<h2>ಆಲಮಟ್ಟಿ: ಈ ವರ್ಷ ಬಾಗಲಕೋಟೆಯ 4,000 ಮನೆಗಳ ಮುಳುಗಡೆ</h2>.<p>ವಿಜಾಪುರ, ಮೇ 27– ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ಆಲಮಟ್ಟಿ <br>ಅಣೆಕಟ್ಟೆಯಲ್ಲಿ 519.6 ಮೀಟರ್ವರೆಗೆ ನೀರು ಸಂಗ್ರಹಿಸಲು ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಅವಕಾಶ ಕಲ್ಪಿಸಿದ ಬಳಿಕ, ಇದಕ್ಕೆ ಸಂಬಂಧಿಸಿದ ಪುನರ್ವಸತಿ ಕಾರ್ಯಗಳು ಭರದಿಂದ ಮುಂದುವರಿದಿವೆ.</p>.<p>ವಿಶ್ವದಲ್ಲೇ ಅತಿ ದೊಡ್ಡದು ಎನಿಸಿರುವ, ಸುಮಾರು 20 ಲಕ್ಷ ಜನರಿಗೆ ಪುನರ್ವಸತಿ ಕಲ್ಪಿಸುವ ಚೀನಾದ ಯೋಜನೆಯೊಂದರ ಬಳಿಕ, ಕರ್ನಾಟಕದ ಈ ಕೃಷ್ಣಾ ಮೇಲ್ದಂಡೆ ಯೋಜನೆ ಎರಡನೇ ಅತಿದೊಡ್ಡ ಪುನರ್ವಸತಿ ಯೋಜನೆ ಎನಿಸಿದೆ. ಈ ಯೋಜನೆ ಪೂರ್ಣಗೊಂಡಾಗ ಒಟ್ಟಾರೆ ಸುಮಾರು 4 ಲಕ್ಷ ಮಂದಿ ಪುನರ್ವಸತಿ ಹೊಂದಬೇಕಿದೆ.</p>.<h2>ನೀರಿನ ಸಮಸ್ಯೆ: ಮೈಸೂರು ಬಂದ್ ಬಹುತೇಕ ಪೂರ್ಣ</h2>.<p>ಮೈಸೂರು, ಮೇ 27– ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಮಂಡ್ಯದ ರೈತರ ಹಿತ ಕಾಪಾಡಲು ಕೆಆರ್ಎಸ್ ಅಣೆಕಟ್ಟಿನಿಂದ ನಾಲೆಗಳಿಗೆ ಬಿಟ್ಟಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ‘ಮೈಸೂರು ಬಂದ್’ ಬಹುತೇಕ ಯಶಸ್ವಿಯಾಯಿತು.</p>.<p>ಕುಡಿಯುವ ನೀರಿನ ಅಭಾವದ ಬಿಸಿ ತಟ್ಟಿರುವ ಸಾರ್ವಜನಿಕರು ಸ್ವಪ್ರೇರಣೆಯಿಂದ ಈ ಬಂದ್ ಯಶಸ್ವಿಯಾಗಲು ಸಹಕರಿಸಿದರು. ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಬಂದ್ ಶಾಂತಿಯುತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಆಲಮಟ್ಟಿ: ಈ ವರ್ಷ ಬಾಗಲಕೋಟೆಯ 4,000 ಮನೆಗಳ ಮುಳುಗಡೆ</h2>.<p>ವಿಜಾಪುರ, ಮೇ 27– ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ಆಲಮಟ್ಟಿ <br>ಅಣೆಕಟ್ಟೆಯಲ್ಲಿ 519.6 ಮೀಟರ್ವರೆಗೆ ನೀರು ಸಂಗ್ರಹಿಸಲು ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಅವಕಾಶ ಕಲ್ಪಿಸಿದ ಬಳಿಕ, ಇದಕ್ಕೆ ಸಂಬಂಧಿಸಿದ ಪುನರ್ವಸತಿ ಕಾರ್ಯಗಳು ಭರದಿಂದ ಮುಂದುವರಿದಿವೆ.</p>.<p>ವಿಶ್ವದಲ್ಲೇ ಅತಿ ದೊಡ್ಡದು ಎನಿಸಿರುವ, ಸುಮಾರು 20 ಲಕ್ಷ ಜನರಿಗೆ ಪುನರ್ವಸತಿ ಕಲ್ಪಿಸುವ ಚೀನಾದ ಯೋಜನೆಯೊಂದರ ಬಳಿಕ, ಕರ್ನಾಟಕದ ಈ ಕೃಷ್ಣಾ ಮೇಲ್ದಂಡೆ ಯೋಜನೆ ಎರಡನೇ ಅತಿದೊಡ್ಡ ಪುನರ್ವಸತಿ ಯೋಜನೆ ಎನಿಸಿದೆ. ಈ ಯೋಜನೆ ಪೂರ್ಣಗೊಂಡಾಗ ಒಟ್ಟಾರೆ ಸುಮಾರು 4 ಲಕ್ಷ ಮಂದಿ ಪುನರ್ವಸತಿ ಹೊಂದಬೇಕಿದೆ.</p>.<h2>ನೀರಿನ ಸಮಸ್ಯೆ: ಮೈಸೂರು ಬಂದ್ ಬಹುತೇಕ ಪೂರ್ಣ</h2>.<p>ಮೈಸೂರು, ಮೇ 27– ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದರೂ ಮಂಡ್ಯದ ರೈತರ ಹಿತ ಕಾಪಾಡಲು ಕೆಆರ್ಎಸ್ ಅಣೆಕಟ್ಟಿನಿಂದ ನಾಲೆಗಳಿಗೆ ಬಿಟ್ಟಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ‘ಮೈಸೂರು ಬಂದ್’ ಬಹುತೇಕ ಯಶಸ್ವಿಯಾಯಿತು.</p>.<p>ಕುಡಿಯುವ ನೀರಿನ ಅಭಾವದ ಬಿಸಿ ತಟ್ಟಿರುವ ಸಾರ್ವಜನಿಕರು ಸ್ವಪ್ರೇರಣೆಯಿಂದ ಈ ಬಂದ್ ಯಶಸ್ವಿಯಾಗಲು ಸಹಕರಿಸಿದರು. ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಬಂದ್ ಶಾಂತಿಯುತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>