ಮಹಾಪುರುಷರು ಎಂದು ಪರಿಗಣಿಸಿರುವುದು ಅವರು ಎಲ್ಲಾ ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ನಿಸ್ವಾರ್ಥದಿಂದ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಸಮಾಜವನ್ನು ಮುನ್ನಡೆಸಿದರು ಎಂಬ ಕಾರಣಕ್ಕೆ. ಅಂತಹವರ ಬಗ್ಗೆ ನಾಡಿನ ಎಲ್ಲರಿಗೂ ಅಭಿಮಾನ ಇರುತ್ತದೆ. ಅವರ ಜಯಂತಿಯನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ಆಚರಿಸಿದರೆ ಮಾತ್ರ ಆ ಸಾಧಕರಿಗೆ ಗೌರವ ಸಲ್ಲುತ್ತದೆ ಎಂಬ ಮನೋಭಾವ ಸರಿಯಲ್ಲ. ಬದಲಾಗಿ, ಅವರ ತತ್ವ- ಸಿದ್ಧಾಂತ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರ ಸ್ಮರಣೆಯ ಸಾರ್ಥಕ್ಯವನ್ನು ಕಾಣಬೇಕಾಗಿದೆ.