ಅರಣ್ಯ ನಿಯಮ ಉಲ್ಲಂಘನೆ ಸೇರಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರೇ ಉಲ್ಲೇಖಿಸಿದ್ದಾರಂತೆ! ಹೀಗಾಗಿ ಅವರ ಖಾತೆ ಬದಲಿಸುವಂತೆ ಒತ್ತಡ ಹೆಚ್ಚಾಗಿದೆ. ಕೀಟಲೆ ಮಾಡುವ ಪುಂಡುಪೋಕರಿಯನ್ನು ಅದೇ ತರಗತಿಯ ಲೀಡರನ್ನಾಗಿ ಮಾಡುವ ಪರಿಪಾಟ ಕೆಲವು ಶಾಲಾ-ಕಾಲೇಜುಗಳಲ್ಲಿದೆ! ಹೀಗೆ ಮಾಡಿದರೆ ವಿಧಿಯಿಲ್ಲದೆ ಆತನ ಪೋಕರಿತನಕ್ಕೆ ಬ್ರೇಕ್ ಬೀಳಬಹುದು ಎನ್ನುವುದು ಶಾಲಾ ಮುಖ್ಯಸ್ಥರ ಅನಿಸಿಕೆ!