ಲೋಕಸಭೆ ವಿಸರ್ಜನೆ ತಪ್ಪಿಸಲು ಯತ್ನ: ಸರ್ಕಾರ ರಚನೆ– ಮತ್ತೆ ಸಂಯುಕ್ತ ರಂಗ, ಕಾಂಗ್ರೆಸ್ ನಡುವೆ ಚರ್ಚೆ
ನವದೆಹಲಿ, ಡಿ. 2– ಲೋಕಸಭೆಯ ವಿಸರ್ಜನೆ ಅನಿವಾರ್ಯ ಎನ್ನುವ ಪರಿಸ್ಥಿತಿಉದ್ಭವಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಬದಲಾಯಿಸಿದ್ದರಿಂದ ಸರ್ಕಾರ ರಚನೆಯ ಬಗೆಗೆ ಸಂಯುಕ್ತ ರಂಗವು ಮತ್ತೆ ಅದರ ಜೊತೆ ಮಾತುಕತೆಯನ್ನು ಪುನರ್ ಆರಂಭಿಸಿದೆ.
ಪಾಕ್ ಅಧ್ಯಕ್ಷರ ರಾಜೀನಾಮೆ
ಇಸ್ಲಾಮಾಬಾದ್, ಡಿ. 2 (ಎಪಿ)– ಪಾಕಿಸ್ತಾನದ ಅಧ್ಯಕ್ಷ ಫಾರೂಕ್ ಅಹಮದ್ ಲೆಘಾರಿ ಇಂದು ರಾಜೀನಾಮೆ ನೀಡಿದ್ದಾರೆ. ಸಂವಿಧಾನದ ಅನ್ವಯ ಸೆನೆಟ್ನ ಅಧ್ಯಕ್ಷ ವಾಸಿಂ ಸಜ್ಜದ್ ತಾತ್ಕಾಲಿಕ ಅಧ್ಯಕ್ಷರಾಗಲಿದ್ದಾರೆ.