<p>ಬೆಂಗಳೂರಿನಲ್ಲಿ ಫ್ಲೆಕ್ಸ್ ನಿಯಂತ್ರಣಕ್ಕೆ ಕೋರ್ಟ್ ಆದೇಶ ನೀಡಿತ್ತು. ರಾಜಧಾನಿಯ ಅಂದ ಹಾಳಾಗುತ್ತಿದ್ದುದನ್ನು ಮನಗಂಡ ನ್ಯಾಯಾಲಯದ ಈ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಬಿಬಿಎಂಪಿ) ಒಂದೆರಡು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಿದರು. ಇತ್ತೀಚೆಗೆ ಹಲವಾರು ಕಾರಣಗಳ ನೆಪವೊಡ್ಡಿ ಮತ್ತೆ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಇಂತಹದ್ದೇ ಕಾರಣ ಎನ್ನುವಂತಿಲ್ಲ. ಕೊರೊನಾ ಪ್ರಚಾರ, ಸರ್ಕಾರದ ಕೆಲಸಗಳ ಶಂಕುಸ್ಥಾಪನೆ, ಉದ್ಘಾಟನೆ, ಜನ್ಮದಿನ ಈ ರೀತಿಯ ಕಾರಣಗಳಿಗಾಗಿ ಜನಪ್ರತಿನಿಧಿಗಳ ಫೋಟೊ ಸಮೇತ ಫ್ಲೆಕ್ಸ್ಗಳು ಎಲ್ಲೆಡೆ ಕಂಡುಬರುತ್ತಿವೆ. ಜನಪ್ರತಿನಿಧಿಗಳ ಹಿಂಬಾಲಕರು ಹಟಕ್ಕೆ ಬಿದ್ದವರಂತೆ, ಫ್ಲೆಕ್ಸ್ ಮಾಡಿಸಿದರೆ ತಮ್ಮ ನಾಯಕರ ಕೃಪೆಗೆ ಪಾತ್ರರಾಗುತ್ತೇವೆ ಎಂಬ ಭ್ರಮೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಎಷ್ಟೋ ದಿನಗಳಾದರೂ ತೆಗೆಯದ ಫ್ಲೆಕ್ಸ್, ಬ್ಯಾನರ್ಗಳಿಂದ ಮಳೆಗಾಲದಲ್ಲಿ, ಹೆಚ್ಚು ಗಾಳಿ ಬಂದಾಗ ಅವು ಮೋರಿಗೋ ಒಳಚರಂಡಿಗೋ ಬಿದ್ದು ನೀರು ನಿಂತು ಅನಾಹುತಗಳಾಗುತ್ತವೆ. ಕಾರ್ಯಕ್ರಮ ಆದಮೇಲೆ ಅವುಗಳನ್ನು ತೆಗೆಸಲು ಆಯೋಜಕರು ಮನಸ್ಸು ಮಾಡುವುದಿಲ್ಲ. ಕಾರ್ಯಕ್ರಮ ಮುಗಿದ ಮಾರನೇ ದಿನ ಅವುಗಳನ್ನು ತೆಗೆಯುವಂತೆ ಬಿಬಿಎಂಪಿ ನೋಡಿಕೊಳ್ಳಬೇಕು.</p>.<p>-ಡಾ. ಮಲ್ಲತ್ತಹಳ್ಳಿ ಎಚ್. ತುಕಾರಾಂ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನಲ್ಲಿ ಫ್ಲೆಕ್ಸ್ ನಿಯಂತ್ರಣಕ್ಕೆ ಕೋರ್ಟ್ ಆದೇಶ ನೀಡಿತ್ತು. ರಾಜಧಾನಿಯ ಅಂದ ಹಾಳಾಗುತ್ತಿದ್ದುದನ್ನು ಮನಗಂಡ ನ್ಯಾಯಾಲಯದ ಈ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಬಿಬಿಎಂಪಿ) ಒಂದೆರಡು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಿದರು. ಇತ್ತೀಚೆಗೆ ಹಲವಾರು ಕಾರಣಗಳ ನೆಪವೊಡ್ಡಿ ಮತ್ತೆ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಇಂತಹದ್ದೇ ಕಾರಣ ಎನ್ನುವಂತಿಲ್ಲ. ಕೊರೊನಾ ಪ್ರಚಾರ, ಸರ್ಕಾರದ ಕೆಲಸಗಳ ಶಂಕುಸ್ಥಾಪನೆ, ಉದ್ಘಾಟನೆ, ಜನ್ಮದಿನ ಈ ರೀತಿಯ ಕಾರಣಗಳಿಗಾಗಿ ಜನಪ್ರತಿನಿಧಿಗಳ ಫೋಟೊ ಸಮೇತ ಫ್ಲೆಕ್ಸ್ಗಳು ಎಲ್ಲೆಡೆ ಕಂಡುಬರುತ್ತಿವೆ. ಜನಪ್ರತಿನಿಧಿಗಳ ಹಿಂಬಾಲಕರು ಹಟಕ್ಕೆ ಬಿದ್ದವರಂತೆ, ಫ್ಲೆಕ್ಸ್ ಮಾಡಿಸಿದರೆ ತಮ್ಮ ನಾಯಕರ ಕೃಪೆಗೆ ಪಾತ್ರರಾಗುತ್ತೇವೆ ಎಂಬ ಭ್ರಮೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಎಷ್ಟೋ ದಿನಗಳಾದರೂ ತೆಗೆಯದ ಫ್ಲೆಕ್ಸ್, ಬ್ಯಾನರ್ಗಳಿಂದ ಮಳೆಗಾಲದಲ್ಲಿ, ಹೆಚ್ಚು ಗಾಳಿ ಬಂದಾಗ ಅವು ಮೋರಿಗೋ ಒಳಚರಂಡಿಗೋ ಬಿದ್ದು ನೀರು ನಿಂತು ಅನಾಹುತಗಳಾಗುತ್ತವೆ. ಕಾರ್ಯಕ್ರಮ ಆದಮೇಲೆ ಅವುಗಳನ್ನು ತೆಗೆಸಲು ಆಯೋಜಕರು ಮನಸ್ಸು ಮಾಡುವುದಿಲ್ಲ. ಕಾರ್ಯಕ್ರಮ ಮುಗಿದ ಮಾರನೇ ದಿನ ಅವುಗಳನ್ನು ತೆಗೆಯುವಂತೆ ಬಿಬಿಎಂಪಿ ನೋಡಿಕೊಳ್ಳಬೇಕು.</p>.<p>-ಡಾ. ಮಲ್ಲತ್ತಹಳ್ಳಿ ಎಚ್. ತುಕಾರಾಂ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>