<p>ಎಥೆನಾಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ಎಂ.ಆರ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಎಂ.ನಿರಾಣಿ ಅವರು ಜಾಗತಿಕ ಹೂಡಿಕೆ ದಾರರ ಸಮಾವೇಶದಲ್ಲಿ ಕರೆ ನೀಡಿರುವುದು ಸರಿಯಾಗಿದೆ. ಆದರೆ ಎಥೆನಾಲ್ ಅನ್ನು ಉತ್ಪಾದಿಸುವ ಕಬ್ಬಿನ ಬೆಳೆಗೆ ಸರ್ಕಾರ ಮೊದಲು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕಿದೆ. ಅಷ್ಟೇ ಅಲ್ಲ, ಸಮಯಕ್ಕೆ ಸರಿಯಾಗಿ ಗುಣಮಟ್ಟದ ರಾಸಾಯನಿಕ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ಪೂರೈಸಲು ಹಾಗೂ ಕಟಾವಿನ ನಂತರ ಕಬ್ಬು ಸಾಗಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ. ಹವಾಮಾನ ವೈಪರೀತ್ಯ, ಕೃಷಿ ಕ್ಷೇತ್ರದಲ್ಲಿನ ನಷ್ಟ ಸೇರಿದಂತೆ ಅನೇಕ ಕಾರಣ ಗಳಿಂದಾಗಿ ರೈತರಲ್ಲಿ ಕೃಷಿ ಬಗೆಗಿನ ಆಸಕ್ತಿಯೇ ಕುಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರವು ಮೂಲಕ್ಷೇತ್ರವನ್ನು ಸುಧಾರಿಸಿ ಬಳಿಕ ಹಸಿರು ಇಂಧನದ ಹೂಡಿಕೆಗಳತ್ತ ಗಮನ ಹರಿಸಲಿ.</p>.<p><em><strong>-ಶ್ರೀನಿವಾಸ್ ಚಕ್ರವರ್ತಿ,<span class="Designate"> ಹೊಳಲು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಥೆನಾಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ಎಂ.ಆರ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಎಂ.ನಿರಾಣಿ ಅವರು ಜಾಗತಿಕ ಹೂಡಿಕೆ ದಾರರ ಸಮಾವೇಶದಲ್ಲಿ ಕರೆ ನೀಡಿರುವುದು ಸರಿಯಾಗಿದೆ. ಆದರೆ ಎಥೆನಾಲ್ ಅನ್ನು ಉತ್ಪಾದಿಸುವ ಕಬ್ಬಿನ ಬೆಳೆಗೆ ಸರ್ಕಾರ ಮೊದಲು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕಿದೆ. ಅಷ್ಟೇ ಅಲ್ಲ, ಸಮಯಕ್ಕೆ ಸರಿಯಾಗಿ ಗುಣಮಟ್ಟದ ರಾಸಾಯನಿಕ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ಪೂರೈಸಲು ಹಾಗೂ ಕಟಾವಿನ ನಂತರ ಕಬ್ಬು ಸಾಗಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ. ಹವಾಮಾನ ವೈಪರೀತ್ಯ, ಕೃಷಿ ಕ್ಷೇತ್ರದಲ್ಲಿನ ನಷ್ಟ ಸೇರಿದಂತೆ ಅನೇಕ ಕಾರಣ ಗಳಿಂದಾಗಿ ರೈತರಲ್ಲಿ ಕೃಷಿ ಬಗೆಗಿನ ಆಸಕ್ತಿಯೇ ಕುಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರವು ಮೂಲಕ್ಷೇತ್ರವನ್ನು ಸುಧಾರಿಸಿ ಬಳಿಕ ಹಸಿರು ಇಂಧನದ ಹೂಡಿಕೆಗಳತ್ತ ಗಮನ ಹರಿಸಲಿ.</p>.<p><em><strong>-ಶ್ರೀನಿವಾಸ್ ಚಕ್ರವರ್ತಿ,<span class="Designate"> ಹೊಳಲು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>