ವಲ್ಲಭ ಭಾಯಿ ಪಟೇಲರೇ ಗಡಿ ಸಮಸ್ಯೆಗೆ ಮೂಲ ಕಾರಣ ಎಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಹೇಳಿರುವುದು ಆಶ್ಚರ್ಯಕರ. ಪಟೇಲರು ನಿಧನ ಹೊಂದಿದ್ದು 1950ರಲ್ಲಿ. ಮೈಸೂರು ಅಥವಾ ಕರ್ನಾಟಕ ರಾಜ್ಯ ಈಗಿರುವಂತೆ ಅಸ್ತಿತ್ವಕ್ಕೆ ಬಂದದ್ದು 1956ರಲ್ಲಿ. ರಾಜ್ಯಗಳು ಪುನರ್ವಿಂಗಡಣೆ ಆದ ಬಳಿಕ ಮತ್ತು ಕೇಂದ್ರ ಸರ್ಕಾರದ ಕಾನೂನಿನಂತೆ, ಸುತ್ತಲಿನ ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳು ಒಂದು ಕಡೆ ಸೇರಿದವು. ನಿಜ, ಕೆಲವು ಪ್ರದೇಶಗಳು ಇನ್ನೂ ಸೇರಬೇಕಿದೆ. ಆದರೆ ಅದು ಆನಂತರ ಉಂಟಾಗಿರುವ ಸಮಸ್ಯೆ. ವಸ್ತುಸ್ಥಿತಿ ಹೀಗಿರುವಾಗ, ಗಡಿ ಸಮಸ್ಯೆಯನ್ನು ಪಟೇಲರಿಗೆ ಆರೋಪಿಸುವುದು ದುರದೃಷ್ಟಕರ.