ಬೆಂಗಳೂರು, ಫೆ. 12– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರುವರಿ 19ರಂದು ನಡೆಯಲಿರುವ ಚುನಾವಣೆಗೆ ಮೂರನೇ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ದಳದ ನಾಯಕರಲ್ಲಿ ಜಾತಿಮತ, ಪುರುಷ–ಮಹಿಳೆ, ಪ್ರಬಲ–ದುರ್ಬಲ ಕೋಮಿನ ಲೆಕ್ಕಾಚಾರದಲ್ಲಿ ತೆರೆಮರೆಯಲ್ಲಿ ನಡೆದ ಜಟಾಪಟಿ ಪಕ್ಷದಲ್ಲಿ ಅತೃಪ್ತಿಯ ಹೊಗೆಗೆ ಕಾರಣವಾಗಿದೆ.