ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸ್ವರೂಪದ ಜಾತೀಯತೆ

Last Updated 3 ಜನವರಿ 2020, 20:00 IST
ಅಕ್ಷರ ಗಾತ್ರ

ಸರ್ಕಾರಿ ಪ್ರಾಯೋಜಿತ ಜಯಂತಿಗಳ ಒಟ್ಟು ಸಂಖ್ಯೆ 30ರ ಆಸುಪಾಸಿನಲ್ಲಿ ಇರುವುದನ್ನು ನೋಡಿದರೆ (ಪ್ರ.ವಾ., ಜ. 3), ನಮ್ಮ ಸರ್ಕಾರವು ಸಮಾಜವನ್ನು ಹೊಸ ಸ್ವರೂಪದ ಜಾತೀಯತೆಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿರುವಂತಿದೆ. ಇದು ಚರ್ಚಾರ್ಹ ಸಂಗತಿ.

ಮಹಾಪುರುಷರು ಎಂದು ಪರಿಗಣಿಸಿರುವುದು ಅವರು ಎಲ್ಲಾ ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ನಿಸ್ವಾರ್ಥದಿಂದ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಸಮಾಜವನ್ನು ಮುನ್ನಡೆಸಿದರು ಎಂಬ ಕಾರಣಕ್ಕೆ. ಅಂತಹವರ ಬಗ್ಗೆ ನಾಡಿನ ಎಲ್ಲರಿಗೂ ಅಭಿಮಾನ ಇರುತ್ತದೆ. ಅವರ ಜಯಂತಿಯನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ಆಚರಿಸಿದರೆ ಮಾತ್ರ ಆ ಸಾಧಕರಿಗೆ ಗೌರವ ಸಲ್ಲುತ್ತದೆ ಎಂಬ ಮನೋಭಾವ ಸರಿಯಲ್ಲ. ಬದಲಾಗಿ, ಅವರ ತತ್ವ- ಸಿದ್ಧಾಂತ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರ ಸ್ಮರಣೆಯ ಸಾರ್ಥಕ್ಯವನ್ನು ಕಾಣಬೇಕಾಗಿದೆ.

–ಡಿ.ಎಂ.ಬಸೆಟ್ಟೆಪ್ಪ,ಎಚ್.ವೀರಾಪುರ, ಕುರುಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT