ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಸಭ್ಯ ವರ್ತನೆ ಖಂಡನೀಯ

Last Updated 11 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ, ಮತದಾನ ಮಾಡಲು ಬಂದ ತಮ್ಮದೇ ಪಕ್ಷದ ಸದಸ್ಯೆಯೊಬ್ಬರನ್ನು ಶಾಸಕ ಮತ್ತು ಅವರ ಬೆಂಬಲಿಗರು ಎಳೆದಾಡಿದ್ದಾರೆ ಎನ್ನಲಾದ ಸುದ್ದಿ ನಾಚಿಕೆಗೇಡಿನದು ಮತ್ತು ಖಂಡನೀಯವಾದದ್ದು. ಮಹಿಳಾ ಜನಪ್ರತಿನಿಧಿಯನ್ನು ಪೊಲೀಸರ ಮುಂದೆಯೇ ಹೀಗೆ ಎಳೆದಾಡಿದಾಗ ಅವರಿಗೆ ರಕ್ಷಣೆ ಸಿಗದಿದ್ದರೆ ಸಾಮಾನ್ಯ ಜನರ ಪಾಡೇನು? ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಿಸಲು ಬಯಸುವ ಮಹಿಳೆಯರಲ್ಲಿ ಭಯ ಬಿತ್ತುತ್ತವೆ.

ಅಧಿಕಾರ ಇರುವುದು ಜನರ ಸೇವೆಗಾಗಿಯೇ ವಿನಾ ಅಹಂಕಾರ ಪ್ರದರ್ಶಿಸಲು ಅಲ್ಲ. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ದಾಳಿಕೋರರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂತಹ ಪ್ರಸಂಗಗಳು ಮರುಕಳಿಸದಿರಲಿ.

–ಇರ್ಫಾನ್ ರೋಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT