<h2>ಪಂಜಾಬ್: ಭೀಕರ ರೈಲು ದುರಂತ– 40 ಸಾವು</h2>.<p><strong>ಸರಾಯ್ಬಂಜಾರಾ (ಪಂಜಾಬ್), ಡಿ. 2</strong>– ಅಂಬಾಲಾದಿಂದ 40 ಕಿ.ಮೀ. ದೂರವಿರುವ ಇಲ್ಲಿ ಇಂದು ಬೆಳಿಗ್ಗೆ ಹಳಿತಪ್ಪಿ ನಿಂತಿದ್ದ ಸರಕು ಸಾಗಾಣಿಕೆ ರೈಲಿಗೆ ಅಮೃತಸರ್ ಹೌರಾ ಮೇಲ್ ಡಿಕ್ಕಿ ಹೊಡೆದಾಗ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 40 ಮಂದಿ ಮೃತರಾಗಿದ್ದು, ಸುಮಾರು 150 ಪ್ರಯಾಣಿಕರು ಗಾಯಗೊಂಡಿದ್ದಾರೆ.</p>.<p>ಇಪ್ಪತ್ತೆರಡು ಜನರು ಸ್ಥಳದಲ್ಲೇ ಮೃತರಾದರೆ ಫತೇಹಗಢ ಸಾಹಿಬ್, ರಾಜಪುರ ಮತ್ತು ಪಟಿಯಾಲದ ಆಸ್ಪತ್ರೆಗೆ ಸೇರಿಸಲಾಗಿದ್ದ ಗಾಯಾಳುಗಳಲ್ಲಿ ಇತರ ಕೆಲವರು ಮೃತರಾದರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸತ್ತವರ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.</p>.<h2>ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ 3,000 ಸಿಬ್ಬಂದಿ ನಿಯೋಜನೆ</h2>.<p><strong>ಬೆಂಗಳೂರು, ಡಿ. 2–</strong> ವೀರಪ್ಪನ್ನನ್ನು ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿ ಕಾರ್ಯ ತಂತ್ರ ರೂಪಿಸಿದ್ದು, ಗಡಿ ಭದ್ರತಾ ಪಡೆಯ 1,000 ಯೋಧರು ಮತ್ತು ಉಭಯ ರಾಜ್ಯಗಳ 2,000 ಸಿಬ್ಬಂದಿ ಸೇರಿ ಒಟ್ಟು 3,000 ಜನರ ಪಡೆ ಕಾರ್ಯಾಚರಣೆಯಲ್ಲಿ ತೊಡಗಲಿದೆ.</p>.<p>ಈ ನಡುವೆ ರಾಜ್ಯದ ವಿಶೇಷ ಕಾರ್ಯಾಚರಣೆ ಪಡೆ ಮುಖ್ಯಸ್ಥ ಎಚ್.ಟಿ. ಸಾಂಗ್ಲಿಯಾನ ಅವರಿಗೆ ನೆರವಾಗಲು ನೇಮಿಸಲಾಗಿದ್ದ ಡಿಐಜಿ ಕೆಂಪಯ್ಯ ಅವರನ್ನು ಕೈಬಿಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಪಂಜಾಬ್: ಭೀಕರ ರೈಲು ದುರಂತ– 40 ಸಾವು</h2>.<p><strong>ಸರಾಯ್ಬಂಜಾರಾ (ಪಂಜಾಬ್), ಡಿ. 2</strong>– ಅಂಬಾಲಾದಿಂದ 40 ಕಿ.ಮೀ. ದೂರವಿರುವ ಇಲ್ಲಿ ಇಂದು ಬೆಳಿಗ್ಗೆ ಹಳಿತಪ್ಪಿ ನಿಂತಿದ್ದ ಸರಕು ಸಾಗಾಣಿಕೆ ರೈಲಿಗೆ ಅಮೃತಸರ್ ಹೌರಾ ಮೇಲ್ ಡಿಕ್ಕಿ ಹೊಡೆದಾಗ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 40 ಮಂದಿ ಮೃತರಾಗಿದ್ದು, ಸುಮಾರು 150 ಪ್ರಯಾಣಿಕರು ಗಾಯಗೊಂಡಿದ್ದಾರೆ.</p>.<p>ಇಪ್ಪತ್ತೆರಡು ಜನರು ಸ್ಥಳದಲ್ಲೇ ಮೃತರಾದರೆ ಫತೇಹಗಢ ಸಾಹಿಬ್, ರಾಜಪುರ ಮತ್ತು ಪಟಿಯಾಲದ ಆಸ್ಪತ್ರೆಗೆ ಸೇರಿಸಲಾಗಿದ್ದ ಗಾಯಾಳುಗಳಲ್ಲಿ ಇತರ ಕೆಲವರು ಮೃತರಾದರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸತ್ತವರ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.</p>.<h2>ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ 3,000 ಸಿಬ್ಬಂದಿ ನಿಯೋಜನೆ</h2>.<p><strong>ಬೆಂಗಳೂರು, ಡಿ. 2–</strong> ವೀರಪ್ಪನ್ನನ್ನು ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿ ಕಾರ್ಯ ತಂತ್ರ ರೂಪಿಸಿದ್ದು, ಗಡಿ ಭದ್ರತಾ ಪಡೆಯ 1,000 ಯೋಧರು ಮತ್ತು ಉಭಯ ರಾಜ್ಯಗಳ 2,000 ಸಿಬ್ಬಂದಿ ಸೇರಿ ಒಟ್ಟು 3,000 ಜನರ ಪಡೆ ಕಾರ್ಯಾಚರಣೆಯಲ್ಲಿ ತೊಡಗಲಿದೆ.</p>.<p>ಈ ನಡುವೆ ರಾಜ್ಯದ ವಿಶೇಷ ಕಾರ್ಯಾಚರಣೆ ಪಡೆ ಮುಖ್ಯಸ್ಥ ಎಚ್.ಟಿ. ಸಾಂಗ್ಲಿಯಾನ ಅವರಿಗೆ ನೆರವಾಗಲು ನೇಮಿಸಲಾಗಿದ್ದ ಡಿಐಜಿ ಕೆಂಪಯ್ಯ ಅವರನ್ನು ಕೈಬಿಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>