<p>ಕೊರೊನಾ ಸೋಂಕು ಸದ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲವಾದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಆದರೆ ಜನರ ಈಗಿನ ಮನಃಸ್ಥಿತಿಯು ಸಾಮಾಜಿಕ ಅಂತರವನ್ನು ಸುಲಭವಾಗಿ ಸ್ವೀಕರಿಸಲು ಸಿದ್ಧವಾಗಿಲ್ಲ. ಹೀಗಾಗಿ, ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಕಾರ್ಯ ಅಷ್ಟು ಸುಲಭದ್ದಲ್ಲ.</p>.<p>ಈ ದಿಸೆಯಲ್ಲಿ, ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳದೇ ಇದ್ದಾಗ ಎಚ್ಚರಿಕೆಯ ಗಂಟೆ ಹೊಡೆಯುವ ಸಾಧನವನ್ನು ಅಭಿವೃದ್ಧಿಪಡಿಸಬಹುದು. ಸೆನ್ಸರ್ ಚಾಲಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವ ಇದನ್ನು ಕನಿಷ್ಠ ವೆಚ್ಚದೊಂದಿಗೆ ತಯಾರಿಸಬಹುದಾಗಿದೆ. ಈ ಸಾಧನವನ್ನು ಧರಿಸಿದರೆ ಇಬ್ಬರು ವ್ಯಕ್ತಿಗಳು ನಿಗದಿತ ಅಂತರಕ್ಕಿಂತ ಹೆಚ್ಚು ಹತ್ತಿರವಾದಾಗ ಅದು ಎಚ್ಚರಿಸುತ್ತದೆ. ಬಡವರಿಗೆ ಉಚಿತವಾಗಿ ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಇದನ್ನು ವಿತರಿಸಬಹುದು. ಮನೆಯಿಂದ ಹೊರಗೆ ಬಂದಾಗಲೆಲ್ಲಾ ಈ ಸಾಧನವನ್ನು ಧರಿಸಲೇಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಪಾಲಿಸದಿದ್ದರೆ ದಂಡ ವಿಧಿಸಬೇಕು. ಇಂತಹ ಉಪಕರಣವನ್ನು ಇಟಲಿಯಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಜನರಲ್ಲಿ ಜಾಗರೂಕತೆ ಮೂಡಿಸಲು ಈ ಸಾಧನ ಸಹಕಾರಿ.</p>.<p><strong>-ಡಾ. ವೇಣು,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕು ಸದ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲವಾದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಆದರೆ ಜನರ ಈಗಿನ ಮನಃಸ್ಥಿತಿಯು ಸಾಮಾಜಿಕ ಅಂತರವನ್ನು ಸುಲಭವಾಗಿ ಸ್ವೀಕರಿಸಲು ಸಿದ್ಧವಾಗಿಲ್ಲ. ಹೀಗಾಗಿ, ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಕಾರ್ಯ ಅಷ್ಟು ಸುಲಭದ್ದಲ್ಲ.</p>.<p>ಈ ದಿಸೆಯಲ್ಲಿ, ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳದೇ ಇದ್ದಾಗ ಎಚ್ಚರಿಕೆಯ ಗಂಟೆ ಹೊಡೆಯುವ ಸಾಧನವನ್ನು ಅಭಿವೃದ್ಧಿಪಡಿಸಬಹುದು. ಸೆನ್ಸರ್ ಚಾಲಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವ ಇದನ್ನು ಕನಿಷ್ಠ ವೆಚ್ಚದೊಂದಿಗೆ ತಯಾರಿಸಬಹುದಾಗಿದೆ. ಈ ಸಾಧನವನ್ನು ಧರಿಸಿದರೆ ಇಬ್ಬರು ವ್ಯಕ್ತಿಗಳು ನಿಗದಿತ ಅಂತರಕ್ಕಿಂತ ಹೆಚ್ಚು ಹತ್ತಿರವಾದಾಗ ಅದು ಎಚ್ಚರಿಸುತ್ತದೆ. ಬಡವರಿಗೆ ಉಚಿತವಾಗಿ ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಇದನ್ನು ವಿತರಿಸಬಹುದು. ಮನೆಯಿಂದ ಹೊರಗೆ ಬಂದಾಗಲೆಲ್ಲಾ ಈ ಸಾಧನವನ್ನು ಧರಿಸಲೇಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಪಾಲಿಸದಿದ್ದರೆ ದಂಡ ವಿಧಿಸಬೇಕು. ಇಂತಹ ಉಪಕರಣವನ್ನು ಇಟಲಿಯಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಜನರಲ್ಲಿ ಜಾಗರೂಕತೆ ಮೂಡಿಸಲು ಈ ಸಾಧನ ಸಹಕಾರಿ.</p>.<p><strong>-ಡಾ. ವೇಣು,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>