ಬೆಂಗಳೂರು, ಸೆ. 26– ‘ಭಕ್ತಿಯ ತುಂಗಭದ್ರೆಯ ಮಹಾಪೂರದ’ ಪವಿತ್ರತಮ ವಾತಾವರಣ. ‘ಪೂಜ್ಯಾಯ ರಾಘವೇಂದ್ರಾಯ’ ಶ್ಲೋಕದ ನಿನಾದ. ಬೆಳಗಿನಿಂದ ರಾತ್ರಿಯವರೆಗೆ ಭಕ್ತಾದಿಗಳ ಯಾತ್ರಾಸ್ಥಳ– ಕೋಟೆ ಮೈದಾನದ ವಿಶಾಲವಾದ ಪರಿಮಳ ಮಂಟಪ.
ಪಕ್ಕದಲ್ಲಿದ್ದ ಮಂತ್ರಾಲಯ ಪ್ರದರ್ಶನ ನೋಡಲು ಕರಗದ ಕ್ಯೂ.
ಜಾತಿಮತ ಭೇದವಿಲ್ಲದೆ ಎಲ್ಲ ವರ್ಗದವರನ್ನೂ ಆಕರ್ಷಿಸಿದ ಶ್ರೀ ರಾಘವೇಂದ್ರ ಸ್ವಾಮಿಗಳ ತ್ರಿಶತಮಾನೋತ್ಸವದ ದ್ವಿತೀಯ ದಿನದ ಕಾರ್ಯಕ್ರಮ ಜನದಟ್ಟಣೆಯ ಯಾತ್ರಾಸ್ಥಳವಾಗಿ ಪರಿಣಮಿಸಿತು. ವಿಶಾಲವಾದ ಪೆಂಡಾಲ್ನಲ್ಲಿ ಸ್ಥಳ ಸಿಕ್ಕದೆ ಹೊರಗೆ ನಿಂತವರ ಸಂಖ್ಯೆ ಅಪಾರವಾಗಿತ್ತು.