ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಆಸ್ಪದವಿಲ್ಲ

Last Updated 21 ಅಕ್ಟೋಬರ್ 2019, 17:51 IST
ಅಕ್ಷರ ಗಾತ್ರ

ಹಾವೇರಿಯ ಪಿಯು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ತೊಡಿಸಿ ಪರೀಕ್ಷೆ ಬರೆಸಲಾಗಿದೆ (ಪ್ರ.ವಾ., ಅ.19). ಇದನ್ನು ಶಿಕ್ಷಣ ಇಲಾಖೆಯೇ ತೀವ್ರವಾಗಿ ಖಂಡಿಸಿರುವುದು ಖುಷಿಯ ವಿಚಾರವಾದರೆ, ವಿದ್ಯಾರ್ಥಿಗಳಿಗೆ ಬಂದೊದಗಿದ ದುಃಸ್ಥಿತಿ ಕಂಡು ಬೇಸರವಾಯಿತು. ಆಕ್ಷೇಪವಿಲ್ಲದಿದ್ದರೆ ಈ ವಿಧಾನವನ್ನು ಅಳವಡಿಸಲು ನಮ್ಮಲ್ಲಿ ಬಹಳಷ್ಟು ಮಂದಿ ತಯಾರಿರಬಹುದು. ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಯಾವುದೇ ಆಸ್ಪದವಿಲ್ಲದೆ ಅವರನ್ನು ಕುರಿಗಳಂತೆ ನಡೆಸಿಕೊಳ್ಳುವುದು ಸಾಮಾನ್ಯವಾಗಿದೆ. ನಕಲು ಮಾಡುವ ಮನಃಸ್ಥಿತಿಯೇ ಬಾರದಂತೆ ನೋಡಿಕೊಳ್ಳುವುದು ಶಾಲೆ-ಕಾಲೇಜುಗಳ ಜವಾಬ್ದಾರಿಯೇ ಹೊರತು ಇಂತಹ ವಿಧಾನಗಳಿಂದ ಏನೂ ಲಾಭವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT