರ ಕಾಲದಲ್ಲಿ ರಚಿತವಾಗಬೇಕಾದ ತಾತ್ಕಾಲಿಕ ಸಚಿವ ಸಂಪುಟದಲ್ಲಿ ಏಳು ಮಂದಿ ಜನತಾ ಪ್ರತಿನಿಧಿಗಳಿರಬೇಕು. ಸಚಿವ ಸಂಪುಟವು ಜಂಟಿ ಜವಾಬ್ದಾರಿ ತತ್ತ್ವದ ಮೇಲೆ ಕಾರ್ಯ ನಿರ್ವಹಿಸಬೇಕು ಎಂದು ಏಳು ಪುಟಗಳಷ್ಟು ವಿಸ್ತಾರವಾಗಿರುವ ಘೋಷಣೆಯಲ್ಲಿ ತಿಳಿಸಲಾಗಿದೆ.</p>.<p><strong>ಅತೃಪ್ತ ಪಾಕಿಸ್ತಾನಿಗಳ ಕಣ್ಣೊರೆಸುವ ಕುತಂತ್ರ</strong></p>.<p>ಮುಂಬೈ, ಜ. 8– ಕಾಮನ್ವೆಲ್ತ್ ಪ್ರಧಾನಿಗಳ ಸಮ್ಮೇಳನದಲ್ಲಿ ಕಾಶ್ಮೀರ ಪ್ರಶ್ನೆ ಚರ್ಚೆಗೆ ಬರಬೇಕೆಂದು ಪ್ರಧಾನಿ ಲಿಯಾಕತ್ ಅಲಿಖಾನರು ಮಾಡಿದ ಪ್ರಯತ್ನ ಪಾಕಿಸ್ತಾನದ ಜನತೆಯ ವಿಶ್ವಾಸಗಳಿಸಲಿಕ್ಕಲ್ಲದೆ ಬೇರೆಯಲ್ಲ ಎಂಬುವುದಾಗಿ ಕಾಶ್ಮೀರ ಪ್ರಧಾನಿ ಶೇಖ್ ಮಹಮದ್ ಅಬ್ದುಲ್ಲಾರವರು ಮುಂಬೈನಲ್ಲಿ ತಿಳಿಸಿದರು.</p>.<p>ಪಾಕಿಸ್ತಾನದ ಪ್ರಸ್ತುತ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಪಾಕಿಸ್ತಾನದ ಜನತೆಯಲ್ಲಿ ತೀವ್ರವಾದ ಅತೃಪ್ತಿ ಮತ್ತು ಅಸಮಾಧಾನ ಉಂಟು ಮಾಡಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>