ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದಲ್ಲಿ ಹಾದು ಹೋಗುವ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಯ ಪ್ರಸ್ತಾವವನ್ನು ರಾಜ್ಯ ವನ್ಯಜೀವಿ ಮಂಡಳಿ ತಿರಸ್ಕರಿಸಿರುವುದು (ಪ್ರ.ವಾ., ಮಾರ್ಚ್ 10) ಸ್ವಾಗತಾರ್ಹ ಬೆಳವಣಿಗೆ. ಲಕ್ಷಾಂತರ ಮರಗಳನ್ನು ಹನನ ಮಾಡಿ ನೂರಾರು ವನ್ಯಜೀವಿಗಳ ನೆಲೆಯನ್ನು ನಾಶ ಮಾಡಿ ರೈಲು ಮಾರ್ಗ ನಿರ್ಮಿಸುವ ಯೋಜನೆ ಅಪೇಕ್ಷಣೀಯವಲ್ಲ. ಕಾಡಿನಲ್ಲಿ, ಅದರಲ್ಲೂ ಪಶ್ಚಿಮಘಟ್ಟ ದಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅತ್ಯಂತ ಅಪಾಯಕಾರಿ.