ನೌಕರನ ಅಶಿಸ್ತನ್ನು ಮಾನವೀಯ ದೃಷ್ಟಿಯಿಂದ ಕ್ಷಮಿಸಿ, ಅವರನ್ನು ಮರುನೇಮಕ ಮಾಡಿದ್ದು ಸರ್ಕಾರಿ ಅಧಿಕಾರಿಗಳು ಹೇಗೆ ಪರಿಸ್ಥಿತಿಗೆ ತಕ್ಕಂತೆ ತಮ್ಮ ವಿವೇಚನಾ ಶಕ್ತಿಯನ್ನು ಬಳಸಿ, ಕ್ಷಮಾದಾನಕ್ಕೆ ಅನುವು ಮಾಡಿಕೊಡಬಹುದು ಎಂಬುದಕ್ಕೆ ನಿದರ್ಶನವಾಗಿದೆ. ವಜಾದಂತಹ ಕಠಿಣ ಕ್ರಮ ಎಲ್ಲ ಸಂದರ್ಭದಲ್ಲೂ ಸಮರ್ಥನೀಯವಲ್ಲ ಎಂದು ಮನಗಂಡು ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡ ಅಧಿಕಾರಿಯ ನಡೆ ಮೆಚ್ಚುವಂತಹುದು. ಅಧಿಕಾರದ ಬಲದಿಂದ ಅಧೀನ ಸರ್ಕಾರಿ ನೌಕರರನ್ನು ವಿನಾಕಾರಣ ದಮನ ಮಾಡುವ ಮೇಲಧಿಕಾರಿಗಳು ಈ ಪ್ರಕರಣವನ್ನು ನೋಡಿಯಾದರೂ ಕಣ್ತೆರೆಯಲಿ.