<p><strong>ಕಾವೇರಿ ವಿವಾದ: ‘ಒಂದೆರಡು ತಿಂಗಳಲ್ಲಿ ಒಪ್ಪಂದ ಆಗದಿದ್ದರೆ ಅನ್ಯಕ್ರಮ’</strong></p>.<p><strong>ಮದರಾಸು, ಆ. 4– </strong>ಕಾವೇರಿ ಜಲವಿವಾದದ ಬಗ್ಗೆ ಮುಂದಿನ ಒಂದೆರಡು ತಿಂಗಳಲ್ಲಿ ತಮಿಳುನಾಡು ಹಾಗೂ ಮೈಸೂರು ರಾಜ್ಯಗಳ ನಡುವೆ ಒಪ್ಪಂದ ಉಂಟಾಗದಿದ್ದರೆ ಇತ್ಯರ್ಥಕ್ಕೆ ‘ಬೇರೆ ಕ್ರಮಗಳನ್ನು’ ಅನುಸರಿಸಬೇಕು ಎಂದು ಕೇಂದ್ರ ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್.ರಾವ್ ಇಂದು ಇಲ್ಲಿ ಹೇಳಿದರು.</p>.<p>ಕಾವೇರಿ ಜಲಾನಯನ ಪ್ರದೇಶದಲ್ಲಿ ಕೇಂದ್ರದ ಮಂಜೂರಾತಿ ಇಲ್ಲದೆ ಮೈಸೂರು ಸರ್ಕಾರ ಯೋಜನಾ ನಿರ್ಮಾಣ ಕಾರ್ಯ ನಡೆಸುತ್ತಿದೆಯೆಂದು ತಮಿಳುನಾಡು ಲೋಕೋಪಯೋಗಿ ಮತ್ತು ಕೈಗಾರಿಕಾ ಸಚಿವರು ತಮಗೆ ಕಟುವಾಗಿ ದೂರಿತ್ತರೆಂದು ಕೆ.ಎಲ್.ರಾವ್ ಸುದ್ದಿಗಾರರಿಗೆ ತಿಳಿಸಿದರು.<br /><br /><strong>ಎಂಜಿನಿಯರಿಂಗ್ ಪ್ರವೇಶಕ್ಕೆ ಕನಿಷ್ಠ ಅಂಕಮಿತಿ ವಿನಾಯಿತಿ</strong></p>.<p><strong>ಮೈಸೂರು, ಆ. 4– </strong>ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕನಿಷ್ಠ ಅಂಕಗಳ ನಿಯಮದಿಂದ ವಿನಾಯಿತಿ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಅಕಾಡೆಮಿಕ್ ಕೌನ್ಸಿಲ್ನ ಸ್ಥಾಯಿ ಸಮಿತಿ ಇಂದು ನಿರ್ಧರಿಸಿತು.</p>.<p>ಇದರಂತೆ, ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸುವ ಎಲ್ಲ ಅಭ್ಯರ್ಥಿಗಳಿಗೂ ಅವರು ಪಡೆದಿರುವ ಅಂಕ ಎಷ್ಟೇ ಇರಲಿ ಪ್ರವೇಶ ನೀಡಲಾಗುವುದು.</p>.<p>ಐಚ್ಛಿಕ ವಿಷಯಗಳಲ್ಲಿ ಶೇಕಡ 45ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮಾತ್ರ ಇಲ್ಲಿಯವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಾವಕಾಶ ಅರ್ಹತೆ ಪಡೆದಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ ವಿವಾದ: ‘ಒಂದೆರಡು ತಿಂಗಳಲ್ಲಿ ಒಪ್ಪಂದ ಆಗದಿದ್ದರೆ ಅನ್ಯಕ್ರಮ’</strong></p>.<p><strong>ಮದರಾಸು, ಆ. 4– </strong>ಕಾವೇರಿ ಜಲವಿವಾದದ ಬಗ್ಗೆ ಮುಂದಿನ ಒಂದೆರಡು ತಿಂಗಳಲ್ಲಿ ತಮಿಳುನಾಡು ಹಾಗೂ ಮೈಸೂರು ರಾಜ್ಯಗಳ ನಡುವೆ ಒಪ್ಪಂದ ಉಂಟಾಗದಿದ್ದರೆ ಇತ್ಯರ್ಥಕ್ಕೆ ‘ಬೇರೆ ಕ್ರಮಗಳನ್ನು’ ಅನುಸರಿಸಬೇಕು ಎಂದು ಕೇಂದ್ರ ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್.ರಾವ್ ಇಂದು ಇಲ್ಲಿ ಹೇಳಿದರು.</p>.<p>ಕಾವೇರಿ ಜಲಾನಯನ ಪ್ರದೇಶದಲ್ಲಿ ಕೇಂದ್ರದ ಮಂಜೂರಾತಿ ಇಲ್ಲದೆ ಮೈಸೂರು ಸರ್ಕಾರ ಯೋಜನಾ ನಿರ್ಮಾಣ ಕಾರ್ಯ ನಡೆಸುತ್ತಿದೆಯೆಂದು ತಮಿಳುನಾಡು ಲೋಕೋಪಯೋಗಿ ಮತ್ತು ಕೈಗಾರಿಕಾ ಸಚಿವರು ತಮಗೆ ಕಟುವಾಗಿ ದೂರಿತ್ತರೆಂದು ಕೆ.ಎಲ್.ರಾವ್ ಸುದ್ದಿಗಾರರಿಗೆ ತಿಳಿಸಿದರು.<br /><br /><strong>ಎಂಜಿನಿಯರಿಂಗ್ ಪ್ರವೇಶಕ್ಕೆ ಕನಿಷ್ಠ ಅಂಕಮಿತಿ ವಿನಾಯಿತಿ</strong></p>.<p><strong>ಮೈಸೂರು, ಆ. 4– </strong>ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕನಿಷ್ಠ ಅಂಕಗಳ ನಿಯಮದಿಂದ ವಿನಾಯಿತಿ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಅಕಾಡೆಮಿಕ್ ಕೌನ್ಸಿಲ್ನ ಸ್ಥಾಯಿ ಸಮಿತಿ ಇಂದು ನಿರ್ಧರಿಸಿತು.</p>.<p>ಇದರಂತೆ, ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸುವ ಎಲ್ಲ ಅಭ್ಯರ್ಥಿಗಳಿಗೂ ಅವರು ಪಡೆದಿರುವ ಅಂಕ ಎಷ್ಟೇ ಇರಲಿ ಪ್ರವೇಶ ನೀಡಲಾಗುವುದು.</p>.<p>ಐಚ್ಛಿಕ ವಿಷಯಗಳಲ್ಲಿ ಶೇಕಡ 45ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮಾತ್ರ ಇಲ್ಲಿಯವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಾವಕಾಶ ಅರ್ಹತೆ ಪಡೆದಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>