ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, ನವೆಂಬರ್‌ 16, 1996

Last Updated 15 ನವೆಂಬರ್ 2021, 16:04 IST
ಅಕ್ಷರ ಗಾತ್ರ

ಸೋನಿಯಾಗೆ ಆಹ್ವಾನ: ಕೆಪಿಸಿಸಿ ಸ್ವಾಗತ

ಬೆಂಗಳೂರು, ನ. 15– ಕಾಂಗ್ರೆಸ್ ಪಕ್ಷದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಅವರನ್ನು ಕೋರಿರುವ ಪಕ್ಷದ ಹೈಕಮಾಂಡ್ ನಿಲುವನ್ನು ಸ್ವಾಗತಿಸುವ ನಿರ್ಣಯವನ್ನು ನೂತನ ಅಧ್ಯಕ್ಷ ಧರ್ಮಸಿಂಗ್ ನೇತೃತ್ವದ ಪ್ರದೇಶ ಕಾಂಗ್ರೆಸ್ ಸಮಿತಿ ಅಂಗೀಕರಿಸಿದೆ.

ಸೋನಿಯಾ ಈ ಹೊಣೆ ವಹಿಸಿಕೊಳ್ಳುವು ದರಿಂದ ದೇಶದಾದ್ಯಂತ ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಲಿದೆ, ಪಕ್ಷಕ್ಕೆ ಹಳೆಯ ವರ್ಚಸ್ಸು ಮರಳಲಿದೆ ಎಂದು ಅದು ಹೇಳಿದೆ.

ವಿಶ್ವಸುಂದರಿ ಸ್ಪರ್ಧೆಗೆ ವ್ಯಾಪಕ ಜನಬೆಂಬಲ

ಬೆಂಗಳೂರು, ನ. 15– ವಿಶ್ವಸುಂದರಿ ಸ್ಪರ್ಧೆ ನಗರದಲ್ಲಿ ನಡೆಯುತ್ತಿರುವುದು ಬೆಂಗಳೂರಿನ ಶೇ 75.7ರಷ್ಟು ಜನರಿಗೆ ಹೆಮ್ಮೆಯ ವಿಷಯವಾಗಿದೆ.

ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಗುಂಪುಗಳು ಕರೆ ನೀಡಿರುವಂತೆ ಬಲವಂತವಾಗಿ ಸ್ಪರ್ಧೆಯನ್ನು ತಡೆಗಟ್ಟುವುದಕ್ಕೆ ಶೇ 78.8ರಷ್ಟು ಜನರು ತಮ್ಮ ತೀವ್ರ ವಿರೋಧ ದಾಖಲು ಮಾಡಿದ್ದರೆ, ಸ್ಪರ್ಧಿಗಳು ಈಜುಡುಗೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಹಿಳೆಯರ ಘನತೆಗೆ ಕುಂದುಂಟಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಶೇ 56.7ರಷ್ಟು ಜನರು ವ್ಯಕ್ತಪಡಿಸಿದ್ದಾರೆ.

ಚೆನ್ನೈನ ‘ಆ್ಯಪ್ಟ್ ಸಂಶೋಧನಾ ಸಮೂಹ’ವು ‘ಪ್ರಜಾವಾಣಿ’ಗಾಗಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗಿರುವ ಪ್ರಮುಖ ಅಂಶಗಳು ಇವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT