ಕಾಂಗ್ರೆಸ್ ಪಕ್ಷ ಬಲಹೀನವಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೈಹಿಕವಾಗಿ ನಿತ್ರಾಣರಾಗಿದ್ದಾರೆ. ರಾಹುಲ್ ಪಟ್ಟ ಬೇಡ ಎಂದು ಹಿಂದೆ ಸರಿದಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಕ್ಕಿದ್ದ ಅಧಿಕಾರವು ವ್ಯಕ್ತಿ ದ್ವೇಷದಿಂದ, ಸ್ವಾರ್ಥದಿಂದ ಕೈಜಾರಿದೆ. ರಾಜಸ್ಥಾನದಲ್ಲಿ ಕೊನೆ ಗಳಿಗೆಯಲ್ಲಿ ಅಧಿಕಾರ ಉಳಿಸಿಕೊಂಡಿದೆ. ಪಕ್ಷದ ಈ ಹೀನಾಯ ಸ್ಥಿತಿಯನ್ನು ದೂರ ಮಾಡಿ, ಹೊಸ ಹುರುಪಿನಿಂದ ಎಲ್ಲರೊಡಗೂಡಿ ಹೋರಾಡೋಣ ಎಂದು ಕೆಲವರು ಹೇಳಿದರೆ, ಚಪ್ಪಾಳೆ ತಟ್ಟುವವರು ಇದಕ್ಕೆ ಬೇರೆ ಅರ್ಥ ಕೊಟ್ಟು, ಇರುವ ಹಿರಿಯ ನಾಯಕರನ್ನೇ ನೇಪಥ್ಯಕ್ಕೆ ತಳ್ಳಿದರೆ ಪಕ್ಷ ಇನ್ನಷ್ಟು ನಿಶ್ಶಕ್ತಗೊಳ್ಳುವುದಿಲ್ಲವೇ?