<p>ಕಾಂಗ್ರೆಸ್ ಪಕ್ಷ ಬಲಹೀನವಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೈಹಿಕವಾಗಿ ನಿತ್ರಾಣರಾಗಿದ್ದಾರೆ. ರಾಹುಲ್ ಪಟ್ಟ ಬೇಡ ಎಂದು ಹಿಂದೆ ಸರಿದಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಕ್ಕಿದ್ದ ಅಧಿಕಾರವು ವ್ಯಕ್ತಿ ದ್ವೇಷದಿಂದ, ಸ್ವಾರ್ಥದಿಂದ ಕೈಜಾರಿದೆ. ರಾಜಸ್ಥಾನದಲ್ಲಿ ಕೊನೆ ಗಳಿಗೆಯಲ್ಲಿ ಅಧಿಕಾರ ಉಳಿಸಿಕೊಂಡಿದೆ. ಪಕ್ಷದ ಈ ಹೀನಾಯ ಸ್ಥಿತಿಯನ್ನು ದೂರ ಮಾಡಿ, ಹೊಸ ಹುರುಪಿನಿಂದ ಎಲ್ಲರೊಡಗೂಡಿ ಹೋರಾಡೋಣ ಎಂದು ಕೆಲವರು ಹೇಳಿದರೆ, ಚಪ್ಪಾಳೆ ತಟ್ಟುವವರು ಇದಕ್ಕೆ ಬೇರೆ ಅರ್ಥ ಕೊಟ್ಟು, ಇರುವ ಹಿರಿಯ ನಾಯಕರನ್ನೇ ನೇಪಥ್ಯಕ್ಕೆ ತಳ್ಳಿದರೆ ಪಕ್ಷ ಇನ್ನಷ್ಟು ನಿಶ್ಶಕ್ತಗೊಳ್ಳುವುದಿಲ್ಲವೇ?</p>.<p>ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ.ಅರ್ಥವ್ಯವಸ್ಥೆ ಹಳಿ ತಪ್ಪಿದೆ. ವಿರೋಧ ಪಕ್ಷವಾಗಿ ಜನರ ದನಿಯಾಗಲು ಸಮರ್ಥ ನಾಯಕತ್ವಕ್ಕೆ ಜನರು ಎದುರು ನೋಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಮುಖಂಡರು ಅರಿತು ಸ್ಪಂದಿಸಬೇಕಲ್ಲವೇ?</p>.<p><strong>– ಕೆ.ಎನ್. ಭಗವಾನ್,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಂಗ್ರೆಸ್ ಪಕ್ಷ ಬಲಹೀನವಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೈಹಿಕವಾಗಿ ನಿತ್ರಾಣರಾಗಿದ್ದಾರೆ. ರಾಹುಲ್ ಪಟ್ಟ ಬೇಡ ಎಂದು ಹಿಂದೆ ಸರಿದಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಕ್ಕಿದ್ದ ಅಧಿಕಾರವು ವ್ಯಕ್ತಿ ದ್ವೇಷದಿಂದ, ಸ್ವಾರ್ಥದಿಂದ ಕೈಜಾರಿದೆ. ರಾಜಸ್ಥಾನದಲ್ಲಿ ಕೊನೆ ಗಳಿಗೆಯಲ್ಲಿ ಅಧಿಕಾರ ಉಳಿಸಿಕೊಂಡಿದೆ. ಪಕ್ಷದ ಈ ಹೀನಾಯ ಸ್ಥಿತಿಯನ್ನು ದೂರ ಮಾಡಿ, ಹೊಸ ಹುರುಪಿನಿಂದ ಎಲ್ಲರೊಡಗೂಡಿ ಹೋರಾಡೋಣ ಎಂದು ಕೆಲವರು ಹೇಳಿದರೆ, ಚಪ್ಪಾಳೆ ತಟ್ಟುವವರು ಇದಕ್ಕೆ ಬೇರೆ ಅರ್ಥ ಕೊಟ್ಟು, ಇರುವ ಹಿರಿಯ ನಾಯಕರನ್ನೇ ನೇಪಥ್ಯಕ್ಕೆ ತಳ್ಳಿದರೆ ಪಕ್ಷ ಇನ್ನಷ್ಟು ನಿಶ್ಶಕ್ತಗೊಳ್ಳುವುದಿಲ್ಲವೇ?</p>.<p>ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ.ಅರ್ಥವ್ಯವಸ್ಥೆ ಹಳಿ ತಪ್ಪಿದೆ. ವಿರೋಧ ಪಕ್ಷವಾಗಿ ಜನರ ದನಿಯಾಗಲು ಸಮರ್ಥ ನಾಯಕತ್ವಕ್ಕೆ ಜನರು ಎದುರು ನೋಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಮುಖಂಡರು ಅರಿತು ಸ್ಪಂದಿಸಬೇಕಲ್ಲವೇ?</p>.<p><strong>– ಕೆ.ಎನ್. ಭಗವಾನ್,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>