<p><strong>ಬಂಧಿತ ಭಾರತೀಯ ಪೌರರ ಬಿಡುಗಡೆ: ಪಾಕ್ ಸರ್ಕಾರದ ನಿರ್ಧಾರ</strong></p>.<p><strong>ನವದೆಹಲಿ, ಆ. 7–</strong> 1971ರ ಡಿಸೆಂಬರ್ ಸಮರಕ್ಕೆ ಮುನ್ನ ಮತ್ತು ಸಮರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದ ಎಲ್ಲ ಭಾರತೀಯ ಪೌರರನ್ನೂ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.</p>.<p>ಈ ಬಗ್ಗೆ ಪಾಕ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಇವರನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದನ್ನು ತಿಳಿಸಿಲ್ಲ.</p>.<p>ಡಿಸೆಂಬರ್ 3ನೇ ತಾರೀಖಿಗೆ ಮುನ್ನ ಅನಧಿಕೃತ ಪ್ರವೇಶಕ್ಕಾಗಿ ಬಂಧಿಸಲಾದ ಭಾರತೀಯರೆಲ್ಲರನ್ನೂ ಬಿಡುಗಡೆ ಮಾಡಲಾಗುವುದೆಂದೂ, ಭಾರತ– ಪಾಕ್ ಸಮರ ಆರಂಭವಾದ ಕಾರಣ ಅಲ್ಲಿಂದ ಹೊರಡಲು ಸಾಧ್ಯವಾಗದೇ ಉಳಿದುಕೊಂಡಿದ್ದ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗುವುದೆಂದೂ ರೇಡಿಯೊ ತಿಳಿಸಿದೆ.</p>.<p><strong>ಹೊಸ ಕೃಷಿ ಯೋಜನೆಗೆ 150 ಕೋಟಿ ರೂ. ಹೆಚ್ಚು ವೆಚ್ಚ: ಕೇಂದ್ರದ ನಿರ್ಧಾರ</strong></p>.<p><strong>ನವದೆಹಲಿ, ಆ.7–</strong> ಸಾಧ್ಯವಾದಷ್ಟು ಮಟ್ಟಿಗೆ ಖಾರಿಫ್ ಬೆಳೆ ಕಾಪಾಡಲು ಹಾಗೂ ರಾಬಿ ಬೆಳೆ ಹೆಚ್ಚಿಸುವುದಕ್ಕಾಗಿ ಕೃಷಿ ಯೋಜನೆಗೆ ಹೊಸದಾಗಿ 150 ಕೋಟಿ ರೂಪಾಯಿ ವೆಚ್ಚ ಮಾಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.</p>.<p>ಅನೇಕ ರಾಜ್ಯಗಳಲ್ಲಿ ಮುಂಗಾರು ಬೆಳೆ ವಿಫಲ ಹಾಗೂ ಅಗತ್ಯ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ ಕೇಂದ್ರ ಸಚಿವ ಸಂಪುಟ ಬೆಳಿಗ್ಗೆ ಸಭೆ ಸೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಧಿತ ಭಾರತೀಯ ಪೌರರ ಬಿಡುಗಡೆ: ಪಾಕ್ ಸರ್ಕಾರದ ನಿರ್ಧಾರ</strong></p>.<p><strong>ನವದೆಹಲಿ, ಆ. 7–</strong> 1971ರ ಡಿಸೆಂಬರ್ ಸಮರಕ್ಕೆ ಮುನ್ನ ಮತ್ತು ಸಮರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿದ್ದ ಎಲ್ಲ ಭಾರತೀಯ ಪೌರರನ್ನೂ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.</p>.<p>ಈ ಬಗ್ಗೆ ಪಾಕ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಇವರನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದನ್ನು ತಿಳಿಸಿಲ್ಲ.</p>.<p>ಡಿಸೆಂಬರ್ 3ನೇ ತಾರೀಖಿಗೆ ಮುನ್ನ ಅನಧಿಕೃತ ಪ್ರವೇಶಕ್ಕಾಗಿ ಬಂಧಿಸಲಾದ ಭಾರತೀಯರೆಲ್ಲರನ್ನೂ ಬಿಡುಗಡೆ ಮಾಡಲಾಗುವುದೆಂದೂ, ಭಾರತ– ಪಾಕ್ ಸಮರ ಆರಂಭವಾದ ಕಾರಣ ಅಲ್ಲಿಂದ ಹೊರಡಲು ಸಾಧ್ಯವಾಗದೇ ಉಳಿದುಕೊಂಡಿದ್ದ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಲಾಗುವುದೆಂದೂ ರೇಡಿಯೊ ತಿಳಿಸಿದೆ.</p>.<p><strong>ಹೊಸ ಕೃಷಿ ಯೋಜನೆಗೆ 150 ಕೋಟಿ ರೂ. ಹೆಚ್ಚು ವೆಚ್ಚ: ಕೇಂದ್ರದ ನಿರ್ಧಾರ</strong></p>.<p><strong>ನವದೆಹಲಿ, ಆ.7–</strong> ಸಾಧ್ಯವಾದಷ್ಟು ಮಟ್ಟಿಗೆ ಖಾರಿಫ್ ಬೆಳೆ ಕಾಪಾಡಲು ಹಾಗೂ ರಾಬಿ ಬೆಳೆ ಹೆಚ್ಚಿಸುವುದಕ್ಕಾಗಿ ಕೃಷಿ ಯೋಜನೆಗೆ ಹೊಸದಾಗಿ 150 ಕೋಟಿ ರೂಪಾಯಿ ವೆಚ್ಚ ಮಾಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.</p>.<p>ಅನೇಕ ರಾಜ್ಯಗಳಲ್ಲಿ ಮುಂಗಾರು ಬೆಳೆ ವಿಫಲ ಹಾಗೂ ಅಗತ್ಯ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ ಕೇಂದ್ರ ಸಚಿವ ಸಂಪುಟ ಬೆಳಿಗ್ಗೆ ಸಭೆ ಸೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>