<p>ಕೇಂದ್ರ ಸರ್ಕಾರವು ಪ್ರತಿವರ್ಷ ಸೆ. 14ರಂದು ಹಿಂದಿ ದಿವಸವನ್ನು ದೇಶದಾದ್ಯಂತ ಆಚರಿಸುತ್ತಾ ಬಂದಿದೆ. ಹಲವು ಭಾಷೆಗಳ ಭಾರತದಲ್ಲಿ ಆಚರಿಸಬೇಕಾಗಿರುವುದು ಭಾರತೀಯ ಭಾಷೆಗಳ ದಿವಸವೇ ಹೊರತು ಹಿಂದಿ ದಿವಸವಲ್ಲ. ನಮಗೆ ಸ್ವಾತಂತ್ರ್ಯ ಬಂದ ನಂತರ ದಶಕದಿಂದ ದಶಕಕ್ಕೆ ಹಿಂದಿ ಹೇರಿಕೆಯ ಬಿಗಿಪಟ್ಟು ಹೆಚ್ಚುತ್ತಾ ಹೋಗುತ್ತಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.</p>.<p>ಇದೇ ಅಕ್ಟೋಬರ್ 10ರಂದು ದೇಶದಾದ್ಯಂತ ನಾಗರಿಕ ಸೇವಾ (ಯುಪಿಎಸ್ಸಿ) ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದೆ. ಹಿಂದಿ ಭಾಷಿಕರಿಗೆ ಅವರ ನುಡಿಯಲ್ಲಿಯೇ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟು ಉಳಿದ ಭಾಷಿಕರಿಗೆ ಬೆನ್ನು ತಿರುಗಿಸುವುದನ್ನು ಹೇಗೆ ಸ್ಪರ್ಧಾತ್ಮಕ ಪರೀಕ್ಷೆ ಎಂದು ಕರೆಯಲು ಸಾಧ್ಯ? ಇದು ಭಾಷಾವಾರು ಒಕ್ಕೂಟ ಧರ್ಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪರೀಕ್ಷೆಯು ಅತ್ಯಂತ ಸಹಜವಾಗಿ, ಸಂವಿಧಾನಾತ್ಮಕವಾಗಿ ಕನ್ನಡವೂ ಸೇರಿದಂತೆ ಉಳಿದ ಭಾರತೀಯ ಭಾಷೆಗಳಲ್ಲಿಯೂ ಸಿಗಬೇಕು.</p>.<p><strong>- ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇಂದ್ರ ಸರ್ಕಾರವು ಪ್ರತಿವರ್ಷ ಸೆ. 14ರಂದು ಹಿಂದಿ ದಿವಸವನ್ನು ದೇಶದಾದ್ಯಂತ ಆಚರಿಸುತ್ತಾ ಬಂದಿದೆ. ಹಲವು ಭಾಷೆಗಳ ಭಾರತದಲ್ಲಿ ಆಚರಿಸಬೇಕಾಗಿರುವುದು ಭಾರತೀಯ ಭಾಷೆಗಳ ದಿವಸವೇ ಹೊರತು ಹಿಂದಿ ದಿವಸವಲ್ಲ. ನಮಗೆ ಸ್ವಾತಂತ್ರ್ಯ ಬಂದ ನಂತರ ದಶಕದಿಂದ ದಶಕಕ್ಕೆ ಹಿಂದಿ ಹೇರಿಕೆಯ ಬಿಗಿಪಟ್ಟು ಹೆಚ್ಚುತ್ತಾ ಹೋಗುತ್ತಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.</p>.<p>ಇದೇ ಅಕ್ಟೋಬರ್ 10ರಂದು ದೇಶದಾದ್ಯಂತ ನಾಗರಿಕ ಸೇವಾ (ಯುಪಿಎಸ್ಸಿ) ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದೆ. ಹಿಂದಿ ಭಾಷಿಕರಿಗೆ ಅವರ ನುಡಿಯಲ್ಲಿಯೇ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟು ಉಳಿದ ಭಾಷಿಕರಿಗೆ ಬೆನ್ನು ತಿರುಗಿಸುವುದನ್ನು ಹೇಗೆ ಸ್ಪರ್ಧಾತ್ಮಕ ಪರೀಕ್ಷೆ ಎಂದು ಕರೆಯಲು ಸಾಧ್ಯ? ಇದು ಭಾಷಾವಾರು ಒಕ್ಕೂಟ ಧರ್ಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪರೀಕ್ಷೆಯು ಅತ್ಯಂತ ಸಹಜವಾಗಿ, ಸಂವಿಧಾನಾತ್ಮಕವಾಗಿ ಕನ್ನಡವೂ ಸೇರಿದಂತೆ ಉಳಿದ ಭಾರತೀಯ ಭಾಷೆಗಳಲ್ಲಿಯೂ ಸಿಗಬೇಕು.</p>.<p><strong>- ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>