<h2>ಮೈಸೂರು ಸರ್ಕಾರ ಸಾಲ ಎತ್ತುವ ಸಂಭವ ಕಡಿಮೆ</h2>.<p><strong>ಬೆಂಗಳೂರು, ಜುಲೈ 10–</strong> ‘ಮೈಸೂರು ಸರ್ಕಾರ ಸಾಲ ಎತ್ತಬೇಕೇ..? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಅವಶ್ಯಬಿದ್ದಲ್ಲಿ ಸಾಲ ಎತ್ತಲಾಗುವುದು. ಆದರೆ, ಸಂಭವ ಕಡಿಮೆ’ ಎಂದು ಇನ್ಛಾರ್ಜ್ ಮುಖ್ಯಮಂತ್ರಿ ಹೆಚ್.ಸಿ.ದಾಸಪ್ಪನವರು ಇಂದು ಸಂಜೆ ಅವರ ಛೇಂಬರ್ಸ್ನಲ್ಲಿ ಪತ್ರಿಕಾ ಪ್ರತಿನಿಧಿಗಳು ಭೇಟಿ ಮಾಡಿದಾಗ ತಿಳಿಸಿದರು.</p>.<h2>ಮದರಾಸ್ ಸರ್ಕಾರದ ಕೋಮುವಾರು ಆಜ್ಞೆ </h2>.<p><strong>ಮದರಾಸ್, ಜುಲೈ 10</strong>– ಮದರಾಸು ಸಂಸ್ಥಾನದಲ್ಲಿ ಕಾಲೇಜುಗಳಿಗೆ ಪ್ರವೇಶವನ್ನು ಮಿತಿಗೊಳಿಸುವ ಕೋಮುವಾರು ಆಜ್ಞೆಯು ಶಾಸನ ಬಾಹಿರವಲ್ಲವೆಂದೂ, ಅದು ಯಾವ ರೀತಿಯಲ್ಲೂ ಭಾರತ ರಾಜ್ಯಾಂಗದ ನಿಯಮಾವಳಿಯನ್ನು ಉಲ್ಲಂಘಿಸುವುದಿಲ್ಲವೆಂದೂ ಮದರಾಸ್ ಸರ್ಕಾರದವರು ಇಂದು ಪ್ರತಿಪಾದಿಸಿದರು.</p>.<p>ಚೀಪ್ ಜಸ್ಟೀಸ್ ಮತ್ತು ಜಸ್ಟೀಸ್ ಸೋಮಸುಂದರಂರವರ ಮುಂದೆ ಅಡ್ವೋಕೇಟ್ ಜನರಲ್ ಅವರು ಅರ್ಜಿಯೊಂದನ್ನು ಇಂದು ಸಲ್ಲಿಸಿ, ಸರ್ಕಾರದ ಕೋಮುವಾರು ಆಜ್ಞೆಯ ನ್ಯಾಯಬದ್ಧತೆಯನ್ನು ಪ್ರಶ್ನಿಸುವ ಕಾಲೇಜು ಪ್ರವೇಶಾಪೇಕ್ಷಿಗಳಾದ ವಿದ್ಯಾರ್ಥಿಯೊಬ್ಬರ ಮ್ಯಾಂಡಮಸ್ ಅರ್ಜಿಯನ್ನು ವಿರೋಧಿಸಿದರು.</p>.<p>ಕಾಲೇಜು ಪ್ರವೇಶದ ಬಗ್ಗೆ ಸರ್ಕಾರದ ಕೋಮುವಾರು ಆಜ್ಞೆ ನ್ಯಾಯಬಾಹಿರವಲ್ಲವೆಂದೂ, ಈಗಿನ ಆಜ್ಞೆಯು ಪ್ರದೇಶಗಳ ಜನಸಂಖ್ಯೆ, ಸಾಕ್ಷರತೆ, ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತಂದುಕೊಂಡು, ಜನತೆಯ ದುರ್ಬಲ ಹಾಗೂ ಹಿಂದುಳಿದ ವಿಭಾಗಗಳ ಆರ್ಥಿಕ ಹಿತಕ್ಕೆ ರಾಜ್ಯಾಂಗದಲ್ಲಿ ಅವಕಾಶ ದಕ್ಕಿರುವುದಕ್ಕೆ ಅನುಸಾರವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಮೈಸೂರು ಸರ್ಕಾರ ಸಾಲ ಎತ್ತುವ ಸಂಭವ ಕಡಿಮೆ</h2>.<p><strong>ಬೆಂಗಳೂರು, ಜುಲೈ 10–</strong> ‘ಮೈಸೂರು ಸರ್ಕಾರ ಸಾಲ ಎತ್ತಬೇಕೇ..? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಅವಶ್ಯಬಿದ್ದಲ್ಲಿ ಸಾಲ ಎತ್ತಲಾಗುವುದು. ಆದರೆ, ಸಂಭವ ಕಡಿಮೆ’ ಎಂದು ಇನ್ಛಾರ್ಜ್ ಮುಖ್ಯಮಂತ್ರಿ ಹೆಚ್.ಸಿ.ದಾಸಪ್ಪನವರು ಇಂದು ಸಂಜೆ ಅವರ ಛೇಂಬರ್ಸ್ನಲ್ಲಿ ಪತ್ರಿಕಾ ಪ್ರತಿನಿಧಿಗಳು ಭೇಟಿ ಮಾಡಿದಾಗ ತಿಳಿಸಿದರು.</p>.<h2>ಮದರಾಸ್ ಸರ್ಕಾರದ ಕೋಮುವಾರು ಆಜ್ಞೆ </h2>.<p><strong>ಮದರಾಸ್, ಜುಲೈ 10</strong>– ಮದರಾಸು ಸಂಸ್ಥಾನದಲ್ಲಿ ಕಾಲೇಜುಗಳಿಗೆ ಪ್ರವೇಶವನ್ನು ಮಿತಿಗೊಳಿಸುವ ಕೋಮುವಾರು ಆಜ್ಞೆಯು ಶಾಸನ ಬಾಹಿರವಲ್ಲವೆಂದೂ, ಅದು ಯಾವ ರೀತಿಯಲ್ಲೂ ಭಾರತ ರಾಜ್ಯಾಂಗದ ನಿಯಮಾವಳಿಯನ್ನು ಉಲ್ಲಂಘಿಸುವುದಿಲ್ಲವೆಂದೂ ಮದರಾಸ್ ಸರ್ಕಾರದವರು ಇಂದು ಪ್ರತಿಪಾದಿಸಿದರು.</p>.<p>ಚೀಪ್ ಜಸ್ಟೀಸ್ ಮತ್ತು ಜಸ್ಟೀಸ್ ಸೋಮಸುಂದರಂರವರ ಮುಂದೆ ಅಡ್ವೋಕೇಟ್ ಜನರಲ್ ಅವರು ಅರ್ಜಿಯೊಂದನ್ನು ಇಂದು ಸಲ್ಲಿಸಿ, ಸರ್ಕಾರದ ಕೋಮುವಾರು ಆಜ್ಞೆಯ ನ್ಯಾಯಬದ್ಧತೆಯನ್ನು ಪ್ರಶ್ನಿಸುವ ಕಾಲೇಜು ಪ್ರವೇಶಾಪೇಕ್ಷಿಗಳಾದ ವಿದ್ಯಾರ್ಥಿಯೊಬ್ಬರ ಮ್ಯಾಂಡಮಸ್ ಅರ್ಜಿಯನ್ನು ವಿರೋಧಿಸಿದರು.</p>.<p>ಕಾಲೇಜು ಪ್ರವೇಶದ ಬಗ್ಗೆ ಸರ್ಕಾರದ ಕೋಮುವಾರು ಆಜ್ಞೆ ನ್ಯಾಯಬಾಹಿರವಲ್ಲವೆಂದೂ, ಈಗಿನ ಆಜ್ಞೆಯು ಪ್ರದೇಶಗಳ ಜನಸಂಖ್ಯೆ, ಸಾಕ್ಷರತೆ, ಆರ್ಥಿಕ ಪರಿಸ್ಥಿತಿಗಳನ್ನು ಗಣನೆಗೆ ತಂದುಕೊಂಡು, ಜನತೆಯ ದುರ್ಬಲ ಹಾಗೂ ಹಿಂದುಳಿದ ವಿಭಾಗಗಳ ಆರ್ಥಿಕ ಹಿತಕ್ಕೆ ರಾಜ್ಯಾಂಗದಲ್ಲಿ ಅವಕಾಶ ದಕ್ಕಿರುವುದಕ್ಕೆ ಅನುಸಾರವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>