<p>ಶಿವಮೊಗ್ಗ ಜಿಲ್ಲೆಯ ನರಸೀಪುರ ಗ್ರಾಮದಲ್ಲಿ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ನಾಟಿ ಔಷಧ ನೀಡುತ್ತಿದ್ದ ನಾರಾಯಣಮೂರ್ತಿ ಅವರು ನಿಧನರಾಗಿರುವುದರಿಂದ, ಅವರ ಮಕ್ಕಳು ಈ ಔಷಧ ನೀಡುವುದನ್ನು ಮುಂದುವರಿಸಿದ್ದಾರೆ. ಆದರೆ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 17). ತಮ್ಮ ಗ್ರಾಮದಲ್ಲೇ ಅನೇಕರು ಕ್ಯಾನ್ಸರ್ನಿಂದ ಮರಣ ಹೊಂದಿದ್ದಾರೆ ಮತ್ತು ಈ ನಾಟಿ ಔಷಧಕ್ಕೆ ಕಾಯಿಲೆಗಳನ್ನು ವಾಸಿ ಮಾಡುವ ಯಾವ ಶಕ್ತಿಯೂ ಇಲ್ಲ ಎಂದು ಗ್ರಾಮಸ್ಥರು ಸಂಧಾನ ಸಭೆಯಲ್ಲಿ ಹೇಳಿದ್ದಾರೆ.</p>.<p>ಈ ಕಾರಣಕ್ಕೆ ಕೆಲವು ವಿಚಾರಗಳು ಮುಖ್ಯವಾಗುತ್ತವೆ. ನರಸೀಪುರದ ನಾಟಿ ಔಷಧದಿಂದ ಮಾರಣಾಂತಿಕ ರೋಗಗಳು ವಾಸಿಯಾಗಿರುವ ನಿದರ್ಶನಗಳು ಇಲ್ಲ. ಕಾಯಿಲೆ ಅಂತಿಮ ಘಟ್ಟದಲ್ಲಿ ಇದ್ದಾಗ, ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಹುದೆಂಬ ಭಾವದಿಂದ, ಯಾವುದೇ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ ಈ ಔಷಧದ ಮೊರೆ ಹೋಗುತ್ತಿದ್ದವರ ಸಂಖ್ಯೆಯೇ ಹೆಚ್ಚು. ಸಮೂಹ ಸನ್ನಿಗೆ ಒಳಗಾದಂತೆ ಜನ ವರ್ತಿಸುತ್ತಿದ್ದರು.ಹಣ ಮಾಡುವುದಕ್ಕೆ ನೂರಾರು ಹಾದಿ ಎಂಬಂತೆ ಇದೂ ಒಂದು. ಹೀಗೆ ಅನಧಿಕೃತವಾಗಿ ಔಷಧ ನೀಡುವುದನ್ನು ನಿಷೇಧಿಸುವುದು ಒಳ್ಳೆಯದು. ಅದೂ ಅಲ್ಲದೆ ಯಾವ ರೀತಿಯ ತರಬೇತಿಯಾಗಲೀ ಕಾನೂನಿನ<br />ಪರವಾನಗಿಯನ್ನಾಗಲೀ ಹೊಂದಿರದ ಅವರ ಮಕ್ಕಳು ಹೇಗೆ ಇದನ್ನು ಮುಂದುವರಿಸಲು ಸಾಧ್ಯ?</p>.<p><strong>-ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ ಜಿಲ್ಲೆಯ ನರಸೀಪುರ ಗ್ರಾಮದಲ್ಲಿ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ನಾಟಿ ಔಷಧ ನೀಡುತ್ತಿದ್ದ ನಾರಾಯಣಮೂರ್ತಿ ಅವರು ನಿಧನರಾಗಿರುವುದರಿಂದ, ಅವರ ಮಕ್ಕಳು ಈ ಔಷಧ ನೀಡುವುದನ್ನು ಮುಂದುವರಿಸಿದ್ದಾರೆ. ಆದರೆ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 17). ತಮ್ಮ ಗ್ರಾಮದಲ್ಲೇ ಅನೇಕರು ಕ್ಯಾನ್ಸರ್ನಿಂದ ಮರಣ ಹೊಂದಿದ್ದಾರೆ ಮತ್ತು ಈ ನಾಟಿ ಔಷಧಕ್ಕೆ ಕಾಯಿಲೆಗಳನ್ನು ವಾಸಿ ಮಾಡುವ ಯಾವ ಶಕ್ತಿಯೂ ಇಲ್ಲ ಎಂದು ಗ್ರಾಮಸ್ಥರು ಸಂಧಾನ ಸಭೆಯಲ್ಲಿ ಹೇಳಿದ್ದಾರೆ.</p>.<p>ಈ ಕಾರಣಕ್ಕೆ ಕೆಲವು ವಿಚಾರಗಳು ಮುಖ್ಯವಾಗುತ್ತವೆ. ನರಸೀಪುರದ ನಾಟಿ ಔಷಧದಿಂದ ಮಾರಣಾಂತಿಕ ರೋಗಗಳು ವಾಸಿಯಾಗಿರುವ ನಿದರ್ಶನಗಳು ಇಲ್ಲ. ಕಾಯಿಲೆ ಅಂತಿಮ ಘಟ್ಟದಲ್ಲಿ ಇದ್ದಾಗ, ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಹುದೆಂಬ ಭಾವದಿಂದ, ಯಾವುದೇ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ ಈ ಔಷಧದ ಮೊರೆ ಹೋಗುತ್ತಿದ್ದವರ ಸಂಖ್ಯೆಯೇ ಹೆಚ್ಚು. ಸಮೂಹ ಸನ್ನಿಗೆ ಒಳಗಾದಂತೆ ಜನ ವರ್ತಿಸುತ್ತಿದ್ದರು.ಹಣ ಮಾಡುವುದಕ್ಕೆ ನೂರಾರು ಹಾದಿ ಎಂಬಂತೆ ಇದೂ ಒಂದು. ಹೀಗೆ ಅನಧಿಕೃತವಾಗಿ ಔಷಧ ನೀಡುವುದನ್ನು ನಿಷೇಧಿಸುವುದು ಒಳ್ಳೆಯದು. ಅದೂ ಅಲ್ಲದೆ ಯಾವ ರೀತಿಯ ತರಬೇತಿಯಾಗಲೀ ಕಾನೂನಿನ<br />ಪರವಾನಗಿಯನ್ನಾಗಲೀ ಹೊಂದಿರದ ಅವರ ಮಕ್ಕಳು ಹೇಗೆ ಇದನ್ನು ಮುಂದುವರಿಸಲು ಸಾಧ್ಯ?</p>.<p><strong>-ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>