<h2>ಭಾರತದಲ್ಲಿ ದಲೈಲಾಮಾ: ಚೀನಾದ ಕಳವಳ</h2>.<p>ಬೀಜಿಂಗ್, ಮೇ 29 (ಯುಎನ್ಐ)– ‘ದಲೈಲಾಮಾ ಮತ್ತು ಕರ್ಮಪಾ ಉಪಸ್ಥಿತಿ ಯಿಂದ ಭಾರತದಲ್ಲಿ ಚೀನಾ ವಿರೋಧಿ ಕೃತ್ಯಗಳು ತಲೆ ಎತ್ತುವ ಸಾಧ್ಯತೆಗಳಿವೆ’ ಎಂದು ಚೀನಾ ಇಂದು ಆತಂಕ ವ್ಯಕ್ತಪಡಿಸಿತು.</p><p>ಒಂದು ವಾರದ ಭೇಟಿಗಾಗಿ ಚೀನಾಕ್ಕೆ ಆಗಮಿಸಿರುವ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ಕಳವಳ ವ್ಯಕ್ತಪಡಿಸಿದ ಚೀನಾ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು, ಕರ್ಮಪಾ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ನವದೆಹಲಿಯನ್ನು ಶ್ಲಾಘಿಸಿದರು.</p><p>ತಮ್ಮ ದೇಶವು ದಲೈಲಾಮಾ ಅವರನ್ನು ಒಳಸಂಚಿನ ತಂಡವೊಂದರ ನಾಯಕ ಎಂದು ಪರಿಗಣಿಸಿದೆಯೇ ಹೊರತು ಶುದ್ಧ ಭಿಕ್ಷುವೆಂದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p>.<h2>ಕ್ರಿಕೆಟ್: ಮೋಸದಾಟದ ತನಿಖೆ ಚುರುಕು</h2>.<p>ನವದೆಹಲಿ, ಮೇ 29– ಕ್ರಿಕೆಟ್ ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಕೆಲವು ಆಟಗಾರರ ವೆಬ್ಸೈಟ್ಗಳಲ್ಲಿನ ದಾಖಲೆಗಳನ್ನೆಲ್ಲ ಸಿಬಿಐ ಪರೀಕ್ಷೆಗೆ ಒಳಪಡಿಸಿದೆ.</p><p>ಕ್ರಿಕೆಟ್ ವೀಕ್ಷಕ ವಿವರಣೆಗಾರ ನರೋತ್ತಮ್ ಪುರಿ, ಭಾರತ ತಂಡದ ಮಾಜಿ ಮ್ಯಾನೇಜರ್ ಅಜಿತ್ ವಾಡೇಕರ್, ಸುನಿಲ್ ಗಾವಸ್ಕರ್, ನವಜೋತ್ ಸಿಂಗ್ ಸಿಧು, ಕಿರಣ್ ಮೋರೆ, ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿ ರಾಕೇಶ್ ಮರಿಯ ಮುಂತಾದವರ ದಾಖಲೆಗಳನ್ನೆಲ್ಲ ಸಿಬಿಐ ತನಿಖೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಭಾರತದಲ್ಲಿ ದಲೈಲಾಮಾ: ಚೀನಾದ ಕಳವಳ</h2>.<p>ಬೀಜಿಂಗ್, ಮೇ 29 (ಯುಎನ್ಐ)– ‘ದಲೈಲಾಮಾ ಮತ್ತು ಕರ್ಮಪಾ ಉಪಸ್ಥಿತಿ ಯಿಂದ ಭಾರತದಲ್ಲಿ ಚೀನಾ ವಿರೋಧಿ ಕೃತ್ಯಗಳು ತಲೆ ಎತ್ತುವ ಸಾಧ್ಯತೆಗಳಿವೆ’ ಎಂದು ಚೀನಾ ಇಂದು ಆತಂಕ ವ್ಯಕ್ತಪಡಿಸಿತು.</p><p>ಒಂದು ವಾರದ ಭೇಟಿಗಾಗಿ ಚೀನಾಕ್ಕೆ ಆಗಮಿಸಿರುವ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ಕಳವಳ ವ್ಯಕ್ತಪಡಿಸಿದ ಚೀನಾ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು, ಕರ್ಮಪಾ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ನವದೆಹಲಿಯನ್ನು ಶ್ಲಾಘಿಸಿದರು.</p><p>ತಮ್ಮ ದೇಶವು ದಲೈಲಾಮಾ ಅವರನ್ನು ಒಳಸಂಚಿನ ತಂಡವೊಂದರ ನಾಯಕ ಎಂದು ಪರಿಗಣಿಸಿದೆಯೇ ಹೊರತು ಶುದ್ಧ ಭಿಕ್ಷುವೆಂದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p>.<h2>ಕ್ರಿಕೆಟ್: ಮೋಸದಾಟದ ತನಿಖೆ ಚುರುಕು</h2>.<p>ನವದೆಹಲಿ, ಮೇ 29– ಕ್ರಿಕೆಟ್ ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಕೆಲವು ಆಟಗಾರರ ವೆಬ್ಸೈಟ್ಗಳಲ್ಲಿನ ದಾಖಲೆಗಳನ್ನೆಲ್ಲ ಸಿಬಿಐ ಪರೀಕ್ಷೆಗೆ ಒಳಪಡಿಸಿದೆ.</p><p>ಕ್ರಿಕೆಟ್ ವೀಕ್ಷಕ ವಿವರಣೆಗಾರ ನರೋತ್ತಮ್ ಪುರಿ, ಭಾರತ ತಂಡದ ಮಾಜಿ ಮ್ಯಾನೇಜರ್ ಅಜಿತ್ ವಾಡೇಕರ್, ಸುನಿಲ್ ಗಾವಸ್ಕರ್, ನವಜೋತ್ ಸಿಂಗ್ ಸಿಧು, ಕಿರಣ್ ಮೋರೆ, ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿ ರಾಕೇಶ್ ಮರಿಯ ಮುಂತಾದವರ ದಾಖಲೆಗಳನ್ನೆಲ್ಲ ಸಿಬಿಐ ತನಿಖೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>