ಬೆಂಗಳೂರು, ಸೆ.13– ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡ ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್. ತುಳಸೀದಾಸ್
ದಾಸಪ್ಪ ಅವರ ಚೀಟಿಗಳ ಕೆಲವೊಂದು ವಿಚಿತ್ರಗಳು ಮತಗಳ ಎಣಿಕೆ ಸಮಯದಲ್ಲಿ ಕಂಡು ಬಂದವು ಎಂದು ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಡಾ.ಎಚ್.ಎಲ್. ತಿಮ್ಮೇಗೌಡರ ಪರವಾಗಿ ಏಜೆಂಟರಾಗಿ ಕಾರ್ಯ ನಿರ್ವಹಿಸಿದ ಇಬ್ಬರು ಇಂದು ಮೈಸೂರು ಹೈಕೋರ್ಟಿನಲ್ಲಿ ಸಾಕ್ಷ್ಯಗಳನ್ನಿತ್ತರು.