ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಪಾತ್ರ ಎದ್ದು ಕಾಣುತ್ತಿದೆ.ಆ ಆವರಣದಲ್ಲಿ ಪ್ರಸ್ತುತ ಯೋಜನೆಯನ್ನು ಕಾರ್ಯರೂಪಕ್ಕೆ ತಂದದ್ದೇ ಆದರೆ ಸಹಸ್ರಾರು ವೃಕ್ಷಗಳ ಮಾರಣಹೋಮ ನಡೆಯುತ್ತದೆ. ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂಬ ನಾಣ್ನುಡಿಯಂತೆ ನಾವು ವೃಕ್ಷಗಳನ್ನು ಬೆಳೆಸಿ, ಇಡೀ ಪರಿಸರಕ್ಕೆ ಆಮ್ಲಜನಕ ಕೊಡುವಂತೆ ಮಾಡಿ, ವಿವಿಧ ಪಕ್ಷಿಗಳಿಗೆ ಆಶ್ರಯತಾಣವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗಿದೆ. ಹೀಗಾಗಿ, ಪರಿಸರ ವಿರೋಧಿಯಾಗಿರುವ ಪ್ರಸ್ತುತ ಯೋಜನೆಯನ್ನು ಕೂಡಲೇ ಕೈಬಿಡಬೇಕು.