<p><strong>ಸೋನಿಯಾಗೆ ಆಹ್ವಾನ: ಕೆಪಿಸಿಸಿ ಸ್ವಾಗತ</strong></p>.<p><strong>ಬೆಂಗಳೂರು, ನ. 15–</strong> ಕಾಂಗ್ರೆಸ್ ಪಕ್ಷದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಅವರನ್ನು ಕೋರಿರುವ ಪಕ್ಷದ ಹೈಕಮಾಂಡ್ ನಿಲುವನ್ನು ಸ್ವಾಗತಿಸುವ ನಿರ್ಣಯವನ್ನು ನೂತನ ಅಧ್ಯಕ್ಷ ಧರ್ಮಸಿಂಗ್ ನೇತೃತ್ವದ ಪ್ರದೇಶ ಕಾಂಗ್ರೆಸ್ ಸಮಿತಿ ಅಂಗೀಕರಿಸಿದೆ.</p>.<p>ಸೋನಿಯಾ ಈ ಹೊಣೆ ವಹಿಸಿಕೊಳ್ಳುವು ದರಿಂದ ದೇಶದಾದ್ಯಂತ ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಲಿದೆ, ಪಕ್ಷಕ್ಕೆ ಹಳೆಯ ವರ್ಚಸ್ಸು ಮರಳಲಿದೆ ಎಂದು ಅದು ಹೇಳಿದೆ.</p>.<p><strong>ವಿಶ್ವಸುಂದರಿ ಸ್ಪರ್ಧೆಗೆ ವ್ಯಾಪಕ ಜನಬೆಂಬಲ</strong></p>.<p><strong>ಬೆಂಗಳೂರು, ನ. 15– </strong>ವಿಶ್ವಸುಂದರಿ ಸ್ಪರ್ಧೆ ನಗರದಲ್ಲಿ ನಡೆಯುತ್ತಿರುವುದು ಬೆಂಗಳೂರಿನ ಶೇ 75.7ರಷ್ಟು ಜನರಿಗೆ ಹೆಮ್ಮೆಯ ವಿಷಯವಾಗಿದೆ.</p>.<p>ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಗುಂಪುಗಳು ಕರೆ ನೀಡಿರುವಂತೆ ಬಲವಂತವಾಗಿ ಸ್ಪರ್ಧೆಯನ್ನು ತಡೆಗಟ್ಟುವುದಕ್ಕೆ ಶೇ 78.8ರಷ್ಟು ಜನರು ತಮ್ಮ ತೀವ್ರ ವಿರೋಧ ದಾಖಲು ಮಾಡಿದ್ದರೆ, ಸ್ಪರ್ಧಿಗಳು ಈಜುಡುಗೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಹಿಳೆಯರ ಘನತೆಗೆ ಕುಂದುಂಟಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಶೇ 56.7ರಷ್ಟು ಜನರು ವ್ಯಕ್ತಪಡಿಸಿದ್ದಾರೆ.</p>.<p>ಚೆನ್ನೈನ ‘ಆ್ಯಪ್ಟ್ ಸಂಶೋಧನಾ ಸಮೂಹ’ವು ‘ಪ್ರಜಾವಾಣಿ’ಗಾಗಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗಿರುವ ಪ್ರಮುಖ ಅಂಶಗಳು ಇವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋನಿಯಾಗೆ ಆಹ್ವಾನ: ಕೆಪಿಸಿಸಿ ಸ್ವಾಗತ</strong></p>.<p><strong>ಬೆಂಗಳೂರು, ನ. 15–</strong> ಕಾಂಗ್ರೆಸ್ ಪಕ್ಷದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಅವರನ್ನು ಕೋರಿರುವ ಪಕ್ಷದ ಹೈಕಮಾಂಡ್ ನಿಲುವನ್ನು ಸ್ವಾಗತಿಸುವ ನಿರ್ಣಯವನ್ನು ನೂತನ ಅಧ್ಯಕ್ಷ ಧರ್ಮಸಿಂಗ್ ನೇತೃತ್ವದ ಪ್ರದೇಶ ಕಾಂಗ್ರೆಸ್ ಸಮಿತಿ ಅಂಗೀಕರಿಸಿದೆ.</p>.<p>ಸೋನಿಯಾ ಈ ಹೊಣೆ ವಹಿಸಿಕೊಳ್ಳುವು ದರಿಂದ ದೇಶದಾದ್ಯಂತ ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಲಿದೆ, ಪಕ್ಷಕ್ಕೆ ಹಳೆಯ ವರ್ಚಸ್ಸು ಮರಳಲಿದೆ ಎಂದು ಅದು ಹೇಳಿದೆ.</p>.<p><strong>ವಿಶ್ವಸುಂದರಿ ಸ್ಪರ್ಧೆಗೆ ವ್ಯಾಪಕ ಜನಬೆಂಬಲ</strong></p>.<p><strong>ಬೆಂಗಳೂರು, ನ. 15– </strong>ವಿಶ್ವಸುಂದರಿ ಸ್ಪರ್ಧೆ ನಗರದಲ್ಲಿ ನಡೆಯುತ್ತಿರುವುದು ಬೆಂಗಳೂರಿನ ಶೇ 75.7ರಷ್ಟು ಜನರಿಗೆ ಹೆಮ್ಮೆಯ ವಿಷಯವಾಗಿದೆ.</p>.<p>ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಗುಂಪುಗಳು ಕರೆ ನೀಡಿರುವಂತೆ ಬಲವಂತವಾಗಿ ಸ್ಪರ್ಧೆಯನ್ನು ತಡೆಗಟ್ಟುವುದಕ್ಕೆ ಶೇ 78.8ರಷ್ಟು ಜನರು ತಮ್ಮ ತೀವ್ರ ವಿರೋಧ ದಾಖಲು ಮಾಡಿದ್ದರೆ, ಸ್ಪರ್ಧಿಗಳು ಈಜುಡುಗೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಹಿಳೆಯರ ಘನತೆಗೆ ಕುಂದುಂಟಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಶೇ 56.7ರಷ್ಟು ಜನರು ವ್ಯಕ್ತಪಡಿಸಿದ್ದಾರೆ.</p>.<p>ಚೆನ್ನೈನ ‘ಆ್ಯಪ್ಟ್ ಸಂಶೋಧನಾ ಸಮೂಹ’ವು ‘ಪ್ರಜಾವಾಣಿ’ಗಾಗಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗಿರುವ ಪ್ರಮುಖ ಅಂಶಗಳು ಇವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>