<p>ಗಣೇಶನ ಹಬ್ಬಕ್ಕಾಗಿ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಮಾಡಿ ಜನರನ್ನು ಆಕರ್ಷಿಸುವುದು ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಾಗಿದೆ. ರೈತ ಗಣೇಶ, ಪೊಲೀಸ್ ಗಣೇಶ, ವೀರಪ್ಪನ್ ಗಣೇಶ, ಕೈಯಲ್ಲಿ ಗನ್ ಹಿಡಿದಿರುವ ಗಣೇಶ, ಕೂಲಿಂಗ್ ಗ್ಲಾಸ್ ಹಾಕಿದ ಗಣಪ... ಹೀಗೆ ಹಲವಾರು ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಪುರಾಣದ ಪ್ರಕಾರ ಗಣೇಶ ಅಂದರೆ, ಆನೆ ಸೊಂಡಿಲಿನ ಮುಖ, ಚಿಕ್ಕ ಕಣ್ಣು, ಮೊರದಗಲ ಕಿವಿ, ಹೊಟ್ಟೆಯಲ್ಲಿ ಹಾವು ಸುತ್ತಿರುವುದು, ಕೆಳಗೆ ಮೂಷಿಕ ವಾಹನ. ಈ ತರಹದ ಗಣೇಶನನ್ನು ನೋಡಿದರೆ ಭಕ್ತಿ ಭಾವ ಮೂಡುತ್ತದೆ. ಇಂದಿನ ಪುಟ್ಟ ಮಕ್ಕಳಿಗೂ ಗಣೇಶ ಅಂದರೆ ಹೀಗಿರುತ್ತಾನೆ ಎಂಬ ಕಲ್ಪನೆ ಬರುತ್ತದೆ.</p>.<p>ಆದರೆ ಪುರಾಣ ಕಾಲದ ಇಂತಹ ಗಣಪನನ್ನು ಅಳಿಸಿ ಆಧುನಿಕ ಕಾಲದ, ವಿಚಿತ್ರವಾದ ಗಣಪನನ್ನು ತಯಾರಿಸುವುದು ಸರಿಯಲ್ಲ. ಜೊತೆಗೆ ಪರಿಸರ ಕಾಳಜಿ ವಹಿಸಿ, ಬಣ್ಣರಹಿತ ಮಣ್ಣಿನ ಗಣಪನ ಮೂರ್ತಿಗೆ ಪ್ರಾಶಸ್ತ್ಯ ನೀಡಬೇಕು. ಪ್ರತಿಯೊಂದು ಏರಿಯಾದಲ್ಲೂ ವಿವಿಧೆಡೆ ಗಣೇಶ ನನ್ನು ಕೂರಿಸಿ ಅನಗತ್ಯ ಖರ್ಚು ಮಾಡದೆ, ಏರಿಯಾಗೆ ಒಂದೇ ಗಣಪನಿರಲಿ. ಬಡ ವಿದ್ಯಾರ್ಥಿಗಳಿಗೆ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುವಂತಾಗಲಿ. ಇದನ್ನೇ ವೇದಿಕೆಯಾಗಿಸಿಕೊಂಡು, ಆಯಾ ಏರಿಯಾದ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ತಮ್ಮ ಕಾರ್ಯಕ್ರಮದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿ, ಧ್ವನಿವರ್ಧಕಗಳು ಕಿವಿಗಡಚಿಕ್ಕದಂತೆ ನೋಡಿಕೊಂಡರೆ ಗಣೇಶನ ಹಬ್ಬಕ್ಕೆ ಅರ್ಥ ಬರುತ್ತದೆ.</p>.<p><em><strong>ಎಂ.ಎಸ್.ಉಷಾ ಪ್ರಕಾಶ್, ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಣೇಶನ ಹಬ್ಬಕ್ಕಾಗಿ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಮಾಡಿ ಜನರನ್ನು ಆಕರ್ಷಿಸುವುದು ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಾಗಿದೆ. ರೈತ ಗಣೇಶ, ಪೊಲೀಸ್ ಗಣೇಶ, ವೀರಪ್ಪನ್ ಗಣೇಶ, ಕೈಯಲ್ಲಿ ಗನ್ ಹಿಡಿದಿರುವ ಗಣೇಶ, ಕೂಲಿಂಗ್ ಗ್ಲಾಸ್ ಹಾಕಿದ ಗಣಪ... ಹೀಗೆ ಹಲವಾರು ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಪುರಾಣದ ಪ್ರಕಾರ ಗಣೇಶ ಅಂದರೆ, ಆನೆ ಸೊಂಡಿಲಿನ ಮುಖ, ಚಿಕ್ಕ ಕಣ್ಣು, ಮೊರದಗಲ ಕಿವಿ, ಹೊಟ್ಟೆಯಲ್ಲಿ ಹಾವು ಸುತ್ತಿರುವುದು, ಕೆಳಗೆ ಮೂಷಿಕ ವಾಹನ. ಈ ತರಹದ ಗಣೇಶನನ್ನು ನೋಡಿದರೆ ಭಕ್ತಿ ಭಾವ ಮೂಡುತ್ತದೆ. ಇಂದಿನ ಪುಟ್ಟ ಮಕ್ಕಳಿಗೂ ಗಣೇಶ ಅಂದರೆ ಹೀಗಿರುತ್ತಾನೆ ಎಂಬ ಕಲ್ಪನೆ ಬರುತ್ತದೆ.</p>.<p>ಆದರೆ ಪುರಾಣ ಕಾಲದ ಇಂತಹ ಗಣಪನನ್ನು ಅಳಿಸಿ ಆಧುನಿಕ ಕಾಲದ, ವಿಚಿತ್ರವಾದ ಗಣಪನನ್ನು ತಯಾರಿಸುವುದು ಸರಿಯಲ್ಲ. ಜೊತೆಗೆ ಪರಿಸರ ಕಾಳಜಿ ವಹಿಸಿ, ಬಣ್ಣರಹಿತ ಮಣ್ಣಿನ ಗಣಪನ ಮೂರ್ತಿಗೆ ಪ್ರಾಶಸ್ತ್ಯ ನೀಡಬೇಕು. ಪ್ರತಿಯೊಂದು ಏರಿಯಾದಲ್ಲೂ ವಿವಿಧೆಡೆ ಗಣೇಶ ನನ್ನು ಕೂರಿಸಿ ಅನಗತ್ಯ ಖರ್ಚು ಮಾಡದೆ, ಏರಿಯಾಗೆ ಒಂದೇ ಗಣಪನಿರಲಿ. ಬಡ ವಿದ್ಯಾರ್ಥಿಗಳಿಗೆ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುವಂತಾಗಲಿ. ಇದನ್ನೇ ವೇದಿಕೆಯಾಗಿಸಿಕೊಂಡು, ಆಯಾ ಏರಿಯಾದ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ತಮ್ಮ ಕಾರ್ಯಕ್ರಮದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿ, ಧ್ವನಿವರ್ಧಕಗಳು ಕಿವಿಗಡಚಿಕ್ಕದಂತೆ ನೋಡಿಕೊಂಡರೆ ಗಣೇಶನ ಹಬ್ಬಕ್ಕೆ ಅರ್ಥ ಬರುತ್ತದೆ.</p>.<p><em><strong>ಎಂ.ಎಸ್.ಉಷಾ ಪ್ರಕಾಶ್, ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>