ಪ್ರತಿಬಾರಿ ಹಬ್ಬಗಳನ್ನು ವೈಭವದಿಂದ ಆಚರಿಸುತ್ತ, ಟನ್ಗಟ್ಟಲೆ ತ್ಯಾಜ್ಯ ಉತ್ಪಾದಿಸುತ್ತಿದ್ದೇವೆ. ಇದರಿಂದ ಹಬ್ಬಗಳು ಪ್ರಕೃತಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಇದರ ಪರಿಣಾಮವನ್ನು ಒಂದಲ್ಲ ಒಂದು ದಿನ ನಾವೇ ಎದುರಿಸಬೇಕಾಗುತ್ತದೆ. ಹೀಗಾಗಿ, ಪರಿಸರಕ್ಕೆ ಹಿತವಾಗುವಂತೆ ಹಬ್ಬಗಳನ್ನು ಶ್ರದ್ಧೆ, ಭಕ್ತಿ, ಸಂಪ್ರದಾಯಬದ್ಧವಾಗಿ ಸರಳವಾಗಿ ಆಚರಿಸಬೇಕು. ರಾಸಾಯನಿಕಮುಕ್ತ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಮಾಲಿನ್ಯ ತಡೆಗೆ ಮುಂದಾಗಬೇಕು.