<p>ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ತಾಲ್ಲೂಕಿನ ಮೋಹಿತೆ ವಡಗಾಂವದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಓದುವಂತೆ ಮಾಡಲು ನಿತ್ಯ ಸಂಜೆ 7ರಿಂದ ರಾತ್ರಿ 8.30ರವರೆಗೆ ಇಡೀ ಹಳ್ಳಿಯಲ್ಲಿ ‘ಡಿಜಿಟಲ್ ಲಾಕ್ಡೌನ್’ ಮಾಡಿರುವುದು (ಪ್ರ.ವಾ., ಅ. 7) ವರದಿಯಾಗಿದೆ. ಕೋವಿಡ್ ಲಾಕ್ಡೌನಿನ ತರುವಾಯ ಅಂದು ಮಕ್ಕಳಿಗೆ ಶಿಕ್ಷಣ ನೀಡಲು ಆನ್ಲೈನ್ ತರಗತಿಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ಮೊಬೈಲ್ ಬಳಕೆ ಮಾಡಿದ್ದರಿಂದ ಹಲವುದುಷ್ಪರಿಣಾಮಗಳನ್ನು ಇಂದು ಎದುರಿಸಬೇಕಾಗಿದೆ.</p>.<p>ಭೌತಿಕ ತರಗತಿಗಳು ಪ್ರಾರಂಭವಾದರೂ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದಿಲ್ಲ. ಅವರನ್ನು ಡಿಜಿಟಲ್ ಮಾಧ್ಯಮಗಳಿಂದ ವಿಮುಖರನ್ನಾಗಿ ಮಾಡಲು ಹಳ್ಳಿಯವರ ತೀರ್ಮಾನವು ಮಾದರಿ ಮತ್ತು ಅನುಕರಣೀಯವಾಗಿದೆ. ಇದು ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗದೆ, ಗುರುವರ್ಗದವರು ಮತ್ತು ಪೋಷಕರಿಗೂ ವಿಸ್ತರಣೆಯಾಗಲಿ. ಏಕೆಂದರೆ ಇಂದು ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್ ಎಂಬ ಮಾಯೆಯ ವಶವರ್ತಿಯಾಗಿದ್ದಾರೆ. ಇದರಿಂದ ಹೊರಬರಲು ವಡಗಾಂವದ ಅನುಕರಣೀಯ ನಡೆಯು ಹಳ್ಳಿ ಮತ್ತುಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಲಿ.</p>.<p>ಡಾ. ರುದ್ರೇಶ್ ಅದರಂಗಿ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ತಾಲ್ಲೂಕಿನ ಮೋಹಿತೆ ವಡಗಾಂವದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಓದುವಂತೆ ಮಾಡಲು ನಿತ್ಯ ಸಂಜೆ 7ರಿಂದ ರಾತ್ರಿ 8.30ರವರೆಗೆ ಇಡೀ ಹಳ್ಳಿಯಲ್ಲಿ ‘ಡಿಜಿಟಲ್ ಲಾಕ್ಡೌನ್’ ಮಾಡಿರುವುದು (ಪ್ರ.ವಾ., ಅ. 7) ವರದಿಯಾಗಿದೆ. ಕೋವಿಡ್ ಲಾಕ್ಡೌನಿನ ತರುವಾಯ ಅಂದು ಮಕ್ಕಳಿಗೆ ಶಿಕ್ಷಣ ನೀಡಲು ಆನ್ಲೈನ್ ತರಗತಿಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ಮೊಬೈಲ್ ಬಳಕೆ ಮಾಡಿದ್ದರಿಂದ ಹಲವುದುಷ್ಪರಿಣಾಮಗಳನ್ನು ಇಂದು ಎದುರಿಸಬೇಕಾಗಿದೆ.</p>.<p>ಭೌತಿಕ ತರಗತಿಗಳು ಪ್ರಾರಂಭವಾದರೂ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದಿಲ್ಲ. ಅವರನ್ನು ಡಿಜಿಟಲ್ ಮಾಧ್ಯಮಗಳಿಂದ ವಿಮುಖರನ್ನಾಗಿ ಮಾಡಲು ಹಳ್ಳಿಯವರ ತೀರ್ಮಾನವು ಮಾದರಿ ಮತ್ತು ಅನುಕರಣೀಯವಾಗಿದೆ. ಇದು ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗದೆ, ಗುರುವರ್ಗದವರು ಮತ್ತು ಪೋಷಕರಿಗೂ ವಿಸ್ತರಣೆಯಾಗಲಿ. ಏಕೆಂದರೆ ಇಂದು ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್ ಎಂಬ ಮಾಯೆಯ ವಶವರ್ತಿಯಾಗಿದ್ದಾರೆ. ಇದರಿಂದ ಹೊರಬರಲು ವಡಗಾಂವದ ಅನುಕರಣೀಯ ನಡೆಯು ಹಳ್ಳಿ ಮತ್ತುಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಲಿ.</p>.<p>ಡಾ. ರುದ್ರೇಶ್ ಅದರಂಗಿ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>