<p id="thickbox_headline"><strong>ರಾಜ್ಯಸಭೆಗೆ ಪ್ರಧಾನಿ ಸ್ಪರ್ಧೆ: ಸಚಿವ ಮಿಶ್ರಾ ಟೀಕೆ</strong></p>.<p><strong>ಬೆಂಗಳೂರು, ಸೆ. 14–</strong> ಜನಪ್ರಿಯ ಪ್ರಧಾನಿ ಯೊಬ್ಬರು ಜನತೆಯಿಂದ ನೇರವಾಗಿ ಲೋಕಸಭೆಗೆ ಆಯ್ಕೆ ಆಗಬೇಕೇ ಹೊರತೂ ವಿಧಾನಸಭೆಯಂಥ ಹಿಂದಿನ ಬಾಗಿಲಿಂದ ಸಂಸತ್ತಿಗೆ ಆಯ್ಕೆಯಾಗುವುದು ಸಲ್ಲ ಎಂದು ಎಚ್.ಡಿ.ದೇವೇಗೌಡರ ಸಂಪುಟದ ಕೃಷಿ ಸಚಿವ. ಸಿಪಿಐ ಮುಖಂಡ ಚತುರಾನನ ಮಿಶ್ರಾ ಇಂದು ಇಲ್ಲಿ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಗೌಡರು ರಾಜ್ಯಸಭೆಗೆ ಆಯ್ಕೆ ಆಗಲು ನಡೆಸುತ್ತಿರುವ ಪ್ರಯತ್ನ ನನಗಂತೂ ಗೊತ್ತಿಲ್ಲ. ಅವರು ಈ ವಿಚಾರವನ್ನು ಸಂಯುಕ್ತ ರಂಗದ ಸದಸ್ಯ ಪಕ್ಷಗಳೊಂದಿಗೆ ಚರ್ಚಿಸಿದಂತಿಲ್ಲ; ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಜನಪ್ರಿಯ ಪ್ರಧಾನಿಯೊಬ್ಬರು ನೇರವಾಗಿ ಜನತೆಯಿಂದಲೇ ಆಯ್ಕೆಯಾಗಬೇಕು’ ಎಂದು ಸುದ್ದಿಗಾರರಿಗೆ ಹೇಳಿದರು.</p>.<p><strong>ಕಾಫಿ ಕಡ್ಡಾಯ ಸಂಗ್ರಹ ಪದ್ಧತಿ ಪೂರ್ಣ ರದ್ದು</strong></p>.<p><strong>ನವದೆಹಲಿ, ಸೆ. 14 (ಪಿಟಿಐ)– </strong>ಕಾಫಿ ಮಂಡಳಿಯು ದೊಡ್ಡ ಬೆಳೆಗಾರರಿಂದ ಕಡ್ಡಾಯವಾಗಿ ಮಾಡುತ್ತಿದ್ದ ಕಾಫಿ ಸಂಗ್ರಹಣೆ ಪದ್ಧತಿಯನ್ನು (ಪೂಲಿಂಗ್) ಸರ್ಕಾರ ರದ್ದುಪಡಿಸಿದೆ. ಇದರಿಂದ ಎಲ್ಳಾ ವರ್ಗಗಳ ಕಾಫಿ ಬೆಳೆಗಾರರು ತಾವು ಬೆಳೆದ ಎಲ್ಲಾ ಕಾಫಿ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ರಾಜ್ಯಸಭೆಗೆ ಪ್ರಧಾನಿ ಸ್ಪರ್ಧೆ: ಸಚಿವ ಮಿಶ್ರಾ ಟೀಕೆ</strong></p>.<p><strong>ಬೆಂಗಳೂರು, ಸೆ. 14–</strong> ಜನಪ್ರಿಯ ಪ್ರಧಾನಿ ಯೊಬ್ಬರು ಜನತೆಯಿಂದ ನೇರವಾಗಿ ಲೋಕಸಭೆಗೆ ಆಯ್ಕೆ ಆಗಬೇಕೇ ಹೊರತೂ ವಿಧಾನಸಭೆಯಂಥ ಹಿಂದಿನ ಬಾಗಿಲಿಂದ ಸಂಸತ್ತಿಗೆ ಆಯ್ಕೆಯಾಗುವುದು ಸಲ್ಲ ಎಂದು ಎಚ್.ಡಿ.ದೇವೇಗೌಡರ ಸಂಪುಟದ ಕೃಷಿ ಸಚಿವ. ಸಿಪಿಐ ಮುಖಂಡ ಚತುರಾನನ ಮಿಶ್ರಾ ಇಂದು ಇಲ್ಲಿ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಗೌಡರು ರಾಜ್ಯಸಭೆಗೆ ಆಯ್ಕೆ ಆಗಲು ನಡೆಸುತ್ತಿರುವ ಪ್ರಯತ್ನ ನನಗಂತೂ ಗೊತ್ತಿಲ್ಲ. ಅವರು ಈ ವಿಚಾರವನ್ನು ಸಂಯುಕ್ತ ರಂಗದ ಸದಸ್ಯ ಪಕ್ಷಗಳೊಂದಿಗೆ ಚರ್ಚಿಸಿದಂತಿಲ್ಲ; ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಜನಪ್ರಿಯ ಪ್ರಧಾನಿಯೊಬ್ಬರು ನೇರವಾಗಿ ಜನತೆಯಿಂದಲೇ ಆಯ್ಕೆಯಾಗಬೇಕು’ ಎಂದು ಸುದ್ದಿಗಾರರಿಗೆ ಹೇಳಿದರು.</p>.<p><strong>ಕಾಫಿ ಕಡ್ಡಾಯ ಸಂಗ್ರಹ ಪದ್ಧತಿ ಪೂರ್ಣ ರದ್ದು</strong></p>.<p><strong>ನವದೆಹಲಿ, ಸೆ. 14 (ಪಿಟಿಐ)– </strong>ಕಾಫಿ ಮಂಡಳಿಯು ದೊಡ್ಡ ಬೆಳೆಗಾರರಿಂದ ಕಡ್ಡಾಯವಾಗಿ ಮಾಡುತ್ತಿದ್ದ ಕಾಫಿ ಸಂಗ್ರಹಣೆ ಪದ್ಧತಿಯನ್ನು (ಪೂಲಿಂಗ್) ಸರ್ಕಾರ ರದ್ದುಪಡಿಸಿದೆ. ಇದರಿಂದ ಎಲ್ಳಾ ವರ್ಗಗಳ ಕಾಫಿ ಬೆಳೆಗಾರರು ತಾವು ಬೆಳೆದ ಎಲ್ಲಾ ಕಾಫಿ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>