ಮುಖ್ಯವಾಗಿ, ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು ಧರ್ಮಕ್ಕೆ ಸಂಬಂಧಿಸಿದ ಅಂಶಗಳಲ್ಲಿ. ಹಿಂದೂಗಳಲ್ಲಿ ಧಾರ್ಮಿಕ ಸುಧಾರಣೆ ಸುಮಾರು 300 ವರ್ಷಗಳಿಂದಲೂ ನಡೆಯುತ್ತಿದೆ. ಆದರೆ, ಮುಸ್ಲಿಮರಲ್ಲಿ ಇದು ಆಧುನಿಕ ಕಾಲಕ್ಕೆ ತಕ್ಕಂತಿಲ್ಲ. ಅಂದಮಾತ್ರಕ್ಕೆ ದೇಶದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮರನ್ನು ಹೊರದಬ್ಬಬೇಕಾಗಿಲ್ಲ. ಬದಲಿಗೆ, ಅವರನ್ನು ವೈಜ್ಞಾನಿಕ ಮನೋಭಾವ, ಸಮಕಾಲೀನ ಜಗತ್ತಿನ ಒಲವುಗಳು, ವೈಚಾರಿಕತೆ, ವಿಚಾರ ವಿನಿಮಯ, ಸಾಮುದಾಯಿಕ ಜಾಗೃತಿ ಇತ್ಯಾದಿಗಳ ಮೂಲಕ ವರ್ತಮಾನದ ಜಗತ್ತಿನೊಳಕ್ಕೆ ತರಬೇಕು. ಇದು ಹಿಂದೂ- ಮುಸ್ಲಿಂ ಧರ್ಮದ ಪ್ರಶ್ನೆಯಲ್ಲ; ಬದಲಿಗೆ, ಕಾಲಧರ್ಮದ ಪ್ರಶ್ನೆ!