<p>ಏಕೀಕರಣದ ಹರಿಕಾರ ಮುತ್ಸದ್ದಿ ಎಸ್ಸೆನ್ ಇನ್ನಿಲ್ಲ</p>.<p>ಚಿತ್ರದುರ್ಗ, ಆಗಸ್ಟ್ 8– ಕರ್ನಾಟಕ ಏಕೀಕರಣದ ಹರಿಕಾರ ಎಂದೇ ಹೆಸರಾದ ಹಿರಿಯ ಮುತ್ಸದ್ದಿ, <br />ಅಪ್ಪಟ ಗಾಂಧೀವಾದಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಇನ್ನಿಲ್ಲ.</p>.<p>ಚಿತ್ರದುರ್ಗದ ತಮ್ಮ ಮನೆ ‘ವಿನಯ’ದಲ್ಲಿ ಕೆಲವು ದಿನಗಳಿಂದ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ್ದ ಈ ಹಿರಿಯ ಜೀವ, ಮಂಗಳವಾರ ರಾತ್ರಿ 10.30ರ ಹೊತ್ತಿಗೆ ಕೊನೆಯುಸಿರು ಎಳೆದರು.</p>.<p>ಹೃದಯಾಘಾತದಿಂದ ತತ್ತರಿಸಿದ ಅವರನ್ನು ಉಳಿಸಿಕೊಳ್ಳಲು ವೈದ್ಯರು ದೊಡ್ಡ ಹೋರಾಟವನ್ನೇ ನಡೆಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.</p>.<p>ಹಿಜ್ಬುಲ್ ಕದನ ವಿರಾಮ ವಾಪಸ್</p>.<p>ಇಸ್ಲಾಮಾಬಾದ್, ಆಗಸ್ಟ್ 8 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಹಠಾತ್ತಾಗಿ ಘೋಷಿಸಿದ್ದ ಕದನ ವಿರಾಮವನ್ನು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಇಂದು ಸಂಜೆ ವಾಪಸು ಪಡೆಯಿತು.</p>.<p>ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಪಾಕಿಸ್ತಾನವನ್ನೂ ಸೇರಿಸಿಕೊಂಡು ತ್ರಿಪಕ್ಷೀಯ ಮಾತುಕತೆಗೆ ಬರುವಂತೆ ನೀಡಿದ್ದ ಕರೆಗೆ, ‘ಭಾರತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ’ ಎಂದು ಅದು ದೂಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಏಕೀಕರಣದ ಹರಿಕಾರ ಮುತ್ಸದ್ದಿ ಎಸ್ಸೆನ್ ಇನ್ನಿಲ್ಲ</p>.<p>ಚಿತ್ರದುರ್ಗ, ಆಗಸ್ಟ್ 8– ಕರ್ನಾಟಕ ಏಕೀಕರಣದ ಹರಿಕಾರ ಎಂದೇ ಹೆಸರಾದ ಹಿರಿಯ ಮುತ್ಸದ್ದಿ, <br />ಅಪ್ಪಟ ಗಾಂಧೀವಾದಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಇನ್ನಿಲ್ಲ.</p>.<p>ಚಿತ್ರದುರ್ಗದ ತಮ್ಮ ಮನೆ ‘ವಿನಯ’ದಲ್ಲಿ ಕೆಲವು ದಿನಗಳಿಂದ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ್ದ ಈ ಹಿರಿಯ ಜೀವ, ಮಂಗಳವಾರ ರಾತ್ರಿ 10.30ರ ಹೊತ್ತಿಗೆ ಕೊನೆಯುಸಿರು ಎಳೆದರು.</p>.<p>ಹೃದಯಾಘಾತದಿಂದ ತತ್ತರಿಸಿದ ಅವರನ್ನು ಉಳಿಸಿಕೊಳ್ಳಲು ವೈದ್ಯರು ದೊಡ್ಡ ಹೋರಾಟವನ್ನೇ ನಡೆಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.</p>.<p>ಹಿಜ್ಬುಲ್ ಕದನ ವಿರಾಮ ವಾಪಸ್</p>.<p>ಇಸ್ಲಾಮಾಬಾದ್, ಆಗಸ್ಟ್ 8 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಹಠಾತ್ತಾಗಿ ಘೋಷಿಸಿದ್ದ ಕದನ ವಿರಾಮವನ್ನು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಇಂದು ಸಂಜೆ ವಾಪಸು ಪಡೆಯಿತು.</p>.<p>ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಪಾಕಿಸ್ತಾನವನ್ನೂ ಸೇರಿಸಿಕೊಂಡು ತ್ರಿಪಕ್ಷೀಯ ಮಾತುಕತೆಗೆ ಬರುವಂತೆ ನೀಡಿದ್ದ ಕರೆಗೆ, ‘ಭಾರತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ’ ಎಂದು ಅದು ದೂಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>