<p>ಬೆಂಗಳೂರು, ಜುಲೈ 25– ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಮಧ್ಯಾಹ್ನ ಸುಮಾರು 5 ಗಂಟೆ ಚರ್ಚೆ ನಡೆಸಿ ಗೃಹ ಕೈಗಾರಿಕೆಗಳನ್ನು ಉತ್ತೇಜಿಸುವುದೇ ಕಾಂಗ್ರೆಸ್ ನೀತಿಯಾಗಿರುವುದರಿಂದ ನವಸ್ಪತಿಯನ್ನು ನಿಷೇಧಿಸುವ ಕ್ರಮವನ್ನು ಸಮರ್ಥಿಸಿತೆಂದು ತಿಳಿದುಬಂದಿದೆ.</p>.<p>ಅಖಿಲ ಮೈಸೂರು ಕಾಂಗ್ರೆಸ್ ಸಮಿತಿ ಆಗಸ್ಟ್ 26ನೇ ತಾರೀಕಿನಂದು ಸಮಾವೇಶಗೊಂಡು ವಿಸರ್ಜನೆಗೊಳ್ಳುವುದು.</p>.<p>ಮೈಸೂರು ಕಾಂಗ್ರೆಸ್ ಅಧ್ಯಕ್ಷೆ ಯಶೋಧರಮ್ಮನವರು ಅಧ್ಯಕ್ಷತೆವಹಿಸಿದ್ದರು.</p>.<p><strong>ದೇಶದ ಆಹಾರ ಪರಿಸ್ಥಿತಿ ಬಗ್ಗೆ ಕಳವಳಪಡಲು ಕಾರಣವಿಲ್ಲ</strong></p>.<p>ದೆಹಲಿ, ಜುಲೈ 25– ಭಾರತ ಸರ್ಕಾರದ ಆಹಾರ ಮತ್ತು ವ್ಯವಸಾಯ ಸಚಿವ ಕೆ.ಎಂ. ಮುನ್ಷಿ ಅವರು ‘ಭಾರತ ರಾಷ್ಟ್ರದಲ್ಲಿನ ಆಹಾರ ಪರಿಸ್ಥಿತಿಯ ವಿಚಾರದಲ್ಲಿ ಗಾಬರಿಪಡಬೇಕಾದ ಕಾರಣವೇ ಇಲ್ಲ. ಕ್ಷಾಮವೆಂಬುದಾಗಿ ಕೆಲ ವೃತ್ತಗಳಲ್ಲಿ ಹೇಳಿಕೊಳ್ಳುತ್ತಿರುವುದು ಆಧಾರರಹಿತ ಅಪಪ್ರಚಾರ. ಈ ರೀತಿಯ ಕೂಗಿನಿಂದ ಪದಾರ್ಥಗಳನ್ನು ಕೂಡಿಹಾಕಿಕೊಂಡು ಲಾಭ ಪಡೆಯುವವರಿಗೆ ಅವಕಾಶಕೊಟ್ಟಂತಾಗುತ್ತದೆ. ಪರಿಸ್ಥಿತಿಯನ್ನು ಹದಕ್ಕೆ ತರಬೇಕೆಂಬ ಸರ್ಕಾರದ ನೀತಿಗೆ ಧಕ್ಕೆ ತರುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಜುಲೈ 25– ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಮಧ್ಯಾಹ್ನ ಸುಮಾರು 5 ಗಂಟೆ ಚರ್ಚೆ ನಡೆಸಿ ಗೃಹ ಕೈಗಾರಿಕೆಗಳನ್ನು ಉತ್ತೇಜಿಸುವುದೇ ಕಾಂಗ್ರೆಸ್ ನೀತಿಯಾಗಿರುವುದರಿಂದ ನವಸ್ಪತಿಯನ್ನು ನಿಷೇಧಿಸುವ ಕ್ರಮವನ್ನು ಸಮರ್ಥಿಸಿತೆಂದು ತಿಳಿದುಬಂದಿದೆ.</p>.<p>ಅಖಿಲ ಮೈಸೂರು ಕಾಂಗ್ರೆಸ್ ಸಮಿತಿ ಆಗಸ್ಟ್ 26ನೇ ತಾರೀಕಿನಂದು ಸಮಾವೇಶಗೊಂಡು ವಿಸರ್ಜನೆಗೊಳ್ಳುವುದು.</p>.<p>ಮೈಸೂರು ಕಾಂಗ್ರೆಸ್ ಅಧ್ಯಕ್ಷೆ ಯಶೋಧರಮ್ಮನವರು ಅಧ್ಯಕ್ಷತೆವಹಿಸಿದ್ದರು.</p>.<p><strong>ದೇಶದ ಆಹಾರ ಪರಿಸ್ಥಿತಿ ಬಗ್ಗೆ ಕಳವಳಪಡಲು ಕಾರಣವಿಲ್ಲ</strong></p>.<p>ದೆಹಲಿ, ಜುಲೈ 25– ಭಾರತ ಸರ್ಕಾರದ ಆಹಾರ ಮತ್ತು ವ್ಯವಸಾಯ ಸಚಿವ ಕೆ.ಎಂ. ಮುನ್ಷಿ ಅವರು ‘ಭಾರತ ರಾಷ್ಟ್ರದಲ್ಲಿನ ಆಹಾರ ಪರಿಸ್ಥಿತಿಯ ವಿಚಾರದಲ್ಲಿ ಗಾಬರಿಪಡಬೇಕಾದ ಕಾರಣವೇ ಇಲ್ಲ. ಕ್ಷಾಮವೆಂಬುದಾಗಿ ಕೆಲ ವೃತ್ತಗಳಲ್ಲಿ ಹೇಳಿಕೊಳ್ಳುತ್ತಿರುವುದು ಆಧಾರರಹಿತ ಅಪಪ್ರಚಾರ. ಈ ರೀತಿಯ ಕೂಗಿನಿಂದ ಪದಾರ್ಥಗಳನ್ನು ಕೂಡಿಹಾಕಿಕೊಂಡು ಲಾಭ ಪಡೆಯುವವರಿಗೆ ಅವಕಾಶಕೊಟ್ಟಂತಾಗುತ್ತದೆ. ಪರಿಸ್ಥಿತಿಯನ್ನು ಹದಕ್ಕೆ ತರಬೇಕೆಂಬ ಸರ್ಕಾರದ ನೀತಿಗೆ ಧಕ್ಕೆ ತರುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>