ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ‘ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ’ ಎಂದು ಘೋಷಿಸಿಬಿಟ್ಟ ಮೇಲೆ(ಪ್ರ.ವಾ., ನ.7) ಆ ಪಕ್ಷದ ಮಟ್ಟಿಗೆ ಎರಡನೇ ಮಾತೇ ಇರುವ ಹಾಗಿಲ್ಲ. ನಿನ್ನೆ ಮೊನ್ನೆಯವರೆಗೆ ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರೇ ಗೆಳೆಯರು. 2006ರಲ್ಲಿ ಬಿಜೆಪಿ ಜೊತೆಗಿನ ಜೆಡಿಎಸ್ ಸಖ್ಯದ ಕುರಿತಾಗಿ ಅಸಮಾಧಾನ ಇತ್ತೆಂದು ಸ್ಪಷ್ಟವಾಗಿದ್ದರೂ ಮಗ ಮುಖ್ಯಮಂತ್ರಿ ಆಗುವವರೆಗೆ ಆ ಅಸಮಾಧಾನ ಮಗುಮ್ಮಾಗಿ ಉಳಿಯುವಂತೆ ಕಾಪಾಡಿಕೊಂಡಿದ್ದರು. ಮಗನ 20 ತಿಂಗಳ ರಾಜ್ಯಭಾರ ಮುಗಿದ ಕೂಡಲೇ ಅವರಲ್ಲಿ ಜಾತ್ಯತೀತತೆಯ ಅಗ್ನಿಜ್ವಾಲೆ ಸ್ಫೋಟಗೊಂಡಿತು.