ಗಣರಾಜ್ಯ ಎಂಬ ಪದವು ಅಸಮಾನತೆ, ಶೋಷಣೆಗಳು ಇಲ್ಲದಿದ್ದ ಪ್ರಪಂಚದ ಆದಿಮ ಗಣಸಮಾಜಗಳ ಜೀವನಕ್ರಮವನ್ನು ನೆನಪಿಗೆ ತರುತ್ತದೆ ಮತ್ತು ಅದರ ಆಶಯಗಳನ್ನು ಒಳಗೊಂಡಿದೆ. ಹಾಗಾಗಿ ಇದು ಈ ಆಶಯಗಳನ್ನು ಆಚರಣೆಗೆ ತರುವ ದಿನ. ಭಾರತದ ಎಲ್ಲ ನಾಗರಿಕರ ಅಂತರಂಗದ ಬದಲಾವಣೆಗೆ ಪಣ ತೊಟ್ಟ ದಿನ. ಭಾರತ ರಾಷ್ಟ್ರ ಎಂದರೆ ಇಲ್ಲಿನ ಎಲ್ಲ ನಾಗರಿಕರ ಒಟ್ಟು ಬದುಕು ಎಂದು ಸಂವಿಧಾನ ಹೇಳಿದ ದಿನ. ಸಂವಿಧಾನವನ್ನು ಬರೀ ಕಾನೂನುಗಳ ಗ್ರಂಥವೆಂದು ಸೀಮಿತ ಮಾಡಿ, ಜನಸಾಮಾನ್ಯರು ಅದರಿಂದ ದೂರವಾಗಬಾರದು.