ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ವರ್ಷಾರಂಭದಿಂದ ಇದುವರೆಗೆ ನಾಲ್ಕು ಹುಲಿಗಳು ಮೃತಪಟ್ಟಿರುವುದು ಮತ್ತು ವಿದ್ಯುತ್ ಆಘಾತದಿಂದ ಹೆಬ್ಬಕಗಳು ವಿನಾಶದತ್ತ ಸಾಗಿರುವುದು (ಪ್ರ.ವಾ., ಜುಲೈ 29) ನಾವು ಪರಿಸರದಲ್ಲಿ ಎಷ್ಟರಮಟ್ಟಿಗೆ ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂಬುದನ್ನು ಎತ್ತಿ ತೋರಿಸುತ್ತಿವೆ. ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಿರುವುದು ಸಂತಸದ ಸಂಗತಿಯಾದರೂ ಮಾನವ- ವನ್ಯಜೀವಿ ಸಂಘರ್ಷಕ್ಕೆ ಹುಲಿಗಳು ಆಗಾಗ್ಗೆ ಬಲಿಯಾಗುತ್ತಲೇ ಇರುವುದು ಕಳವಳಕಾರಿ.