ಕಾಲೇಜು ಆರಂಭಕ್ಕೆ ಅವಸರ ಸಲ್ಲದು ಎಂಬ ನನ್ನ ಪತ್ರಕ್ಕೆ (ವಾ.ವಾ., ಅ. 31) ಅಶೋಕ ಓಜಿನಹಳ್ಳಿ ಅವರು ಪ್ರತಿಕ್ರಿಯಿಸಿ (ವಾ.ವಾ., ನ. 2), ಪ್ರವಾಸ, ಯಾತ್ರೆ, ಚುನಾವಣಾ ಪ್ರಚಾರಗಳಲ್ಲಿ ಮಾಸ್ಕ್ ಇಲ್ಲದೆ, ಅಂತರ ಕಾಯ್ದುಕೊಳ್ಳದೆ, ಕೊರೊನಾ ಭಯ ಇಲ್ಲದೆ ತಂಡೋಪತಂಡವಾಗಿ ಯುವಜನ ಭಾಗವಹಿಸುತ್ತಿರುವಾಗ ಕಾಲೇಜುಗಳಿಗೆ ಬರಲು ಮಾತ್ರ ಭೀತಿ ಏಕೆ ಎಂದು ಪ್ರಶ್ನಿಸಿದ್ದಾರೆ.