ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದರೆಂಬ ಕಾರಣಕ್ಕೆ, ಬಹುಪಾಲು ಅಶಕ್ತರ ಮನೆಗಳನ್ನೇ ನೆಲಸಮ ಮಾಡಿದ ಅಧಿಕಾರಿಗಳಿಗೆ, ಬಲಾಢ್ಯರ ಸ್ವತ್ತನ್ನು ಮುಟ್ಟುವ ಧೈರ್ಯವಾಗಲಿಲ್ಲ. ಅಷ್ಟರಲ್ಲಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅವರನ್ನು ರಕ್ಷಿಸಲು ಇದು ಒಂದು ರೀತಿಯಲ್ಲಿ ಅವರಿಗೆ ವರದಾನವಾಯಿತು! ವರ್ಷಗಳ ನಂತರವೂ ತಡೆಯಾಜ್ಞೆ ತೆರವಾಗದಿರುವುದನ್ನು ಗಮನಿಸಿದರೆ, ಒಂದೋ ಕಾನೂನು ಕೋಶದ ಅಧಿಕಾರಿಗಳು ಅಸಮರ್ಥರಿರಬೇಕು ಅಥವಾ ತಡೆಯಾಜ್ಞೆ ತಂದಿರುವವರ ಜೊತೆ ಅವರು ಕೈಜೋಡಿಸಿರಬೇಕು ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.